ಓಲಾ ಬೋಟ್ ಸೇವೆ 
ದೇಶ

ಚೆನ್ನೈನಲ್ಲಿ ನಿರಾಶ್ರಿತರ ಸ್ಥಳಾಂತರಕ್ಕೆ ಓಲಾ ಬೋಟ್ ಸೇವೆ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚೆನ್ನೈ ದ್ವೀಪದಂತಾಗಿದ್ದು, ಜನರ ಅವಶ್ಯಕತೆಗಾಗಿ ಪ್ರಸಿದ್ದ ಓಲಾ ಸಂಸ್ಧೆ ಬೋಟ್ ಸೇವೆಯನ್ನು...

ಚೆನ್ನೈ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚೆನ್ನೈ ದ್ವೀಪದಂತಾಗಿದ್ದು, ಜನರ ಅವಶ್ಯಕತೆಗಾಗಿ ಪ್ರಸಿದ್ದ ಓಲಾ ಸಂಸ್ಧೆ ಬೋಟ್ ಸೇವೆಯನ್ನು ಆರಂಭಿಸಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತಕ್ಕೆ ತಮಿಳುನಾಡು ಅಕ್ಷರಶ: ನಲುಗಿ ಹೋಗಿದೆ. ಚೆನ್ನೈ ಮತ್ತು ಕಾಂಚಿಪುರಂನಲ್ಲಿ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗಾಗಿ ಆರ್ಮಿ ಮತ್ತು ಏರ್ ಫೋರ್ಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಈ ಮಧ್ಯೆ ಮೊಬೈಲ್ ಟ್ಯಾಕ್ಸಿ ಸೇವೆ ಪೂರೈಸುವ ಓಲಾ ಪ್ರವಾಹದಲ್ಲಿ ಸಿಲುಕಿರುವವರಿಗಾಗಿ ಓಲಾ ಬೋಟ್ ಸೇವೆ ಆರಂಭಿಸಿದ್ದು, ನಿರಾಶ್ರಿತರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದೆ. 
ನೀರಿನಲ್ಲಿ ಮುಳುಗಡೆಯಾಗಿರುವ ಜನವಸತಿ ಪ್ರದೇಶಗಳಲ್ಲಿ ಸಂಚರಿಸುವ ಓಲಾ ಬೋಟ್ ಅಲ್ಲಿನ ಜನರಿಗೆ ನೀರು, ಆಹಾರ ಸೇವೆಯನ್ನು ಉಚಿತವಾಗಿ ಒದಗಿಸುತ್ತಿದೆ. ಈ ಬೋಟ್ ನಲ್ಲಿ ಇಬ್ಬರು ಅಂಬಿಗರಿದ್ದು ಅವರು ತೀರ ಅಪಾಯದಲ್ಲಿರುವ 5 ರಿಂದು 9 ಜನರನ್ನು ಒಂದು ಬಾರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದೆ.
ಈ ಬೋಸ್ ಸೇವೆ ಇನ್ನು ಮೂರು ದಿನಗಳ ಕಾಲ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಜಲಾವೃತಗೊಂಡಿರುವ ಪ್ರದೇಶಗಳಲ್ಲಿ ಮುಂದುವರೆಸುವ ಯೋಜನೆಯನ್ನು ಸಂಸ್ಥೆ ಇಟ್ಟುಕೊಂಡಿದೆ. ಈ ಮಧ್ಯೆ ತಮಿಳುನಾಡಿನಲ್ಲಿ ತಮ್ಮ ಮೊಬೈಲ್ ಟ್ಯಾಕ್ಸಿ ಸೇವೆಯನ್ನು ಇನ್ನಷ್ಟು ಗಾಢಗೊಳಿಸುವ ನಿಟ್ಟಿನಲ್ಲಿ ಸಂಸ್ಥೆ ಈ ಸೇವೆ ಆರಂಭಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT