ಮಸೀದಿಯಲ್ಲಿ ನಡೆದ ದಾಳಿಯಲ್ಲಿ ಮೃತರಾದವರ ಶವಸಂಸ್ಕಾರದ ವೇಳೆ ರೋದಿಸುತ್ತಿರುವ ಸಂಬಂಧಿಕರು (ಕೃಪೆ: ರಾಯಿಟರ್ಸ್) 
ದೇಶ

ಕುವೈತ್ ಮಸೀದಿ ದಾಳಿಕೋರ ಸೌದಿ ಪ್ರಜೆ

ಕುವೈತ್‌ನ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದವ ಸೌದಿ ಪ್ರಜೆ ಎಂದು ಆಂತರಿಕ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ...

ದುಬೈ: ಕುವೈತ್‌ನ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದವ ಸೌದಿ ಪ್ರಜೆ  ಎಂದು ಆಂತರಿಕ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ.

ಕಳೆದ ಶುಕ್ರವಾರ ಅಲ್ ಇಮಾಮ್ ಅಲ್ ಸಾದೇಖ್ ಮಸೀದಿ ಮೇಲೆ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು , 227 ಮಂದಿ ಗಾಯಗೊಂಡಿದ್ದರು ಎಂದು ಸಚಿವಾಲಯ ಹೇಳಿದೆ.

ದಾಳಿಕೋರನನ್ನು 'ಫಾದ್ ಸುಸೈಮನೆ ಅಬ್ದುಲ್ಮೊಹ್ಸೆನ್ ಅಲ ಖುಬಾಆ ಎಂದು ಗುರುತಿಸಲಾಗಿದೆ,' ಎಂದು ಸಚಿವಾಲಯದ ಹೇಳಿಕೆಯನ್ನು ಮಾಧ್ಯಮವೊಂದು ಪ್ರಕಟಿಸಿದೆ.

ಕುವೈತ್ ವಿಮಾನ ನಿಲ್ದಾಣದ ಮೂಲಕ ಶುಕ್ರವಾರ ಮುಂಜಾನೆಯೇ ಖುಬಾಅ ದೇಶವನ್ನು ಪ್ರವೇಶಿಸಿದ್ದಾನೆ. ಖುಬಾಅ ತಂಗಿದ್ದ ಮನೆಯ ಮಾಲೀಕ ಹಾಗೂ ಆತನಿಗೆ ಬಾಂಬ್ ಸಾಗಿಸಲು ಸಹಕರಿಸಿದ ವಾಹನ ಚಾಲಕನನ್ನು ಬಂಧಿಸಲಾಗಿದೆ. ಕುವೈತ್‌ ಪ್ರಜೆಯಾದ ದಾಳಿಕೋರನನ್ನು ಆಂತರಿಕ ಸಚಿವಾಲಯ ಉಗ್ರ ಮತ್ತು ವಕ್ರ ವಿಚಾರಗಳನ್ನು ಹೊಂದಿರುವವ ಎಂದಿದೆ.

ಬಂಧಿತ ವಾಹನದ ಚಾಲಕ ಅಬ್ದುಲ ರಹಮಾನ್ ಸಬಹ ಈಡನ್ ಸೌದ್‌ನನ್ನು 1989ರಿಂದ ಅಕ್ರಮವಾಗಿ ವಾಸಿಸುತ್ತಿರುವವನು ಹಾಗೂ ವಾಹನದ ಮಾಲೀಕನನ್ನು 'ನೆಲೆ ಇಲ್ಲದ' ನಿವಾಸಿ ಎಂದು ಗುರುತಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಮಮತಾಗೆ ಬಿಗ್ ಶಾಕ್; TMC ವಿಭಜನೆ? ತೃಣಮೂಲ ಕಾಂಗ್ರೆಸ್ ನ 50 ಶಾಸಕರು, 20 ಸಂಸದರು ಬಿಜೆಪಿ ಸೇರ್ಪಡೆ?

KPCCಗೆ ಮೇಜರ್ ಸರ್ಜರಿ: ನಟಿ ಭಾವನಾ, ನಿಕೇತ್ ರಾಜ್ ಮೌರ್ಯ ಸೇರಿ 31 ಪದಾಧಿಕಾರಿಗಳಿಗೆ ಗೇಟ್‌ಪಾಸ್‌!

ನಾವು ಕಳವಳ ವ್ಯಕ್ತಪಡಿಸಿದೆವು, ಆದ್ರೆ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದರು: ಸಚಿವ ಎಚ್.ಕೆ.ಪಾಟೀಲ್

ಗ್ಯಾಂಗ್ ರೇಪ್ ಪ್ರಕರಣ: ವಿವಾದಿತ ದೇವಮಾನವ Asaram Bapu ಖುಲಾಸೆ

SCROLL FOR NEXT