ಮಸೀದಿಯಲ್ಲಿ ನಡೆದ ದಾಳಿಯಲ್ಲಿ ಮೃತರಾದವರ ಶವಸಂಸ್ಕಾರದ ವೇಳೆ ರೋದಿಸುತ್ತಿರುವ ಸಂಬಂಧಿಕರು (ಕೃಪೆ: ರಾಯಿಟರ್ಸ್) 
ದೇಶ

ಕುವೈತ್ ಮಸೀದಿ ದಾಳಿಕೋರ ಸೌದಿ ಪ್ರಜೆ

ಕುವೈತ್‌ನ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದವ ಸೌದಿ ಪ್ರಜೆ ಎಂದು ಆಂತರಿಕ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ...

ದುಬೈ: ಕುವೈತ್‌ನ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದವ ಸೌದಿ ಪ್ರಜೆ  ಎಂದು ಆಂತರಿಕ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ.

ಕಳೆದ ಶುಕ್ರವಾರ ಅಲ್ ಇಮಾಮ್ ಅಲ್ ಸಾದೇಖ್ ಮಸೀದಿ ಮೇಲೆ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು , 227 ಮಂದಿ ಗಾಯಗೊಂಡಿದ್ದರು ಎಂದು ಸಚಿವಾಲಯ ಹೇಳಿದೆ.

ದಾಳಿಕೋರನನ್ನು 'ಫಾದ್ ಸುಸೈಮನೆ ಅಬ್ದುಲ್ಮೊಹ್ಸೆನ್ ಅಲ ಖುಬಾಆ ಎಂದು ಗುರುತಿಸಲಾಗಿದೆ,' ಎಂದು ಸಚಿವಾಲಯದ ಹೇಳಿಕೆಯನ್ನು ಮಾಧ್ಯಮವೊಂದು ಪ್ರಕಟಿಸಿದೆ.

ಕುವೈತ್ ವಿಮಾನ ನಿಲ್ದಾಣದ ಮೂಲಕ ಶುಕ್ರವಾರ ಮುಂಜಾನೆಯೇ ಖುಬಾಅ ದೇಶವನ್ನು ಪ್ರವೇಶಿಸಿದ್ದಾನೆ. ಖುಬಾಅ ತಂಗಿದ್ದ ಮನೆಯ ಮಾಲೀಕ ಹಾಗೂ ಆತನಿಗೆ ಬಾಂಬ್ ಸಾಗಿಸಲು ಸಹಕರಿಸಿದ ವಾಹನ ಚಾಲಕನನ್ನು ಬಂಧಿಸಲಾಗಿದೆ. ಕುವೈತ್‌ ಪ್ರಜೆಯಾದ ದಾಳಿಕೋರನನ್ನು ಆಂತರಿಕ ಸಚಿವಾಲಯ ಉಗ್ರ ಮತ್ತು ವಕ್ರ ವಿಚಾರಗಳನ್ನು ಹೊಂದಿರುವವ ಎಂದಿದೆ.

ಬಂಧಿತ ವಾಹನದ ಚಾಲಕ ಅಬ್ದುಲ ರಹಮಾನ್ ಸಬಹ ಈಡನ್ ಸೌದ್‌ನನ್ನು 1989ರಿಂದ ಅಕ್ರಮವಾಗಿ ವಾಸಿಸುತ್ತಿರುವವನು ಹಾಗೂ ವಾಹನದ ಮಾಲೀಕನನ್ನು 'ನೆಲೆ ಇಲ್ಲದ' ನಿವಾಸಿ ಎಂದು ಗುರುತಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT