ಏರ್ ಟೆಲ್ 4-ಜಿ ಜಾಹೀರಾತು 
ದೇಶ

ದಾರಿ ತಪ್ಪಿಸುವ ಏರ್ ಟೆಲ್ 4 ಜಿ ಜಾಹೀರಾತು: ಕಂಪೆನಿಗೆ ನೊಟೀಸ್

ಏರ್ ಟೆಲ್ 4ಜಿ ತ್ವರಿತ ಸೇವೆ ಕುರಿತು ಇತ್ತೀಚೆಗೆ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಜಾಹೀರಾತು ಜನರನ್ನು ದಾರಿತಪ್ಪಿಸುತ್ತಿದೆ ಎಂದು...

ಮುಂಬೈ: ಏರ್ ಟೆಲ್ 4ಜಿ ತ್ವರಿತ ಸೇವೆ ಕುರಿತು ಇತ್ತೀಚೆಗೆ ಚಾನೆಲ್ ಗಳಲ್ಲಿ  ಪ್ರಸಾರವಾಗುತ್ತಿರುವ ಜಾಹೀರಾತು ಜನರನ್ನು ದಾರಿತಪ್ಪಿಸುತ್ತಿದೆ ಎಂದು ಗ್ರಾಹಕರೊಬ್ಬರು ನೀಡಿರುವ ದೂರಿನ ಮೇರೆಗೆ ಏರ್ ಟೆನ್ ದೂರವಾಣಿ ನಿರ್ವಾಹಕರಿಗೆ  ಭಾರತೀಯ ಜಾಹೀರಾತು ನಿರ್ವಹಣಾ ಮಂಡಳಿ ನೊಟೀಸ್ ಕಳುಹಿಸಿದೆ.

ದೇಶಾದ್ಯಂತ 4ಜಿ ಸೇವೆಯನ್ನು ಆರಂಭಿಸಿದ ನಂತರ ಏರ್ ಟೆಲ್  ಕಳೆದ ಆಗಸ್ಟ್ ತಿಂಗಳಿನಿಂದ ಅದಕ್ಕೆ ಸಂಬಂಧಪಟ್ಟಂತೆ'' ಇದಕ್ಕಿಂತ ವೇಗವಾದ ನೆಟ್ ವರ್ಕ್ ಹೊಂದಿರುವ ಇಂಟರ್ ನೆಟ್ ಸೇವೆ ಸಿಕ್ಕಿದರೆ ನಿಮ್ಮ ಜೀವಾವಧಿಯ ಮೊಬೈಲ್ ಬಿಲ್ ಉಚಿತವಾಗಿ ನೀಡುತ್ತೇವೆ ಅಂತ ಜಾಹೀರಾತು ಪ್ರಸಾರವಾಗುತ್ತಿದೆ.

ಆದರೆ ಜಾಹೀರಾತನ್ನು ವೈಭವೀಕರಿಸಲಾಗಿದ್ದು, ಉಳಿದೆಲ್ಲಾ ಮೊಬೈಲ್ ಕಂಪೆನಿಗಳು ನಿಷ್ಪಯೋಜಕ ಎಂಬ ಅರ್ಥ ಬರುತ್ತದೆ ಎಂದು ಗ್ರಾಹಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಜಾಹೀರಾತು ಪ್ರಾಧಿಕಾರ ಕಂಪೆನಿಗೆ ನೊಟೀಸ್ ಜಾರಿ ಮಾಡಿದೆ. ಜಾಹೀರಾತನ್ನು ಹಿಂತೆಗೆದುಕೊಳ್ಳುವುದು ಅಥವಾ ಮಾರ್ಪಾಡು ಮಾಡುವಂತೆ ಅಥವಾ ವಿಮರ್ಶೆ ಮಾಡುವಂತೆ ಪ್ರಾಧಿಕಾರ ಕಂಪೆನಿಗೆ ಸೂಚಿಸಿದ್ದು, ಇದೇ 7ರೊಳಗೆ ಉತ್ತರಿಸುವಂತೆ ಆದೇಶ ನೀಡಿದೆ.

ಜಾಹೀರಾತು ಪ್ರಾಧಿಕಾರದ ಕೋಡ್ ಸಂಖ್ಯೆ 1.4ರ ಪ್ರಕಾರ, ಜಾಹಿರಾತುಗಳು  ನೇರವಾಗಿ ಅಥವಾ ಸೂಚನೆಯ ಮೂಲಕ ದ್ವಂದ್ವಾರ್ಥವನ್ನು ಕೊಡುವಂತೆ ಮತ್ತು ಉತ್ಪ್ರೇಕ್ಷೆ ಹೊಂದುವಂತೆ ಇರಬಾರದು.  ಮೂಲಕ ಪ್ರಚಾರ ಉತ್ಪನ್ನ ಅಥವಾ ಗ್ರಾಹಕರನ್ನು  ದಾರಿತಪ್ಪಿಸುವಂತಿರಬಾರದು ಎಂದು ಹೇಳಲಾಗಿದೆ.

ಪ್ರಾಧಿಕಾರದ ನೊಟೀಸ್ ಬಗ್ಗೆ ಪ್ರತಿಕ್ರಿಯಿಸಿರುವ ಭಾರ್ತಿ ಏರ್ ಟೆಲ್ ಕಂಪೆನಿ, ಕಠಿಣ ಪರೀಕ್ಷೆಗಳನ್ನು ಮಾಡಿಯೇ ಈ ಜಾಹೀರಾತನ್ನು ನೀಡಲಾಗಿದೆ. ತ್ವರಿತಗತಿಯಲ್ಲಿ 4ಜಿ ಇಂಟರ್ನೆಟ್ ಸೇವೆಯನ್ನು ನೀಡುತ್ತೇವೆ ಎಂದು ಹೇಳಿ ಜಾಹೀರಾತು ನೀಡಿದ್ದೇವೆಯೇ ಹೊರತು ಅದರಲ್ಲಿ ಉತ್ಪ್ರೇಕ್ಷೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಜಾಹೀರಾತಿನಲ್ಲಿ ತಿಳಿಸಿರುವಂತೆ ಜಾಹೀರಾತು ಪ್ರಾಧಿಕಾರಕ್ಕೆ ಅಗತ್ಯವಿರುವ ತಾಂತ್ರಿಕ ದಾಖಲೆಗಳನ್ನು ಒದಗಿಸಲು ಪ್ರಾಧಿಕಾರ ಸಿದ್ದವಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT