ಹೋಳಿ ಸಂಭ್ರಮ 
ದೇಶ

ಕರಾಚಿಯಲ್ಲಿ ಹಿಂದೂಗಳ ಹೋಳಿ ಆಚರಣೆ: ಪಾಕ್ ವಿದ್ಯಾರ್ಥಿಗಳಿಂದ ಮಾನವ ಕವಚ

ಪ್ರತಿ ವರ್ಷದಂತೆ ಪಾಕಿಸ್ತಾನದ ಕರಾಚಿಯ ವಿಶ್ವಖ್ಯಾತ ಸ್ವಾಮಿ ನಾರಾಯಣ್ ಮಂದಿರದಲ್ಲಿ ಹಿಂದೂಗಳು ವೈಭವಯುತವಾಗಿ ಹೋಳಿ ಆಚರಿಸಿದರು.

ಇಸ್ಲಾಮಾಬಾದ್: ಪ್ರತಿ ವರ್ಷದಂತೆ ಪಾಕಿಸ್ತಾನದ ಕರಾಚಿಯ ವಿಶ್ವಖ್ಯಾತ ಸ್ವಾಮಿ ನಾರಾಯಣ್ ಮಂದಿರದಲ್ಲಿ ಹಿಂದೂಗಳು ವೈಭವಯುತವಾಗಿ ಹೋಳಿ ಆಚರಿಸಿದರು.

ಹೋಳಿ ಆಚರಣೆ ಹಿನ್ನೆಲೆಯಲ್ಲಿ ಉಗ್ರರಿಂದ ಆಕ್ರಮಣಕ್ಕೆ ತುತ್ತಾಗುವ ಭಯವಿದ್ದರಿಂದ ಅಲ್ಲಿನ ವಿದ್ಯಾರ್ಥಿ ಸಂಘಟನೆ ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಆಚರಣೆಗೆ ಬಿಗಿ ಬಂದೋಬಸ್ತ್ ವಹಿಸಿತ್ತು.

ಪಾಕಿಸ್ತಾನದ ನ್ಯಾಷನಲ್ ಸ್ಟೂಡೆಂಟ್ಸ್ ಫೆಡರೇಶನ್ ಸಂಘಟನೆಯ ವಿದ್ಯಾರ್ಥಿಗಳು ಶುಕ್ರವಾರ ಮಂದಿರ ಸುತ್ತಮುತ್ತ ಮಾನವ ಕವಚ ನಿರ್ಮಿಸಿದರು. ಈ ಮೂಲಕ, ಅಲ್ಪಸಂಖ್ಯಾತ ಸಮುದಾಯದಲ್ಲಿ ಮನೆಮಾಡಿದ್ದ ಅಂಜಿಕೆಯನ್ನು ಹೋಗಲಾಡಿಸುವ ಪ್ರಯತ್ನ ನಡೆದದ್ದು ವಿಶೇಷವಾಗಿತ್ತು.

ಪಾಕಿಸ್ತಾನದಲ್ಲಿ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ನಾಶಗೊಳಿಸುವ ಕಾರ್ಯಗಳು ಹೆಚ್ಚಾಗುತ್ತಿವೆ. ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆ ಪ್ರಮಾಣ ದಿನೇದಿನೇ ಕುಸಿಯುತ್ತಿದೆ. ಜೊತೆಗೆ ಮತಾಂತರ ಭೂತ ಹಿಂದೂಗಳನ್ನು ಅದರಲ್ಲೂ ಹಿಂದೂ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿದೆ.

ಹಿಂದೂಗಳು ಬಹಿರಂಗವಾಗಿ ಧಾರ್ಮಿಕ ಆಚರಣೆ ಮಾಡಿಕೊಳ್ಳಲು ಹೆದರಬೇಕಾದ ಸ್ಥಿತಿ ಇದೆ. ಇಂಥ ಘಳಿಗೆಯಲ್ಲಿ ಅವರಿಗೆ ಸ್ಥೈರ್ಯ ತುಂಬುವ ಕೆಲಸವನ್ನ ನಾವು ಮಾಡುತ್ತಿದ್ದೇವೆ ಎಂದು ಎನ್'ಎಸ್ಎಫ್ ಸಂಘಟನೆಯ ಮುಖಂಡರು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!