ದೇಶ

ರವಿವರ್ಮನ ಕಲಾಕೃತಿ ಅಸಲಿ: ಕರ್ನಾಟಕ ಹೈಕೋರ್ಟ್‍ಗೆ ವರದಿ

ನವದೆಹಲಿ: ಬೆಂಗಳೂರು ಮೂಲದ ಬಿಡ್ ಆ್ಯಂಡ್ ಹ್ಯಾಮರ್ ಹರಾಜು ಸಂಸ್ಥೆಯು ಮಾರಾಟ ಮಾಡಿದ್ದ ರಾಜಾ ರವಿವರ್ಮನ ಕಲಾಕೃತಿಯು ನಕಲಿಯಲ್ಲ, ಅಸಲಿ ಎಂದು ಕರ್ನಾಟಕ ಹೈಕೋರ್ಟ್ ನೇಮಕ ಮಾಡಿದ್ದ ಮಧ್ಯಸ್ಥಿಕೆದಾರರು ವರದಿ ನೀಡಿದ್ದಾರೆ.

ಜತೆಗೆ, ಕಲಾಕೃತಿಯನ್ನು ಖರೀದಿಸಿರುವ ಕಿರಣ್ ನಾದರ್ ನೇತೃತ್ವದ ಕಂಪನಿಯು ಬಿಡ್ ಆ್ಯಂಡ್ ಹ್ಯಾಮರ್ ಹರಾಜು ಸಂಸ್ಥೆಗೆ ಬಾಕಿಯಿರುವ ರು. 79 ಲಕ್ಷವನ್ನು ಪಾವತಿಸಬೇಕು ಎಂದೂ ಹೇಳಿದ್ದಾರೆ.

ಅಷ್ಟೇ ಅಲ್ಲ, 2 ತಿಂಗಳೊಳಗೆ ಬಾಕಿ ಹಣ ಪಾವತಿಸದೇ ಇದ್ದಲ್ಲಿ, ಇನ್‍ವಾಯ್ಸ್ ಹೊರಡಿಸಿದ ದಿನಾಂಕದಿಂದ ಅಂತಿಮ ಬಾಕಿ ನೀಡಿದ ದಿನಾಂಕದವರೆಗೆ ಬಿಡ್ ಆ್ಯಂಡ್ ಹ್ಯಾಮರ್‍ಗೆ ಶೇ.12 ಬಡ್ಡಿ ದರವನ್ನೂ ನೀಡಬೇಕು ಎಂದೂ ನಾದರ್‍ಗೆ ಸೂಚಿಸಲಾಗಿದೆ.

ಚೆನ್ನೈನ ಎಸ್‍ಕೆಎನ್ ಇನ್‍ವೆಸ್ಟ್‍ಮೆಂಟ್ ಕಂಪನಿಯು ರಾಜಾ ರವಿವರ್ಮನ `ಜಟಾಯು ವಧಂ' ಕಲಾಕೃತಿಯನ್ನು ಖರೀದಿಸಿತ್ತು. ಆದರೆ, ತಜ್ಞರೊಬ್ಬರ ತಾಂತ್ರಿಕ ವರದಿಯನ್ನು ನೋಡಿದ ಬಳಿಕ ಆ ಕಲಾಕೃತಿಯ ಅಸಲಿತನದ ಬಗ್ಗೆ ಪ್ರಶ್ನೆಯೆತ್ತಿತ್ತು.

ಈ ಹಿನ್ನೆಲೆಯಲ್ಲಿ ವಿವಾದ ಪರಿಹರಿಸುವಂತೆ ಕೋರಿ ಬಿಡ್ ಆ್ಯಂಡ್ ಹ್ಯಾಮರ್ ಸಂಸ್ಥೆಯು ಕರ್ನಾಟಕ ಹೈಕೋರ್ಟ್‍ನ ಮೆಟ್ಟಿಲೇರಿತ್ತು. ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯ, ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಆರ್. ಗುರುರಾಜನ್ ಅವರನ್ನು ಮಧ್ಯಸ್ಥಿಕೆದಾರನನ್ನಾಗಿ ನೇಮಿಸಿ, ಕಲಾಕೃತಿ ಅಸಲಿಯೋ, ನಕಲಿಯೋ ಎಂಬ ಬಗ್ಗೆ ವರದಿ ನೀಡುವಂತೆ ಹೇಳಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT