ಭಾರತೀಯ ನೌಕಾಪಡೆ (ಸಂಗ್ರಹ ಚಿತ್ರ) 
ದೇಶ

ಯುದ್ಧಗ್ರಸ್ಥ ಯೆಮೆನ್ ನಿಂದ 349 ಭಾರತೀಯರ ರಕ್ಷಣೆ

ಆಂತರಿಕ ಸಂಘರ್ಷದಿಂದ ನಲುಗುತ್ತಿರುವ ಯೆಮೆನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರ ಪೈಕಿ 349 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳ ತಿಳಿಸಿವೆ...

ನವದೆಹಲಿ: ಆಂತರಿಕ ಸಂಘರ್ಷದಿಂದ ನಲುಗುತ್ತಿರುವ ಯೆಮೆನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರ ಪೈಕಿ 349 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳ ತಿಳಿಸಿವೆ.

ಯೆಮೆನ್ ವಿರುದ್ಧ ಸಮರ ಸಾರಿರುವ ಸೌದಿ ಅರೇಬಿಯಾ ವಾಯುದಾಳಿ ನಡೆಸುತ್ತಿದ್ದು, ಯೆಮೆನ್ ಇದೀಗ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಹೀಗಾಗಿ ಯೆಮೆನ್ ಪ್ರಾಣಾಪಾಯಕ್ಕೆ ಸಿಲುಕಿದ್ದ ಭಾರತೀಯರ ರಕ್ಷಣೆಗೆ ಮುಂದಾಗಿದ್ದ ಕೇಂದ್ರ ಸರ್ಕಾರ ನಿನ್ನೆ ಭಾರತೀಯ ನೌಕಾಪಡೆಯ ಐಎನ್ ಎಸ್  ಸುಮಿತ್ರಾ ಸೇರಿದಂತೆ ಒಟ್ಟು ನಾಲ್ಕು ಹಡಗಳನ್ನು ಮತ್ತು 4 ವಿಮಾನಗಳನ್ನು ಯೆಮೆನ್ ಗೆ ರವಾನೆ ಮಾಡಿತ್ತು. ಅಡೇನ್  ಬಂದರಿನಲ್ಲಿ ಲಂಗರು ಹಾಕಿದ್ದ ಐಎನ್ ಎಸ್ ಸುಮಿತ್ರಾ ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿ 349 ಭಾರತೀಯರನ್ನು ರಕ್ಷಣೆ ಮಾಡಿದೆ.

101 ಮಹಿಳೆಯರು ಮತ್ತು 28 ಮಂದಿ ಮಕ್ಕಳನ್ನು ಒಳಗೊಂಡಂತೆ ಒಟ್ಟು 349 ಮಂದಿ ಭಾರತಿಯರನ್ನು ರಾತ್ರಿ ಸುಮಾರು 9.45ರಲ್ಲಿ ಅಡೇನ್ ಬಂದರಿನಲ್ಲಿ ಒಟ್ಟು ಗೂಡಿಸಿ ಡ್ಜಿಬೌಟಿಗೆ ರವಾನೆ ಮಾಡಲಾಗಿದೆ. ಭಾರತೀಯ ವಾಯುಪಡೆಗೆ ಸೇರಿದ ಸಿ-17 ಯುದ್ಧ ವಿಮಾನದಲ್ಲಿ ಎಲ್ಲ ಭಾರತೀಯರನ್ನು ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಭಾರತೀಯ ನೌಕಾಪಡೆ ಯುದ್ಧ ಪೀಡಿತ ಯೆಮೆನ್ ನಲ್ಲಿ ನಡೆಸಿದ ಮೊದಲ ದೊಡ್ಡ ರಕ್ಷಣಾ ಕಾರ್ಯಾಚರಣೆ ಇದಾಗಿದ್ದು, ರಾಜಧಾನಿ ಸನಾದಲ್ಲಿ ಇರುವ ಮತ್ತಷ್ಟು ದೊಡ್ಡ ಸಂಖ್ಯೆಯಲ್ಲಿನ ಭಾರತೀಯರನ್ನು ರಕ್ಷಿಸಲು ನೌಕಾಪಡೆ ನಿರ್ಧರಿಸಿದೆ. ಇಂದು ಅಥವಾ ನಾಳೆ ಸನಾದಲ್ಲಿರುವ ಭಾರತೀಯರನ್ನು ಕೂಡ ರಕ್ಷಣೆ ಮಾಡುವ ಕುರಿತು ನೌಕಾಪಡೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊದಲ ಹಂತದಲ್ಲೇ ಯಶಸ್ವಿಯಾದ ಆಪರೇಷನ್ ರಾಹತ್
ಇನ್ನು ಯುದ್ಧಪೀಡಿತ ಯೆಮೆನ್ ನಲ್ಲಿನ ಭಾರತೀಯರ ರಕ್ಷಣೆಗೆಗಾಗಿ ಭಾರತೀಯ ಸೇನೆ ರೂಪಿಸಿದ್ದ ಆಪರೇಷನ್ ರಹಾತ್ ಯೋಜನೆ ಮೊದಲ ಹಂತದಲ್ಲೇ ಯಶಸ್ಸುಗೊಂಡಿದ್ದು, ಅಡೇನ್ ಬಂದರಿನ ಮೂಲಕವಾಗಿ 349 ಭಾರತೀಯರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಲಾಗಿದೆ. ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಭಾರತೀಯರು ಯೆಮೆನ್ ನಲ್ಲಿ ವಿವಿಧ ನೌಕರಿ ಮಾಡುತ್ತಿದ್ದು, ಇದೀಗ ಆಂತರಿಕ ಸಂಘರ್ಷದಿಂದಾಗಿ ಇವರು ಪ್ರಾಣಾಪಾಯಕ್ಕೆ ಸಿಲುಕಿದ್ದಾರೆ.

ಅಡೇನ್ ಗೆ ಮತ್ತೆರಡು ಸಮರ ನೌಕೆಗಳ ರವಾನೆ
ಯೆಮೆನ್ ನಲ್ಲಿ ಅಪಾಯಕ್ಕೆ ಸಿಲುಕಿರುವ ಭಾರತೀಯ ರಕ್ಷಣೆಗಾಗಿ ಭಾರತ ಮತ್ತೆರಡು ಸಮರ ನೌಕೆಗಳನ್ನು ರವಾನೆ ಮಾಡುತ್ತಿದ್ದು, ಐಎನ್ ಎಸ್ ಮುಂಬೈ ಮತ್ತು ಐಎನ್ ಎಸ್ ಟರ್ಕಾಶ್ ಯೆಮೆನ್ ನತ್ತಿ ಶೀಘ್ರದಲ್ಲಿಯೇ ಪ್ರಯಾಣ ಬೆಳೆಸಲಿವೆ. ಮುಂಬೈ ಬಂದರಿನಿಂದ ಯೆಮೆನ್ ಗೆ ಈ ನೌಕೆಗಳು ತೆರಳಲು 4 ದಿನಗಳ ಸಮಯ ಬೇಕಾಗುತ್ತದೆ. ಡ್ಜಿಬೌಟಿಗೆ ತೆರಳಲು 5 ದಿನಗಳ ಸಮಯ ಬೇಕು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT