ಗಡಿಭದ್ರತಾ ಸೇನೆ 
ದೇಶ

ದೇಶದ ಗಡಿಭಾಗದಲ್ಲಿರುವ ಯುವಕರಿಗೆ ಕದನ ಕಲೆ ಕಲಿಸಲು ಕೇಂದ್ರ ತೀರ್ಮಾನ

ದೇಶದ ಗಡಿಭಾಗದ ಅಭಿವೃದ್ಧಿ ಯೋಜನೆಯ ಅಂಗವಾಗಿ ವಿವಿಧ ದೇಶಗಳಿಗೆ ತಾಗಿಕೊಂಡಿರುವ ಗಡಿಪ್ರದೇಶಗಳ ಯುವಕರಿಗೆ ಕದನಕಲೆ ಕಲಿಸುವ ಬಗ್ಗೆ ಕೇಂದ್ರ ಸರ್ಕಾರ...

ನವದೆಹಲಿ: ದೇಶದ ಗಡಿಭಾಗದ ಅಭಿವೃದ್ಧಿ ಯೋಜನೆಯ ಅಂಗವಾಗಿ ವಿವಿಧ ದೇಶಗಳಿಗೆ ತಾಗಿಕೊಂಡಿರುವ ಗಡಿಪ್ರದೇಶಗಳ ಯುವಕರಿಗೆ ಕದನಕಲೆ ಕಲಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮ್ಯಾನ್‌ಮಾರ್, ಚೀನಾ ಎಂಬೀ ರಾಷ್ಟ್ರಗಳ ಗಡಿಪ್ರದೇಶದಲ್ಲಿ ವಾಸಿಸುವ ಭಾರತದ ಗ್ರಾಮಗಳ ಯುವಕರಿಗೆ ಕದನ ಕಲೆಗಳಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಗಡಿ ಪ್ರದೇಶಗಳಲ್ಲಿ ಹೊರದೇಶದಿಂದ ನುಸುಳುಕೋರರು ಬಂದರೆ ಅವರನ್ನು ಎದುರಿಸುವುದಕ್ಕೆ ದೇಶದ ಯುವಕರು ಸನ್ನದ್ಧರಾಗಿರಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಯುವಕರಿಗೆ ತರಬೇತಿ ನೀಡಲು ಗಡಿ ಪ್ರದೇಶದಲ್ಲಿ ಸೇವಾ ನಿರತರಾಗಿರುವ ಸೇನಾ ಮತ್ತು ಅರೆಸೇನಾ ವಿಭಾಗಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ.  ಪಾಕಿಸ್ತಾನ, ಬಾಂಗ್ಲಾದೇಶದ ಗಡಿಪ್ರದೇಶದಲ್ಲಿ ಸೇವಾ ನಿರತರಾಗಿರುವ ಗಡಿಭದ್ರತಾ ಸೇನೆ, ನೇಪಾಳ- ಭೂತಾನ್ ಗಡಿಪ್ರದೇಶದಲ್ಲಿರುವ ಸಶಸ್ತ್ರ ಸೀಮಾ ಬಲ್, ಭಾರತ -ಚೀನಾ ಗಡಿಯಲ್ಲಿರು ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್ ಫೋರ್ಸ್ ಮೊದಲಾದವುಗಳಿಗೆ ಈ ನಿರ್ದೇಶನ ನೀಡಲಾಗಿದೆ. 
ಆಯುಧಧಾರಿಗಳನ್ನು ಎದುರಿಸುವುದು ಹೇಗೆ, ಶೂಟಿಂಗ್, ಬಿಲ್ಲು ವಿದ್ಯೆ, ಬಾಕ್ಸಿಂಗ್ ಮೊದಲಾದ ಕಲೆಗಳನ್ನೂ ಯುವಕರಿಗೆ ಕಲಿಸಿಕೊಡಲಾಗುವುದು. 
ಭಾರತ ಇದೀಗ ಈ ರೀತಿಯ ಯೋಜನೆಗೆ ಚಿಂತನೆ ನಡೆಸಿದ್ದರೂ, ಚೀನಾ, ಸಿಂಗಾಪುರ್, ಇಸ್ರೇಲ್, ದಕ್ಷಿಣ ಕೊರಿಯಾ ಮೊದಲಾರ ದೇಶಗಳಲ್ಲಿ ಈಗಾಗಲೇ ಯುವಕರಿಗೆ ಇಂಥಾ ತರಬೇತಿಗಳನ್ನು ನೀಡಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT