ನರೇಂದ್ರ ಮೋದಿ- ನಿತೀಶ್ ಕುಮಾರ್ 
ದೇಶ

ಬಿಹಾರದಲ್ಲಿ ಚುನಾವಣೆ ಜಾಹೀರಾತುಗಳಿಗೆ ಸೆನ್ಸಾರ್

ಬಿಹಾರದಲ್ಲಿ ನಡೆಯುತ್ತಿರುವ `ಗೋಮಾಂಸ ಜಾಹೀರಾತಿನ ರಾಜಕೀಯ'ದ ಫಲವಾಗಿ ಚುನಾವಣಾ ಆಯೋಗ ತನ್ನ...

ನವದೆಹಲಿ/ ಪಟನಾ: ಬಿಹಾರದಲ್ಲಿ ನಡೆಯುತ್ತಿರುವ `ಗೋಮಾಂಸ ಜಾಹೀರಾತಿನ ರಾಜಕೀಯ'ದ ಫಲವಾಗಿ ಚುನಾವಣಾ ಆಯೋಗ ತನ್ನ ಅನುಮತಿಯಿಲ್ಲದೆ ಯಾವುದೇ ಜಾಹೀರಾತು ಪ್ರಕಟಿಸದಂತೆ ರಾಜಕೀಯ ಪಕ್ಷಗಳಿಗೆ ಆದೇಶ ನೀಡಿದೆ. 
ಇದೇ ಮೊದಲ ಬಾರಿಗೆ ಆಯೋಗವು ಈ ಬಗೆಯ ಸೆನ್ಸಾರ್ ವಿಧಿಸಿದೆ. ಅದರಂತೆ, ಗುರುವಾರ ನಡೆಯಲಿರುವ ಕೊನೇ ಹಂತದ ಮತದಾನಕ್ಕೆ ಮುನ್ನ ಯಾವುದೇ ಜಾಹೀರಾತು ಆಯೋಗದ ಸೆನ್ಸಾರ್ ಇಲ್ಲದೆ ಎಲ್ಲೂ ಪ್ರಕಟವಾಗು ವಂತಿಲ್ಲ. ಬಿಜೆಪಿಯ `ಗೋಮಾಂಸ' ಜಾಹಿರಾತಿನ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ಪ್ರತಿ ಪಕ್ಷಗಳು ಆಯೋಗದ ಮೆಟ್ಟಿಲೇರಿದ ಬಳಿಕ ಆಯೋಗದ ಈ ನಡೆ ಪ್ರಕಟವಾಗಿದೆ. 
ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯ ಬಗ್ಗೆ ಸಹೋದ್ಯೋಗಿಗಳು ಮತ್ತು ಮಿತ್ರಪಕ್ಷಗಳು ನೀಡಿರುವ ವಿವಾದಾತ್ಮಕ ಹೇಳಿಕೆಗಳಿಗೆ ನಿತೀಶ್ ಮೌನ ತಾಳಿದ್ದು, ಆದ್ದರಿಂದ ಅವರೂ ಈ ಅಭಿಪ್ರಾಯಗಳನ್ನು ಸಮರ್ಥಿಸುತ್ತಿದ್ದಾರೆ ಎಂಬ ಅರ್ಥದ ಜಾಹೀರಾತನ್ನು ಬಿಜೆಪಿ ಮಂಗಳವಾರ ಪ್ರಕಟಿಸಿತ್ತು. ಬಿಜೆಪಿ ಜಾಹೀರಾತಿನಲ್ಲಿ ಒಬ್ಬಾಕೆ ಸ್ತ್ರೀ ಒಂದು ಗೋವನ್ನು ತಬ್ಬಿಕೊಂಡಿರುವ ಚಿತ್ರವಿದೆ. 
ಜತೆಗೆ ಆರ್‍ಜೆಡಿ ನಾಯಕ ಲಾಲು, ಸಹೋದ್ಯೋಗಿ ರಘುವಂಶ ಪ್ರಸಾದ್ ಸಿಂಗ್, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ವಿವಾದಾತ್ಮಕ ಹೇಳಿಕೆಗಳನ್ನು ಅಚ್ಚುಮಾಡಿ, ಈ ಹೇಳಿಕೆಗಳಿಗೆ ನಿತೀಶ್ ಸಮ್ಮತಿಯಿದೆಯೇ ಎಂದು ಪ್ರಶ್ನಿಸಲಾಗಿತ್ತು. ಇದರಿಂದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಕೆರಳಿದ್ದು, ಇದು ಮತೀಯ ದ್ವೇಷ ಹರಡುವ ಮೂಲಕ ಚುನಾವಣೆ ಧ್ರುವೀಕರಣಾ ಯತ್ನ ಎಂದು ದೂರಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT