ಪ್ರಣಬ್ ಮುಖರ್ಜಿ 
ದೇಶ

ಪ್ರಣಬ್ ಮೊಮ್ಮಗಳ ಕೆಲಸಕ್ಕೆ ಎಸ್ಸಾರ್ ಮೇಲೆ ಇತ್ತು ಒತ್ತಡ?

ಸಚಿವೆ ಸುಷ್ಮಾ ಸ್ವರಾಜ್- ಲಲಿತ್ ಮೋದಿ ವಿವಾದ ಸುದ್ದಿಯಾಗುತ್ತಿರುವ ನಡುವೆಯೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಮೊಮ್ಮಗಳ ಉದ್ಯೋಗಕ್ಕಾಗಿ...

ನವದೆಹಲಿ: ಸಚಿವೆ ಸುಷ್ಮಾ ಸ್ವರಾಜ್- ಲಲಿತ್ ಮೋದಿ ವಿವಾದ ಸುದ್ದಿಯಾಗುತ್ತಿರುವ ನಡುವೆಯೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಮೊಮ್ಮಗಳ ಉದ್ಯೋಗಕ್ಕಾಗಿ ಎಸ್ಸಾರ್ ಕಂಪನಿ ಮೇಲೆ ಒತ್ತಡ ಹೇರಿದ್ದರು ಎಂಬ ವಿಚಾರ ಏಕೆ ಬಿಸಿಯೇರಲಿಲ್ಲ ಎಂಬ ವಿಚಾರ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗಿದೆ. ಪ್ರಣಬ್ ಮೊಮ್ಮಗಳು ಸುಚಿಸ್ಮಿತಾ ಮುಖರ್ಜಿಗೆ ಎಸ್ಸಾರ್ ಕಂಪನಿಯ ಲಂಡನ್ ಕಚೇರಿಯಲ್ಲಿ ಕೆಲಸ ಕೊಡಿಸುವ ಬಗ್ಗೆ ರಾಷ್ಟ್ರಪತಿ ಭವನ ಮತ್ತು ಎಸ್ಸಾರ್ ಗ್ರೂಪ್ ನಡುವೆ ನಡೆದ ಇ-ಮೇಲ್ ಸಂದೇಶಗಳನ್ನು `ದಿ ಕಾರವಾನ್' ಪ್ರಕಟಿಸಿದೆ. ರಾಷ್ಟ್ರಪತಿ ಪ್ರಣಬ್‍ರ ಆಪ್ತ ಕಾರ್ಯದರ್ಶಿ ಪ್ರದೀಪ್ ಗುಪ್ತಾ ಅವರು 2013ರ ಸೆ.26ರಂದು ಸುಚಿಸ್ಮಿತಾಳ ಪಾಸ್ ಪೋರ್ಟ್ ಅನ್ನು ಎಸ್ಸಾರ್ ಗ್ರೂಪ್‍ನ ಅಧಿಕಾರಿ ಅಲೋಕ್ ಚೌಹಾಣ್ ರಿಗೆ ಕಳುಹಿಸಿದ್ದರು ಎಂಬುದನ್ನೂ ಪತ್ರಿಕೆ ವರದಿ ಮಾಡಿದೆ.ಜತೆಗೆ, ಸುಚಿಸ್ಮಿತಾಳನ್ನು ಇಂಟರ್ನಿಯಾಗಿ ನೇಮಕ ಮಾಡುವುದೋ ಅಥವಾ ಕಾಯಂ ಆಗಿ ಕೆಲಸಕ್ಕಿಟ್ಟುಕೊಳ್ಳುವುದೋ ಎಂಬ ಬಗ್ಗೆ ಎಸ್ಸಾರ್ ಗ ಗ್ರೂಪ್‍ನ ಉನ್ನತ  ಅಧಿಕಾರಿಗಳ ನಡುವೆ ನಡೆದ ಸಂಭಾಷಣೆಗಳು, ಇಮೇಲ್‍ಗಳೂ ಪತ್ರಿಕೆಗೆ ದೊರೆತಿವೆ. ಇದಕ್ಕೂ ಮೊದಲು ಎಸ್ಸಾರ್ ಗ್ರೂಪ್ನ ಸುನೀಲ್ ಬಜಾಜ್  ಅವರು ಕಂಪನಿಯ ಹಿರಿಯ ಹಿರಿಯ ಉಪಾಧ್ಯಕ್ಷ ರಾಹುಲ್  ತನೇಜಾಗೆ ಅತ್ಯಂತ ರಹಸ್ಯ ಹಾಗೂ ಪ್ರಮುಖ ಇ-ಮೇಲ್ ಕಳುಹಿಸಿದ್ದು, ``ಗೌರವಾನ್ವಿತ ರಾಷ್ಟ್ರಪತಿಯಿಂದ ನನ್ನ ಮೇಲೆ ಬಹಳಷ್ಟು ಒತ್ತಡ ಬರುತ್ತಿದ್ದು, ಸುಚಿಸ್ಮಿತಾಳಿಗೆ ಕೆಲಸ ಕೊಡುವ ಬಗ್ಗೆ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಿ' ಎಂದು ಕೋರಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT