ಡಿ.7ರಂದು ಬಂಧಿತನಾದ ಆರೋಪಿ ಉಬರ್ ಕ್ಯಾಬ್ ಚಾಲಕ ಶಿವಕುಮಾರ್ 
ದೇಶ

ಉಬರ್ ಕ್ಯಾಬ್: ಅತ್ಯಾಚಾರ ಮಾಡಿದ್ದು ಇವನೇ ಎಂದ ಯುವತಿ

ತನ್ನನ್ನು ಅತ್ಯಾಚಾರ ಮಾಡಿದ್ದು ಇವನೇ ಎಂದು ಉಬರ್ ಕ್ಯಾಬ್ ಚಾಲಕನಿಂದ...

ನವದೆಹಲಿ: ತನ್ನನ್ನು ಅತ್ಯಾಚಾರ ಮಾಡಿದ್ದು ಇವನೇ ಎಂದು ಉಬರ್ ಕ್ಯಾಬ್ ಚಾಲಕನಿಂದ ಅತ್ಯಾಚಾರಕ್ಕೊಳಗಾದ ಯುವತಿ ಹೇಳಿದ್ದಾಳೆ.

ಚಾರ್ಚ್ ಶೀಟ್ ಹಾಕುವುದಕ್ಕೂ ಮೊದಲು ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಸಲುವಾಗಿ ಡಿ.8 ರಂದು ಯುವತಿಯನ್ನು ತೀಸ್ ಹಜಾರಿ ನ್ಯಾಯಾಲಯಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಕ್ಯಾಬ್ ಚಾಲಕನನ್ನು ಕಂಡ ಯುವತಿ ಆತನನ್ನು ಗುರ್ತಿಸಿ, 'ನನ್ನನ್ನು ಅತ್ಯಾಚಾರ ಮಾಡಿದ ಭೂತ ಇವನೇ' ಎಂದು ಕೆಂಡಮಂಡಲವಾಗಿ ನ್ಯಾಯಾಲಯದ ಹೊರಾಂಗಣದಲ್ಲಿ ಕೂಗಾಡಿದಳು.

ಈ ವೇಳೆ ಸ್ಥಳದಲ್ಲಿದ್ದ ಆರೋಪಿ ಶಿವಕುಮಾರ್ ಯಾದವ್ ನನಗೆ ಉಸಿರುಗಟ್ಟಿದ್ದಂತೆ ಆಗುತ್ತಿದ್ದು, ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿ ತನಿಖೆಗೆ ಸಹಕರಿಸಲಿಲ್ಲ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.

ಗುರ್‌ಗಾಂವ್‌ನ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ (27) ಕೆಲಸ ಮುಗಿಸಿ ರಾತ್ರಿ ನವದೆಹಲಿಯ ಇಂದರ್‌ಲೋಕ ಪ್ರದೇಶದಲ್ಲಿರುವ ಮನೆಗೆ ಉಬರ್ ಟ್ಯಾಕ್ಸಿ ಯ ಮೂಲಕ ಹೋಗುತ್ತಿದ್ದಳು. ಕಾರಿನ ಹಿಂದಿನ ಸೀಟಿನಲ್ಲಿದ್ದ ಆಕೆ ನಿದ್ರೆ ಹೋಗಿದ್ದನ್ನು ಕಂಡ ಟ್ಯಾಕ್ಸಿ ಚಾಲಕ ಕಾರನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಯುವತಿಗೆ ಥಳಿಸಿ ಅತ್ಯಾಚಾರ ಎಸಗಿ ನಂತರ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಡಿ.7ರಂದು ಅತ್ಯಾಚಾರ ಎಸಗಿದ್ದ ಉಬರ್ ಕ್ಯಾಬ್ ಚಾಲಕ ಶಿವಕುಮಾರ್ (32) ಎಂಬಾತನನ್ನು ಬಂಧಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ 100 ಪುಟಗಳ ಚಾರ್ಚ್‌ಶೀಟ್ ದಾಖಲಿಸಲಾಗಿದ್ದು, 44 ಪ್ರಮುಖ ದಾಖಲೆಗಳನ್ನು ದೆಹಲಿ ಪೊಲೀಸರು ಸಂಗ್ರಹಿಸಿದ್ದಾರೆ. ಆರೋಪಿ ಶಿವಕುಮಾರ್ ಯಾದವ್ ವಿರುದ್ಧ ಸೆಕ್ಷನ್ 376 (ಅತ್ಯಾಚಾರ), 366 (ಅಪಹರಣ), 506 ( ಪ್ರಾಣ ಬೆದರಿಕೆ), 323 (ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!