ಮಾಜಿ ತೇರಿ ಮಹಾ ನಿರ್ದೇಶಕ ಆರ್.ಕೆ. ಪಚೌರಿ (ಸಂಗ್ರಹ ಚಿತ್ರ) 
ದೇಶ

ಪಚೌರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದೂರು ನೀಡಿದ್ದ ಮಹಿಳೆ ರಾಜೀನಾಮೆ

ಮಾಜಿ ತೇರಿ ಮಹಾ ನಿರ್ದೇಶಕ ಆರ್.ಕೆ. ಪಚೌರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ಸಂಶೋಧನ ವಿಶ್ಲೇಷಕಿ ಇದೀಗ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು ಬುಧವಾರ ಹೇಳಲಾಗುತ್ತಿದೆ...

ನವದೆಹಲಿ: ಮಾಜಿ ತೇರಿ ಮಹಾ ನಿರ್ದೇಶಕ ಆರ್.ಕೆ. ಪಚೌರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ಸಂಶೋಧನ ವಿಶ್ಲೇಷಕಿ ಇದೀಗ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು ಬುಧವಾರ ಹೇಳಲಾಗುತ್ತಿದೆ.

ಪಚೌರಿ ವಿರುದ್ಧ ಆರೋಪ ಮಾಡಿದ್ದ ಮಹಿಳಾ ಸಂಶೋಧನ ವಿಶ್ಲೇಷಕಿ ತೇರಿ ಸಂಸ್ಥೆಯಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಮಹಿಳೆಯು ತನ್ನ ರಾಜೀನಾಮೆ ಪತ್ರದಲ್ಲಿ, ಅನುಚಿತವಾಗಿ ವರ್ತಿಸುತ್ತಿದ್ದ ಪಚೌರಿಯವರ ತಪ್ಪು ಹುಡುಕುವಲ್ಲಿ ತನಿಖಾ ಸಮಿತಿಯು ವಿಫಲವಾಗಿದೆ. ಸಂಸ್ಥೆ ನನ್ನನ್ನು ಅತೀ ಕೀಳು ಮಟ್ಟದಲ್ಲಿ ನೋಡುತ್ತಿದ್ದು, ಒಬ್ಬ ನೌಕರಳಾಗಿ ನನ್ನ ಹಿತಾಸಕ್ತಿಯನ್ನು ಎತ್ತಿಹಿಡಿಯುವಲ್ಲಿ ತೇರಿ ಸಂಸ್ಥೆ ವಿಫಲವಾಗಿದೆ ಎಂದು ಹೇಳಿದ್ದಾರೆ.     

ಸಂಸ್ಥೆಯಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿದ್ದರೂ, ಆ ವ್ಯಕ್ತಿಯ ವಿರುದ್ಧ ಸಂಸ್ಥೆ ಈ ವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸಂಸ್ಥೆಯಲ್ಲಿ ಇದೀಗ ನನ್ನ ವಿರುದ್ಧ ಶತ್ರುತ್ವ ವಾತಾವರಣ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ತಮ್ಮ ಯಾತನೆಯನ್ನು ತೋಡಿಕೊಂಡಿದ್ದಾರೆ.

ತೇರಿಯ ಮಹಾ ನಿರ್ದೇಶಕರಾಗಿದ್ದ ಪಚೌರಿ ವಿರುದ್ಧ ಈ ವರ್ಷ 2015ರ ಫೆಬ್ರವರಿಯಲ್ಲಿ  ಸಹೋದ್ಯೋಗಿ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ದೂರನ್ನು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಪಚೌರಿ ವಿರುದ್ಧ ಐಪಿಸಿ ಸೆಕ್ಷನ್.354, 356 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು.

ಬಂಧನಕ್ಕೊಳಪಟ್ಟಿದ್ದ ಪಚೌರಿಗೆ ಅವರು ಶರತ್ತುಬದ್ಧ ನಿಯಮದನ್ವಯ  "ಪೊಲೀಸರು ಕರೆದಾಗೆಲ್ಲ ಹಾಜರಾಗಿ ತನಿಖೆಯಲ್ಲಿ ಸಹಕರಿಸಬೇಕು, ತೇರಿ ಕಾರ್ಯಾಲಯದ ಆವರಣವನ್ನು ಪ್ರವೇಶಿಸಕೂಡದು' ಎಂದು ಹೇಳಿದ್ದ ನ್ಯಾಯಾಲಯವು ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿತ್ತು. ನಂತರ ಕಳೆದ ಜುಲೈ 23ರಂದು ತೇರಿ ಆಡಳಿತ ಮಂಡಳಿಯು ಪಚೌರಿ ಅವರ ಸ್ಥಾನಕ್ಕೆ ಅಜಯ್‌ಮಾಥುರ್‌ ಅವರನ್ನು ಮಹಾ ನಿರ್ದೇಶಕರನ್ನಾಗಿ ನೇಮಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT