ರಾಜನಾಥ್ ಸಿಂಗ್ 
ದೇಶ

ಭಾರತೀಯ ಮುಸ್ಲಿಂರನ್ನು ಸೆಳೆಯುವಲ್ಲಿ ಇಸಿಸ್ ವಿಫಲ: ರಾಜನಾಥ್ ಸಿಂಗ್

ಅಮಾನವೀಯ ಕೃತ್ಯಗಳಿಂದ ಪ್ರಪಂಚವನ್ನೇ ದಂಗು ಪಡಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಭಾರತೀಯ ಮುಸ್ಲಿಂರನ್ನು ತನ್ನತ್ತ ಆರ್ಕಷಿಸುವಲ್ಲಿ ವಿಫಲವಾಗಿದೆ...

ಜೈಪುರ್: ಅಮಾನವೀಯ ಕೃತ್ಯಗಳಿಂದ ಪ್ರಪಂಚವನ್ನೇ ದಂಗು ಪಡಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಭಾರತೀಯ ಮುಸ್ಲಿಂರನ್ನು ತನ್ನತ್ತ ಆರ್ಕಷಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಯೋತ್ಪಾದನೆ ಕುರಿತಂತೆ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತೀಯ ಮುಸ್ಲಿಂರು ದೇಶಪ್ರೇಮಿಗಳಾಗಿದ್ದು ಅವರು ದೇಶವಿದ್ರೋಹ ಕೆಲಸಗಳನ್ನು ಮಾಡಲು ಬಯಸುವುದಿಲ್ಲ. ಉಗ್ರಗಾಮಿತ್ವ ಅವರ ಪ್ರಕೃತಿಗೆ ವಿರೋಧವಾಗಿದೆ ಎಂದರು.

ಗುಪ್ತಚರ ಇಲಾಖೆ ಪ್ರಕಾರ, ಬೆರಳೆಣಿಕೆಯಷ್ಟು ಭಾರತೀಯ ಮುಸ್ಲಿಂ ಯುವಕರು ಇಸಿಸ್ ಉಗ್ರ ಸಂಘಟನೆ ಸೇರಿದ್ದರು. ಬಳಿಕ ಕುಟುಂಬಸ್ಥರ ಮನವೊಲಿಕೆಯ ನಂತರ ಕೆಲವರು ಇಸಿಸ್ ತೊರೆದು ವಾಪಸ್ಸಾಗಿದ್ದಾರೆ ಎಂದರು. ಅಲ್ಲದೆ ಇಂಡೋನೇಷಿಯ ಬಳಿಕ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರ ಭಾರತ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT