ದೇಶ

ರವಿವರ್ಮನ ಕಲಾಕೃತಿ ಅಸಲಿ: ಕರ್ನಾಟಕ ಹೈಕೋರ್ಟ್‍ಗೆ ವರದಿ

ನವದೆಹಲಿ: ಬೆಂಗಳೂರು ಮೂಲದ ಬಿಡ್ ಆ್ಯಂಡ್ ಹ್ಯಾಮರ್ ಹರಾಜು ಸಂಸ್ಥೆಯು ಮಾರಾಟ ಮಾಡಿದ್ದ ರಾಜಾ ರವಿವರ್ಮನ ಕಲಾಕೃತಿಯು ನಕಲಿಯಲ್ಲ, ಅಸಲಿ ಎಂದು ಕರ್ನಾಟಕ ಹೈಕೋರ್ಟ್ ನೇಮಕ ಮಾಡಿದ್ದ ಮಧ್ಯಸ್ಥಿಕೆದಾರರು ವರದಿ ನೀಡಿದ್ದಾರೆ.

ಜತೆಗೆ, ಕಲಾಕೃತಿಯನ್ನು ಖರೀದಿಸಿರುವ ಕಿರಣ್ ನಾದರ್ ನೇತೃತ್ವದ ಕಂಪನಿಯು ಬಿಡ್ ಆ್ಯಂಡ್ ಹ್ಯಾಮರ್ ಹರಾಜು ಸಂಸ್ಥೆಗೆ ಬಾಕಿಯಿರುವ ರು. 79 ಲಕ್ಷವನ್ನು ಪಾವತಿಸಬೇಕು ಎಂದೂ ಹೇಳಿದ್ದಾರೆ.

ಅಷ್ಟೇ ಅಲ್ಲ, 2 ತಿಂಗಳೊಳಗೆ ಬಾಕಿ ಹಣ ಪಾವತಿಸದೇ ಇದ್ದಲ್ಲಿ, ಇನ್‍ವಾಯ್ಸ್ ಹೊರಡಿಸಿದ ದಿನಾಂಕದಿಂದ ಅಂತಿಮ ಬಾಕಿ ನೀಡಿದ ದಿನಾಂಕದವರೆಗೆ ಬಿಡ್ ಆ್ಯಂಡ್ ಹ್ಯಾಮರ್‍ಗೆ ಶೇ.12 ಬಡ್ಡಿ ದರವನ್ನೂ ನೀಡಬೇಕು ಎಂದೂ ನಾದರ್‍ಗೆ ಸೂಚಿಸಲಾಗಿದೆ.

ಚೆನ್ನೈನ ಎಸ್‍ಕೆಎನ್ ಇನ್‍ವೆಸ್ಟ್‍ಮೆಂಟ್ ಕಂಪನಿಯು ರಾಜಾ ರವಿವರ್ಮನ `ಜಟಾಯು ವಧಂ' ಕಲಾಕೃತಿಯನ್ನು ಖರೀದಿಸಿತ್ತು. ಆದರೆ, ತಜ್ಞರೊಬ್ಬರ ತಾಂತ್ರಿಕ ವರದಿಯನ್ನು ನೋಡಿದ ಬಳಿಕ ಆ ಕಲಾಕೃತಿಯ ಅಸಲಿತನದ ಬಗ್ಗೆ ಪ್ರಶ್ನೆಯೆತ್ತಿತ್ತು.

ಈ ಹಿನ್ನೆಲೆಯಲ್ಲಿ ವಿವಾದ ಪರಿಹರಿಸುವಂತೆ ಕೋರಿ ಬಿಡ್ ಆ್ಯಂಡ್ ಹ್ಯಾಮರ್ ಸಂಸ್ಥೆಯು ಕರ್ನಾಟಕ ಹೈಕೋರ್ಟ್‍ನ ಮೆಟ್ಟಿಲೇರಿತ್ತು. ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯ, ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಆರ್. ಗುರುರಾಜನ್ ಅವರನ್ನು ಮಧ್ಯಸ್ಥಿಕೆದಾರನನ್ನಾಗಿ ನೇಮಿಸಿ, ಕಲಾಕೃತಿ ಅಸಲಿಯೋ, ನಕಲಿಯೋ ಎಂಬ ಬಗ್ಗೆ ವರದಿ ನೀಡುವಂತೆ ಹೇಳಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT