ಕಾಂಗ್ರೆಸ್ 
ದೇಶ

ಆರ್ಥಿಕ ಸಂಕಷ್ಟದಿಂದ ಕಂಗೆಟ್ಟು ಸದಸ್ಯರ ಜೇಬಿಗೆ `ಕೈ' ಹಾಕಿದರು!

ನವದೆಹಲಿ: ಲೋಕಸಭಾ ಚುನಾವಣೆ ಹೀನಾಯ ಸೋಲು ಒಂದು ಕಾಲದ ಶ್ರೀಮಂತ ಪಕ್ಷ ಕಾಂಗ್ರೆಸ್ ಅನ್ನು ಆರ್ಥಿಕವಾಗಿ ಕಂಗೆಡಿಸಿದೆ.

ಚುನಾವಣಾ ಪ್ರಚಾರ ವೇಳೆ ಮಾಡಲಾಗುವ ಸಣ್ಣಪುಟ್ಟ ಖರ್ಚಿಗೂ ಈ ಪಕ್ಷ ಈಗ ಹಿಂದೆ ಮುಂದೆ  ಮುಂದೆ ನೋಡುವ ಸ್ಥಿತಿಯಲ್ಲಿದೆ. ಹಾಗಾಗಿ ಪಕ್ಷದ ದೇಣಿಗೆಗಾಗಿ ತನ್ನ ಮೂರು ಕೋಟಿ ಸದಸ್ಯರ ಪಡೆಯನ್ನೇ `ಬಂಡವಾಳ' ಮಾಡಿಕೊಳ್ಳಲು ಹೊರಟಿದೆ. ಪಕ್ಷದ ದಿನ ನಿತ್ಯದ ಖರ್ಚು, ಚುನಾವಣಾ ವೆಚ್ಚಗಳಿಗಾಗಿ ಸದಸ್ಯರ ಜೇಬಿಗೆ ಕೈ ಹಾಕಲು  ನಿರ್ಧರಿಸಿದೆ.

ಪಕ್ಷದ ಪ್ರತಿಸದಸ್ಯ ಇನ್ನು ಮುಂದೆ ವರ್ಷಕ್ಕೆ ರು. 250 ಅನ್ನು ಸದಸ್ಯತ್ವ ಶುಲ್ಕವಾಗಿ ಪಾವತಿಸುವುದು ಕಡ್ಡಯ ಮಾಡಿ ಸುತ್ತೋಲೆ ಹೊರಡಿಸಿದೆ. ಈವರೆಗೆ ಪ್ರತಿ ಸದಸ್ಯರಿಂದ 5 ರುಪಾಯಿ ಸಂಗ್ರಹಿಸಲಾಗುತ್ತಿತ್ತು. ಆದರೆ ಪಕ್ಷಕ್ಕೆ ಇದೀಗ ಬೇರೆ ಮೂಲಗಳಿಂದ ಹಣ ಹರಿದುಬಾರದೇ ಇರುವುದರಿಂದ ಈ ಮಾರ್ಗ ಅನಿ
ವಾರ್ಯ ಎನ್ನುವಂತಾಗಿದೆ. ಹೇಗೂ ಪಕ್ಷದಲ್ಲಿ 3 ಕೋಟಿ ಸದಸ್ಯರಿದ್ದಾರೆ. ವರ್ಷಕ್ಕೆ ಸರಾಸರಿ ರು. 750 ಕೋಟಿ ಬೇಕಾಗುತ್ತದೆ. ಹೀಗಾಗಿ ಒಬ್ಬೊಬ್ಬರಿಂದ ರು. 250 ಅನ್ನು ಸಂಗ್ರಹಿಸಿದರೆ, ಈ ಗುರಿ ಮುಟ್ಟಬಹುದು ಎಂಬ ಲೆಕ್ಕಾಚಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ರಾಜ್ಯಕ್ಕೂ ಪಾಲು: ಹೀಗೆ ಸಂಗ್ರಹವಾಗುವ ಎಲ್ಲಾ  ಹಣವೂ ಹೈಕಮಾಂಡ್‍ಗೆ ಸೇರುವುದಿಲ್ಲ. ಇಲ್ಲಿ ಆಯಾ ರಾಜ್ಯಗಳಿಗೂ ಪಾಲಿದೆ. ಆದರೆ, ಈ ಹಣದಲ್ಲಿ ಹೈಕಮಾಂಡ್‍ಗೆ ಮಹತ್ವದ ಪಾಲು ಲಭಿಸಲಿದೆ. ಅಂದರೆ 75:25 ಮಾದರಿಯಲ್ಲಿ ಈ ಹಣ ಹಂಚಿಕೊಳ್ಳಲಾಗುತ್ತದೆ. ಇದರಿಂದ ಶೇ. 75ರಷ್ಟು ಹಣ ದೆಹಲಿ ಸೇರದರೆ, ಶೇ. 25ರಷ್ಟು ಹಣ ಆಯಾ ರಾಜ್ಯಗಳ ಪಕ್ಷದ ಕಾರ್ಯಗಳಿಗೆ ಬಳಸಿಕೊಳ್ಳಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT