ತೊಗರಿ ಬೇಳೆ 
ದೇಶ

ತೊಗರಿ ಬೆಲೆ ಕೆಜಿಗೆ ೧೧೦ ರೂ, ಮೊದಲನೇ ದಿನವೇ ಸರದಿಯಲ್ಲಿ ನಿಂತ ಐದು ಲಕ್ಷ ಜನ

ತಮಿಳುನಾಡು ರಾಜ್ಯ ಸರ್ಕಾರ ತೊಗರಿ ಬೇಳೆಯನ್ನು ಸಹಕಾರಿ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಮಾರುವ ಯೋಜನೆಯ ಪಲಾನುಭವಿಗಳಾಗಳು ಮೊದಲ ದಿನವಾದ ಭಾನುವಾರ ಚೆನ್ನೈ,

ಚೆನ್ನೈ: ತಮಿಳುನಾಡು ರಾಜ್ಯ ಸರ್ಕಾರ ತೊಗರಿ ಬೇಳೆಯನ್ನು ಸಹಕಾರಿ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಮಾರುವ ಯೋಜನೆಯ ಪಲಾನುಭವಿಗಳಾಗಳು ಮೊದಲ ದಿನವಾದ ಭಾನುವಾರ ಚೆನ್ನೈ, ತಿರುಚಿ, ಮಧುರೈ ಮತ್ತು ಕೊಯಂಬತ್ತೂರಿನಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಸರತಿಯಲ್ಲಿ ನಿಂತಿದ್ದರು. ಮಾರುಕಟ್ಟೆ ದರಕ್ಕಿಂದಲೂ ೧೦೦ ರೂನಷ್ಟು ಕಡಿಮೆ ದರದಲ್ಲಿ ೧೫ ಟನ್ ತೊಗರಿ ಬೇಳೆಯನ್ನು ಸರ್ಕಾರ ನೆನ್ನೆ ಬಿಕರಿ ಮಾಡಿದೆ.

ಸರ್ಕಾರದ ಈ ನಡೆ ಖಾಸಗಿ ಮಾರಾಟಗಾರರಿಗೆ ಬೆಲೆಯನ್ನು ಇಳಿಸಲು ಒತ್ತಡ ಹೇರುತ್ತದೆ ಎಂದೇ ಅಂದಾಜಿಸಲಾಗಿದೆ.

ಒಬ್ಬರಿಗೆ ಒಂದು ಕೆಜಿ ತೊಗರಿ ಬೇಳೆಯಂತೆ ನಿಗದಿ ಪಡಿಸಲಾಗಿತ್ತು. "ತೊಗರಿಬೇಳೆಯ ಮಾರುಕಟ್ಟೆ ದರ ೨೦೦ ರೂ. ನನಗೆ ೯೦ ರೂ ಉಳಿಯಿತು. ಒಂದು ಕೆಜಿ ನಿರ್ಭಂದವನ್ನು ತೆಗೆದರೆ ಇನ್ನೂ ಒಳ್ಳೆಯದು" ಎಂದು ಕೊಡಂಬಕ್ಕಮ್ ನ ಸಹಕಾರಿ ಅಂಗಡಿಯಲ್ಲಿ ತೊಗರಿ ಕೊಂಡ ಭಾಗ್ಯಲಕ್ಷ್ಮಿ ಹೇಳಿದ್ದಾರೆ. ಹೆಚ್ಚು ಜನರಿಗೆ ಸದುಪಯೋಗವಾಗಲೆಂದು ಹಾಗೂ ಹೆಚ್ಚಿನ ಬೆಲೆಗೆ ಮತ್ತೆ ಮಾರುವುದನ್ನು ತಡೆಯಲೆಂದು ಈ ನಿರ್ಬಂಧ ಹೇರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. "ಇನ್ನೂ ಹೆಚ್ಚಿನ ಜನಕ್ಕೆ ಸಹಕಾರಿಯಾಗಲು ಮುಂದಿನ ೩೦ ದಿನಗಳವರೆಗೆ ೧೫ ಟನ್ ತೊಗರಿ ಬೇಳೆಯನ್ನು ಮಾರಲಿದ್ದೇವೆ" ಎಂದು ತಮಿಳು ನಾಡು ನಾಗರಿಕ ಆಹಾರ ಸರಬರಾಜು ಸಂಘದ ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT