(ಸಾಂದರ್ಭಿಕ ಚಿತ್ರ) 
ದೇಶ

ಊಟ ಮಾಡುವಾಗ ಶಿರವಸ್ತ್ರ ಜಾರಿದ್ದಕ್ಕೆ ಮಗಳನ್ನು ಬಡಿದು ಕೊಂದ ತಂದೆ!

ಊಟ ಮಾಡುವಾಗ ಶಿರವಸ್ತ್ರ (ಹಿಜಬ್) ಜಾರಿದ್ದಕ್ಕೆ 4 ವರ್ಷದ ಮಗಳನ್ನು ತಂದೆಯೊಬ್ಬ ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆಯೊಂದು ಉತ್ತರ ಪ್ರದೇಶದ ಬಿಜಪುರದಲ್ಲಿ ಶುಕ್ರವಾರ ನಡೆದಿದೆ...

ಬಿಜಪುರ (ಉತ್ತರ ಪ್ರದೇಶ): ಊಟ ಮಾಡುವಾಗ ಶಿರವಸ್ತ್ರ (ಹಿಜಬ್) ಜಾರಿದ್ದಕ್ಕೆ 4 ವರ್ಷದ ಮಗಳನ್ನು ತಂದೆಯೊಬ್ಬ ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆಯೊಂದು ಉತ್ತರ ಪ್ರದೇಶದ ಬಿಜಪುರದಲ್ಲಿ ಶುಕ್ರವಾರ ನಡೆದಿದೆ.

ಫರ್ಹೀನ್ (4) ಮೃತ ಬಾಲಕಿ. ಬಾಲಕಿ ಶಿರವಸ್ತ್ರ (ಹಿಜಬ್) ಸರಿಯಾಗಿ ಧರಿಸಿಲ್ಲದ ಕಾರಣ ಊಟ ಮಾಡುವಾಗ ಶಿರವಸ್ತ್ರ ಜಾರಿ ಕೆಳಗೆ ಬಿದ್ದಿದೆ. ಊಟ ಮಾಡುವತ್ತ ಗಮನ ಹರಿಸಿದ್ದ ಬಾಲಕಿಗೆ ಇದು ಗಮನಕ್ಕೆ ಬಂದಿಲ್ಲ. ಇದನ್ನು ಕಂಡ ಬಾಲಕಿಯ ತಂದೆ ಜಾಫರ್ ಹುಸೇನ್ ತೀವ್ರವಾಗಿ ಕೆಂಡಾಮಂಡಲವಾಗಿದ್ದಾನೆ. ನಂತರ ಬಾಲಕಿಯನ್ನು ಎತ್ತಿಕೊಂಡು ಸಾಯವಂತೆ ನೆಲಕ್ಕೆ ಬಡಿದಿದ್ದಾನೆ. ಬಾಲಕಿಯ ಕಿರುಚಾಟ ಕೇಳಿದ ತಾಯಿ ನೆರೆಮನೆಯವರನ್ನು ಕೂಗಿದ್ದಾಳೆ. ಆದರೆ, ಜಾಫರ್ ನ ಸ್ಥಿತಿ ಕಂಡ ನೆರೆಮನೆಯವರಾರು ಮನೆಯೊಳಗೆ ಹೋಗಲಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ತಂದೆಯ ಹೊಡೆತದಿಂದಾಗಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಾಲಕಿ ಸತ್ತಿರುವುದನ್ನು ಕಂಡ ಜಾಫರ್ ನಂತರ ಮೃತದೇಹವನ್ನು ಮನೆಯೊಳಗೇ ಅಂತ್ಯ ಸಂಸ್ಕಾರ ಮಾಡುವಂತೆ ಪತ್ನಿಗೆ ಒತ್ತಡ ಹೇರಿದ್ದಾನೆ. ಆದರೆ, ಇದಕ್ಕೊಪ್ಪದ ಬಾಲಕಿಯ ತಾಯಿ ವಿಚಾರವನ್ನು ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾಳೆ. ಸ್ಥಳಕ್ಕಾಗಮಿಸಿದ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಶರೀಫ್ ನನ್ನು ಬಂಧಕ್ಕೊಳಪಡಿಸಿ ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಎಲ್ಲರ ಹುಬ್ಬೇರಿಸಿದ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT