ಲಕ್ನೋ: ತನ್ನ ಪತ್ನಿ ದೇಶ ಬಿಟ್ಟು ಹೋಗೋಣವೇ? ಎಂದು ಕೇಳುತ್ತಾ ಇದ್ದಾರೆ ಎಂಬ ಅಮೀರ್ ಖಾನ್ ವಿವಾದಿತ ಹೇಳಿಕೆಯ ಬಗ್ಗೆ ಪ್ರಸ್ತಾಪಿದ ಉತ್ತರ ಪ್ರದೇಶದ ಸಚಿವ ಅಜಂ ಖಾನ್, ಅಮೀರ್ ಖಾನ್ ಈ ರೀತಿ ಹೇಳಲಿಲ್ಲ. ಅವರ ಹೆಂಡತಿ ಕಿರಣ್ ಹಿಂದೂ, ಅವರು ಈ ಮಾತನ್ನು ಹೇಳಿರುವುದು. ಹಿಂದೂವಾಗಿರುವ ಆಕೆಗೇ ಇಷ್ಟೊಂದು ಅಭದ್ರತೆ ಕಾಡಬೇಕಾದರೆ ಪಾಪ, ಯಾವುದೇ ಬೆಂಬಲ ಇಲ್ಲದಿರುವ ಮುಸ್ಲಿಮರ ಸ್ಥಿತಿ ಇನ್ನೇನಾಗಿರಬೇಡ? ಎಂದು ಪ್ರಶ್ನಿಸಿದ್ದಾರೆ.
ತಮ್ಮ ಮಕ್ಕಳ ಬಗ್ಗೆ ಅಮೀರ್ ಖಾನ್ ಪತ್ನಿ ವ್ಯಾಕುಲರಾಗಿದ್ದಾರೆ ಎಂದಾದರೆ ಯಾರೂ ಬಂಧುಗಳೇ ಇಲ್ಲದವರು ಏನು ಮಾಬೇಕು ಎಂದು ಅಜಂ ಖಾನ್ ಕೇಳಿದ್ದಾರೆ.
ಸೋಮವಾರ ರಾತ್ರಿ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮೀರ್ ಖಾನ್, ದೇಶದಲ್ಲಿ ಅಭದ್ರತೆಯ ಅಲರಾಂ ಬಡಿಯುತ್ತಿರುತ್ತದೆ. ನಾವು ದೇಶ ಬಿಟ್ಟು ಹೋಗೋಣವೇ? ಎಂದು ನನ್ನ ಹೆಂಡತಿ ಕೇಳುತ್ತಿದ್ದಾಳೆ ಎಂದು ಹೇಳಿದ್ದು, ಈ ಹೇಳಿಕೆ ವಿವಾದಕ್ಕೀಡಾಗಿದೆ.