ಪ್ರಧಾನಿ ನರೇಂದ್ರ ಮೋದಿ 
ದೇಶ

ಮೋದಿ ಜೀವನ ಬದಲಾಯಿಸಿದ ಸ್ವಾಮಿ

ಮೇ 9ರಂದು ಕೋಲ್ಕತಾಗೆ ಆಗಮಿಸಲಿರುವ ಮೋದಿ, ತಮ್ಮ ಜೀವನವನ್ನು ಬದಲಾಯಿಸಿದ ರಾಮಕೃಷ್ಣ ಆಶ್ರಮದ ಸ್ವಾಮೀಜಿಯನ್ನು ಭೇಟಿಯಾಗಲಿದ್ದಾರೆ...

ಕೋಲ್ಕತಾ: ಮೇ 9ರಂದು ಕೋಲ್ಕತಾಗೆ ಆಗಮಿಸಲಿರುವ ಮೋದಿ, ತಮ್ಮ ಜೀವನವನ್ನು ಬದಲಾಯಿಸಿದ ರಾಮಕೃಷ್ಣ ಆಶ್ರಮದ ಸ್ವಾಮೀಜಿಯನ್ನು ಭೇಟಿಯಾಗಲಿದ್ದಾರೆ.

ಬಹುತೇಕರಿಗೆ ತಿಳಿಯದ ಸಂಗತಿಯೇನೆಂದರೆ, ಇವರು ಮೋದಿಯ ಜೀವನವನ್ನೇ ಬದಲಾಯಿಸಿದ ಸ್ವಾಮೀಜಿ. ಇಂದು ಮೋದಿ ಪ್ರಧಾನಿಯಾಗಿದ್ದಾರೆಂದರೆ ಅದಕ್ಕೆ ಮಾರ್ಗದರ್ಶನ ನೀಡಿದ್ದೇ ಕೋಲ್ಕತಾದ ಬೇಲೂರು ಮಠದ ರಾಮಕೃಷ್ಣ ಮಿಷನ್‍ನ ಸ್ವಾಮಿ ಆತ್ಮಸ್ಥಾನಂದ.

ಸ್ವಾಮಿ ವಿವೇಕಾನಂದರ ವಿಚಾರಗಳಿಗೆ ಮನಸೋತ ಯುವಕ ಮೋದಿ, 1996ರಲ್ಲಿ ಸ್ವಾಮಿ ಆತ್ಮಸ್ಥಾನಂದರ ಬಳಿ ಸನ್ಯಾಸ ಧೀಕ್ಷೆ ಕೇಳಿದ್ದರು. ಇದಕ್ಕೊಪ್ಪದ ಸ್ವಾಮೀಜಿ, ನೀನು ಜನರ ಸೇವೆ ಮಾಡಬೇಕು. ಅದರಲ್ಲೇ ಭವಿಷ್ಯವಿದೆ ಎಂದಿದ್ದರು.

ಇದರಂತೆ ಮೋದಿ ಆರ್‍ಎಸ್‍ಎಸ್‍ಗೆ ಸೇರಿ ಹಂತ ಹಂತವಾಗಿ ಜನನಾಯಕರಾಗುತ್ತಾ ಬಂದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2013ರಲ್ಲಿ ಸ್ವಾಮೀಜಿಯನ್ನು ಭೇಟಿ ಮಾಡಿದ್ದ ಮೋದಿ, ಮತ್ತೊಮ್ಮೆ ಬರುವುದಾಗಿ ಭಾಷೆ ನೀಡಿದ್ದರು. ಅದರಂತೆ ಕೋಲ್ಕತಾಗೆ ಬಂದಿಳಿದಾಗ ತಮ್ಮ ನೆಚ್ಚಿನ ಸ್ವಾಮೀಜಿಯನ್ನು ಭೇಟಿ ಮಾಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT