ಗಲ್ಲು ಶಿಕ್ಷೆಗೆ ಗುರಿಯಾದ ಉಗ್ರ ಯಾಕೂಬ್ ಮೆಮನ್ 
ದೇಶ

ಉಗ್ರ ಮೆಮನ್ ಪತ್ನಿಗೆ ರಾಜ್ಯಸಭೆಗೆ ಸ್ಥಾನ ನೀಡುವ ಹೇಳಿಕೆ:ಮಹಮದ್ ಫಾರೂಕ್ ಸಸ್ಪೆಂಡ್

1993ರ ಮುಂಬಯಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಉಗ್ರ ಯಾಕೂಬ್ ಮೆಮನ್ ಪತ್ನಿಗೆ ರಾಜ್ಯಸಭೆಯಲ್ಲಿ ಸದಸ್ಯೆ ಸ್ಥಾನ ...

ಮುಂಬಯಿ: 1993ರ ಮುಂಬಯಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಉಗ್ರ ಯಾಕೂಬ್ ಮೆಮನ್ ಪತ್ನಿಗೆ ರಾಜ್ಯಸಭೆಯಲ್ಲಿ ಸದಸ್ಯೆ ಸ್ಥಾನ ನೀಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಮೊಹಮದ್ ಫಾರೂಕ್ ಘೋಶಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಈ ಸಂಬಂಧ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಗೆ ಪತ್ರ ಬರೆದಿದ್ದ ಮೊಹಮದ್ ಫಾರೂಕ್ ತಮ್ಮಪಕ್ಷದಿಂದ ಯಾಕೂಬ್ ಪತ್ನಿ ರಾಹೀನ್ ರನ್ನು ರಾಜ್ಯಸಭಾ ಸದಸ್ಯೆಯನ್ನಾಗಿ ಮಾಡಬೇಕೆಂದು ಬೇಡಿಕೆಯಿಟ್ಟಿದ್ದರು. ಪಕ್ಷದ ಯಾವುದೇ ಮುಖಂಡರ ಜೊತೆ ಸಮಾಲೋಚಿಸದೆ ಮುಲಾಯಂ ಸಿಂಗ್ ಯಾದವ್ ಅವರಿಗೆ ಪತ್ರ ಬರೆದಿದ್ದರು.

ನಾಗಪುರ ಕೇಂದ್ರ ಕಾರಾಗೃಹದಲ್ಲಿ ಯಾಕೂಬ್ ಮೆಮನ್ ನನ್ನು ಗಲ್ಲಿಗೇರಿಸಿದ ನಂತರ ಫಾರೂಕ್ ಈ ಪತ್ರ ಬರೆದಿದ್ದರು. ಯಾಕೂಬ್ ಪತ್ನಿ ರಾಹೀನ್ ಮುಗ್ಧೆ ಹಾಗೂ ಅಸಹಾಯಕಿ. ಹಲವು ವರ್ಷಗಳ ಕಾಲ ಆಕೆ ಸೆರೆವಾಸದಲ್ಲಿದ್ದಳು. ಇಂದಿನ ಆಕೆಯ ಸ್ಥಿತಿ ನೋಡಿ ನನಗೆ ಬೇಸರವಾಗಿದೆ. ಹೀಗಾಗಿ ರಾಜ್ಯಸಭೆಯಲ್ಲಿ ಸಂಸದ್ ಸದಸ್ಯೆಯನ್ನಾಗಿ ಮಾಡಬೇಕು. ಆ ಮೂಲಕ ಅಸಹಾಯಕರ ಪರ ದನಿ ಎತ್ತುವಂತೆ ಮಾಡಬೇಕು ಎಂದು ಪತ್ರದಲ್ಲಿ ಬರೆದಿದ್ದರು ಎನ್ನಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ಅಬು ಅಸೀಂ ಅಜ್ಮಿ ಹೇಳಿಕೆ ಬಗ್ಗೆ ವಿವರಣೆ ನೀಡುವಂತೆ ತಿಳಿಸಿದ್ದಾರೆ, ಇನ್ನು ಫಾರೂಕ್ ಹೇಳಿಕೆಗೆಗೂ ಪಕ್ಷದ ನಿಲುವಿಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BDA, BMRDA ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆಗೆ ಬೆಲೆಯೇ ಇಲ್ಲ: ರಾಮಲಿಂಗಾ ರೆಡ್ಡಿ ಬಳಿಕ ಕೃಷ್ಣ ಬೈರೇಗೌಡ ಸಿಟ್ಟು, ಹೈಕಮಾಂಡ್‌ಗೆ ದೂರು..?

H-1B ವೀಸಾ ಅರ್ಜಿದಾರರಿಗೆ ಬಿಗ್ ರಿಲೀಫ್: ಟ್ರಂಪ್ ಹೇರಿದ್ದ ಭಾರೀ ಶುಲ್ಕ ರದ್ದು, 'fast-track fee' ಕಾನೂನುಬಾಹಿರ ಎಂದ ಫೆಡರಲ್ ಕೋರ್ಟ್

ಅಮೆರಿಕಾ ಜೊತೆ ಯಾಕೆ ಸಂಘರ್ಷ?’: ಟ್ರಂಪ್ ಒತ್ತಡಕ್ಕೆ ಮಣಿದ ಇಸ್ರೇಲ್, ಇರಾನ್ ಮೇಲಿನ ಭಾರೀ ದಾಳಿ ಕೈಬಿಟ್ಟ ನೆತನ್ಯಾಹು

ಸಿದ್ದರಾಮಯ್ಯ ನಿರ್ಗಮನದ ನಂತರ ಬಿಜೆಪಿಯಿಂದ ಕುರುಬ ಸಮುದಾಯದ ನಾಗರಾಜ್ ಆಯ್ಕೆ: ದೇವೇಗೌಡರ 'ಸುವರ್ಣ ರಾಜಕೀಯ'ದ ಯುಗಾಂತ್ಯ!

ಸಿಎಂಗೆ ಮುಖ್ಯ ಸಲಹೆಗಾರರಾಗಿ ಸುನೀಲ್‌ ಕನುಗೋಳು ನೇಮಕ: ಸಂಪುಟ ದರ್ಜೆ ಸಚಿವರ ಸ್ಥಾನಮಾನ

SCROLL FOR NEXT