ದಾವೂದ್ ಇಬ್ರಾಹಿಂ(ಸಂಗ್ರಹ ಚಿತ್ರ) 
ದೇಶ

ಮರಣದ ನೆರಳಿನಲ್ಲಿ ದಾವೂದ್ ಇಬ್ರಾಹಿಂ

ಸರಿಯಾಗಿ ಒಂದು ವರ್ಷದ ಹಿಂದಿನ ಘಟನೆ. 2014ರ ನವೆಂಬರ್ ತಿಂಗಳ ಮಧ್ಯ ಭಾಗದ ಸಮಯ. ಪಾಕಿಸ್ತಾನದ...

ಇಸ್ಲಾಮಾಬಾದ್: ಸರಿಯಾಗಿ ಒಂದು ವರ್ಷದ ಹಿಂದಿನ ಘಟನೆ. 2014ರ ನವೆಂಬರ್ ತಿಂಗಳ ಮಧ್ಯ ಭಾಗದ ಸಮಯ. ಪಾಕಿಸ್ತಾನದ ಇಸ್ಲಾಮಾಬಾದ್ ನಗರದ ಬೌಬಾಮ್ ಪರ್ವತಕ್ಕೆ ಹೊಂದಿಕೊಂಡಂತಿರುವ ಅಪಾರ್ಟ್ ಮೆಂಟಿನ ಮನೆಯೊಂದರಿಂದ ಯಾರು ಹೊರಗೆ ಬರುತ್ತಾರೆ ಎಂದು ಪರೀಕ್ಷಿಸುವಂತೆ ಭಾರತೀಯ ದೂತನೊಬ್ಬನಿಗೆ ಸೂಚಿಸಲಾಗಿತ್ತು. ಅದರಂತೆ ಆ ಭಾರತೀಯ ವ್ಯಕ್ತಿ ಗುಪ್ತವಾಗಿ ನೋಡುತ್ತಿರುವಾಗ ಒಬ್ಬ ವ್ಯಕ್ತಿ ಮನೆಯಿಂದ ಹೊರಬಂದು ತನ್ನ ಬೆಂಗಾವಲು ವಾಹನದಲ್ಲಿ ಹೊರಹೋಗುತ್ತಿರುವುದನ್ನು ಕಂಡ. ಇದು ಪಾಕಿಸ್ತಾನದ ಐಎಸ್ ಐ ಒಡೆತನದ ಅದರ ಸುರಕ್ಷತೆಗೆ ಬಳಸಿಕೊಳ್ಳುತ್ತಿದ್ದ ಮನೆಯಾಗಿತ್ತು. ಆ ಮನೆಯಿಂದ ಹೊರಬಂದ ವ್ಯಕ್ತಿ ಬೇರೆ ಯಾರೂ ಅಲ್ಲ, ಭಾರತಕ್ಕೆ ಬೇಕಾಗಿರುವ ಭೂಗತ ದೊರೆ ದಾವೂದ್ ಇಬ್ರಾಹಿಂ.

ಮುಂದೆ ಎರಡು ತಿಂಗಳು ಐಎಸ್ ಐನ ಸುರಕ್ಷಿತ ಮನೆಯೊಳಗೆ ಗೂಢಚಾರರು ವ್ಯಾಪಕ ಸ್ಥಳ ಪರಿಶೀಲನೆ ನಡೆಸಿದರು. ಆ ಮನೆಗೆ ಸುಲಭವಾಗಿ ಸಂಪರ್ಕವನ್ನು ಹೊಂದಿರುವ ರಸ್ತೆ, ಪ್ರವೇಶ ದ್ವಾರ, ಬೇಲಿಯ ಎತ್ತರ, ಭದ್ರತಾ ಪಡೆಗಳು, ಅಪಾರ್ಟ್ ಮೆಂಟಿಗೆ ಬಂದು ಹೋಗುವ ವಾಹನಗಳ ದಾಖಲಾತಿ ಸಂಖ್ಯೆ ಪ್ರತಿಯೊಂದನ್ನೂ ಗೂಢಚಾರರು ಗಮನಿಸುತ್ತಿದ್ದರು. ಅಪಾರ್ಟ್ ಮೆಂಟಿನಲ್ಲಿ ವಾಸಿಸುತ್ತಿರುವವರ ದೂರವಾಣಿ ಮತ್ತು ಮೊಬೈಲ್ ಸಂಖ್ಯೆಗಳನ್ನು ತಪಾಸಣೆ ಮಾಡಲಾಯಿತು.

ಭಾರತದಲ್ಲಿರುವ ತಾಂತ್ರಿಕ ತಂಡವೊಂದು ದೂರವಾಣಿ ಕರೆಗಳನ್ನು ಆಲಿಸಿ ವಿವರಗಳನ್ನು ಕಲೆ ಹಾಕಿದೆ. ಅದರಲ್ಲಿ ತಿಳಿದುಬಂದ ಅಂಶವೇನೆಂದರೆ ಕಳೆದ ಎರಡು ದಶಕಗಳಿಂದ ಪಾಲನೆ ಮಾಡಿಕೊಂಡು ಬಂದಿದ್ದ ಐಎಸ್ಐ ಇದೀಗ ದಾವೂದ್ ಇಬ್ರಾಹಿಂನನ್ನು ಮುಗಿಸಲು ಸಂಚು ರೂಪಿಸುತ್ತಿದೆ. ಒಂದು ವೇಳೆ ಭಾರತ ದಾವೂದ್ ನನ್ನು ಜೀವಂತವಾಗಿ ಹಿಡಿದರೆ ನೆರೆ ದೇಶವಾದ ಪಾಕಿಸ್ತಾನದ ಇನ್ನೊಂದು ಮುಖವಾಡ ಬಯಲಾಗುತ್ತದೆ. ಒಂದು ಸಮಯದಲ್ಲಿ ಮುಂಬೈ ಭೂಗತ ಲೋಕವನ್ನು ಆಳಿದ್ದ ಮತ್ತು ದಾವೂದ್ ನ ಮಿತ್ರನಾಗಿದ್ದು, ಈಗ ಶತ್ರುವಾಗಿರುವ ಛೋಟಾ ರಾಜನ್ ನ ಬಂಧನ ಕೂಡ ದಾವೂದ್ ನ ಮುಂದಿನ ಚಟುವಟಿಕೆಗಳಿಗೆ ಮತ್ತು ಜೀವಕ್ಕೆ ಅಪಾಯವಾಗಿದೆ.ಐಎಸ್ ಐ ಆತನನ್ನು ದೂರವಿಡಲು ನೋಡುತ್ತಿದೆ ಎಂಬುದು ಗೊತ್ತಾಗಿದೆ.

ದಾವೂದ್ ನನ್ನು ಜೀವಂತ ಬಿಟ್ಟರೆ ಮುಂದೊಂದು ದಿನ ಭಾರತ ಆತನನ್ನು ಬಂಧಿಸಿದರೆ ಭಾರತದಲ್ಲಿ ಐಎಸ್ ಐಯ ಭಯೋತ್ಪಾದನೆಯ ಪಾತ್ರ ಬಯಲಾಗುತ್ತದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಬಣ್ಣವೂ ಬಯಲಾಗುತ್ತದೆ.ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಆತನನ್ನು ಸಾಯಿಸಲು ಸಂಚು ರೂಪಿಸುತ್ತಿದೆ ಎಂಬ ಅಂಶ ಬಹಿರಂಗಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT