ಅರುಣಾ ಶಾನುಭಾಗ್ 
ದೇಶ

ಅರುಣಾ ಶಾನುಭಾಗ್ ಗೆ ಅಂತಿಮ ವಿದಾಯ

ಸೆಂಟ್ರಲ್ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಸೋಮವಾರ ಇಹಲೋಕ ತ್ಯಜಿಸಿದ ನರ್ಸ್ ಅರುಣಾ ಶಾನುಭಾಗ್ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಆಸ್ಪತ್ರೆಯ ಮುಖ್ಯಸ್ಥರು ಕೆಲವು ಬಂಧು ಮಿತ್ರರ ಸಮ್ಮುಖದಲ್ಲಿ ನೆರವೇರಿಸಿದರು...

ಮುಂಬೈ:ಸೆಂಟ್ರಲ್  ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಸೋಮವಾರ ಇಹಲೋಕ ತ್ಯಜಿಸಿದ ನರ್ಸ್ ಅರುಣಾ ಶಾನುಭಾಗ್ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಆಸ್ಪತ್ರೆಯ ಮುಖ್ಯಸ್ಥರು ಕೆಲವು ಬಂಧು ಮಿತ್ರರ ಸಮ್ಮುಖದಲ್ಲಿ ನೆರವೇರಿಸಿದರು.

42 ವರ್ಷಗಳ ಕಾಲ ಜೀವಂತ ಶವವಾಗಿ ವೈದ್ಯರು ಮತ್ತು ದಾದಿಯರ ಆರೈಕೆಯಲ್ಲಿದ್ದು ಸಾವನ್ನಪ್ಪಿದ ಅರುಣಾ ಶಾನುಭಾಗ್ ಅವರ ಅಂತಿಮ ಸಂಸ್ಕಾರವನ್ನು ತಾವೇ ಮಾಡಬೇಕೆಂದು ಅವರ ಸಮೀಪದ ಬಂಧು ಮಿತ್ರರು ಹಠ ಹಿಡಿದಿದ್ದಾರೆ.

ಆಸ್ಪತ್ರೆಯ ಒಳಗೆ ಹೋಗಲು, ಅರುಣಾ ಮೃತದೇಹವನ್ನು ನೋಡಲು ಮತ್ತು ಮುಟ್ಟಲು  ಆಸ್ಪತ್ರೆಯ ಅಧಿಕಾರಿಗಳು ನಮಗೆ ಅವಕಾಶ ನೀಡಲಿಲ್ಲ. ವಿನಾ ಕಾರಣ ನಮಗೆ ತೊಂದರೆ ನೀಡಿದರು ಎಂದು ಅರುಣಾ ಸಂಬಂಧಿಕರು ಮಾಧ್ಯಮಗಳ ಮುಂದೆ ತಮ್ಮ ನೋವು ತೋಡಿಕೊಂಡರು.

ಅರೋಪಕ್ಕೆ ಪ್ರತಿಕ್ರಿಯಿಸಿದ ದಾದಿಯೊಬ್ಬರು," ದಶಕಗಳ ಕಾಲ ನಾವು ಅರುಣಾ ಅವರನ್ನು ನೋಡಿಕೊಂಡದ್ದರಿಂದ ಅಂತಿಮ ಕಾರ್ಯವನ್ನು  ನಾವೇ ನೆರವೇರಿಸುವುದಾಗಿ ವಾದಿಸಿದರು. 

 ನಂತರ ಒಂದು ಸಹಮತಕ್ಕೆ ಬಂದ ಆಸ್ಪತ್ರೆ ಸಿಬ್ಬಂದಿ ಮತ್ತು ಕುಟುಂಬಸ್ಥರು ಮುಂಬೈಯ ಬೊಯಿವಾಡಾ ಶವಾಗಾರದಲ್ಲಿ ಒಟ್ಟಿಗೆ ಅಂತ್ಯಸಂಸ್ಕಾರ ನೆರವೇರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

ದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, IMA ಸಲಹೆ ಏನು?

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!