ದೇಶ

ನಿಯಮ ತಿರುಚಿದ ಎ.ರಾಜ

Mainashree
ನವದೆಹಲಿ: ಸ್ವಾನ್ ಟೆಲಿಕಾಂ ಕಂಪನಿಗೆ ದೂರಸಂಪರ್ಕ ಸೇವಾ ಪರವಾನಗಿ ನೀಡಲು ಮಾಜಿ ಕೇಂದ್ರ ಸಚಿವ ಎ. ರಾಜಾ ಎರಡೂ ತಂತ್ರಜ್ಞಾನ(ಸಿಡಿಎಂಎ, ಜಿಎಸ್ ಎಂ)ಕ್ಕೆ ಪರವಾನಗಿ ನೀಡುವ ನಿಯಮಗಳನ್ನು ಮನಬಂದಂತೆ ಬದಲಾಯಿಸಿದ್ದಾರೆ ಎಂದು ಸಿಬಿಐ ಸೋಮವಾರ ಪ್ರಕರಣ ತನಿಖೆ ನಡೆಸುತ್ತಿರುವ ಇಲ್ಲಿನ ವಿಶೇಷ ನ್ಯಾಯಾಲಯದ ಮುಂದೆ ಹೇಳಿದೆ. 
2ಜಿ ಸ್ಪೆಕ್ಟ್ರಂ ಹಂಚಿಕೆಯ ಕೊನೆಯ ಹಂತದ ವಾದ ವಿವಾದಗಳ ಸಂದರ್ಭದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಆನಂದ್ ಗ್ರೋವರ್, ಟ್ರಾಯ್ ಮತ್ತು ಟೆಲಿಕಾಂ ಕಮೀಷನ್ ಹೇಳಿದ್ದರೂ ಎರಡೂ ರೀತಿಯ ತಂತ್ರಜ್ಞಾನಕ್ಕಾಗಿ ಸಲ್ಲಿಸಿದ್ದ ಅರ್ಜಿಗಳ ವಿಲೇವಾರಿ ಮಾಡಲು ಅನುಸರಿಸಿದ್ದ ನಿಯಮ ರಾಜಾ ಅನುಸರಿಸದೆ ಪರವಾನಗಿ ನೀಡಿದ್ದಾರೆ ಎಂದರು. ರಾಜಾ, ಸ್ವಾನ್ ಟೆಲಿಕಾಂ ಪ್ರವರ್ತಕರು, ಇತರ 13 ಮಂದಿ ವಿರುದ್ಧ ಪ್ರಕರಣ ಇದೆ.
SCROLL FOR NEXT