ದೇಶ

ರಾಷ್ಟ್ರಪಿತನ 146ನೇ ಜಯಂತಿ

Sumana Upadhyaya

ನವದೆಹಲಿ: ದೇಶವು ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 146ನೇ ಜಯಂತಿಯನ್ನು ಆಚರಿಸುತ್ತಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ಪಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ  ವಿವಿಧ ರಾಜಕೀಯ ಪಕ್ಷಗಳ ಮತ್ತು ಹೆಸರಾಂತ ಗಣ್ಯರು ದೆಹಲಿಯ ರಾಜ್‍ಘಾಟ್ ನಲ್ಲಿರುವ ಗಾಂಧೀಜಿಯವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದ್ದಾರೆ.
ರಾಜ್‍ಘಾಟ್‍ನಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ಕೂಡ ಆಯೋಜಿಸಲಾಗಿದ್ದು, ದೇಶಾದ್ಯಂತ ಗಾಂಧಿಜಯಂತಿ ಪ್ರಯುಕ್ತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ದೇಶವು ಇಂದು ಅವರಿಗೆ ಗೌರವನಮನ ಸಲ್ಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಅವರ ಸಮಾಧಿ ಸ್ಥಳವಾದ ವಿಜಯಘಾಟ್ ನಲ್ಲಿ ವಿವಿಧ ಗಣ್ಯರು ಅವರ ಸಮಾಧಿಗೆ ತಮ್ಮ ಗೌರವ ನಮನ ಸಲ್ಲಿಸಲಿದ್ದಾರೆ.
 
1964ರ ಜೂನ್ 9 ರಿಂದ 1966ರ ಜನವರಿ 11ರವರೆಗೆ ದೇಶದ ಎರಡನೆಯ ಪ್ರಧಾನಿಯಾಗಿ ಲಾಲ್ ಬಹಾದೂರ್ ಶಾಸ್ತ್ರಿಯವರು ತಮ್ಮ ̧ಸೇವೆಯನ್ನು ಸಲ್ಲಿಸಿದ್ದರು, 1996ರ ಜನವರಿ 11ರಂದು ಅವರು ಉಜ್ಬೇಕಿಸ್ತಾನದ ತಾಷ್ಕಂಟ್‍ನಲ್ಲಿ ಆಕಸ್ಮಿಕವಾಗಿ ಸಾವಿಗೀಡಾದರು. 1965ರ ಪಾಕಿಸ್ತಾನದೊಂದಿಗಿನ ಯುದ್ಧದ ಸಂದರ್ಭದಲ್ಲಿ ಅವರು ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ದೇಶದ ಐಕ್ಯತೆಯನ್ನು ಸಾಧಿಸುವುದಕ್ಕಾಗಿ “ಜೈ ಜವಾನ್, ಜೈ ಕಿಸಾನ್” ಎಂಬ ಘೋಷಣೆಯನ್ನು ದೇಶದ ಜನತೆಗೆ ನೀಡುವುದರ ಮೂಲಕ ಜನಮನ್ನಣೆಗೆ ಪಾತ್ರರಾದರು.

SCROLL FOR NEXT