ರಾಜನಾಥ್ ಸಿಂಗ್ 
ದೇಶ

ಭಾರತೀಯ ಮುಸ್ಲಿಂರನ್ನು ಸೆಳೆಯುವಲ್ಲಿ ಇಸಿಸ್ ವಿಫಲ: ರಾಜನಾಥ್ ಸಿಂಗ್

ಅಮಾನವೀಯ ಕೃತ್ಯಗಳಿಂದ ಪ್ರಪಂಚವನ್ನೇ ದಂಗು ಪಡಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಭಾರತೀಯ ಮುಸ್ಲಿಂರನ್ನು ತನ್ನತ್ತ ಆರ್ಕಷಿಸುವಲ್ಲಿ ವಿಫಲವಾಗಿದೆ...

ಜೈಪುರ್: ಅಮಾನವೀಯ ಕೃತ್ಯಗಳಿಂದ ಪ್ರಪಂಚವನ್ನೇ ದಂಗು ಪಡಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಭಾರತೀಯ ಮುಸ್ಲಿಂರನ್ನು ತನ್ನತ್ತ ಆರ್ಕಷಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಯೋತ್ಪಾದನೆ ಕುರಿತಂತೆ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತೀಯ ಮುಸ್ಲಿಂರು ದೇಶಪ್ರೇಮಿಗಳಾಗಿದ್ದು ಅವರು ದೇಶವಿದ್ರೋಹ ಕೆಲಸಗಳನ್ನು ಮಾಡಲು ಬಯಸುವುದಿಲ್ಲ. ಉಗ್ರಗಾಮಿತ್ವ ಅವರ ಪ್ರಕೃತಿಗೆ ವಿರೋಧವಾಗಿದೆ ಎಂದರು.

ಗುಪ್ತಚರ ಇಲಾಖೆ ಪ್ರಕಾರ, ಬೆರಳೆಣಿಕೆಯಷ್ಟು ಭಾರತೀಯ ಮುಸ್ಲಿಂ ಯುವಕರು ಇಸಿಸ್ ಉಗ್ರ ಸಂಘಟನೆ ಸೇರಿದ್ದರು. ಬಳಿಕ ಕುಟುಂಬಸ್ಥರ ಮನವೊಲಿಕೆಯ ನಂತರ ಕೆಲವರು ಇಸಿಸ್ ತೊರೆದು ವಾಪಸ್ಸಾಗಿದ್ದಾರೆ ಎಂದರು. ಅಲ್ಲದೆ ಇಂಡೋನೇಷಿಯ ಬಳಿಕ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರ ಭಾರತ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT