ದೇಶ

ಶಂಕರಾಭರಣಂ ನಿರ್ಮಾಪಕ ಇನ್ನಿಲ್ಲ

Mainashree
ನವದೆಹಲಿ: ಶಂಕರಾಭರಣಂ, ಸಾಗರಸಂಗಮಂ ಮತ್ತು ಸ್ವಾತಿಮುತ್ಯಂನಂಥ ಹಿಟ್ ಚಿತ್ರಗಳ ನಿರ್ಮಾಪಕ ಇ. ನಾಗೇಶ್ವರ ರಾವ್(81) ಅವರು ಭಾನುವಾರ ಸಂಜೆ ಮೃತಪಟ್ಟಿದ್ದಾರೆ.
ರಂಗಭೂಮಿ ಕಲಾವಿದನಾಗಿ, ನಟನಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ವೃತ್ತಿ ಜೀವನ ನಡೆಸಿದ ನಾಗೇಶ್ವರರಾವ್ ಅವರು ನಂತರ ತಮ್ಮದೇ ಆದ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಕಟ್ಟಿದರು.
ಕೆ. ವಿಶ್ವನಾಥ್‍ರವರೊಂದಿಗೆ ಸೇರಿ ಕೊಂಡು ಶ್ರೀ ಶ್ರೀ ಮುವ್ವದಂಥ ಸಿನಿಮಾ ನಿರ್ಮಿಸಿದರು. ಇವರು ನಿರ್ಮಿಸಿದ್ದು ಹತ್ತೇ ಸಿನಿಮಾ ಆದರೂ ಅವೆಲ್ಲ ಜನಮೆಚ್ಚುಗೆ ಗಳಿಸಿವೆ. ರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿವೆ.
SCROLL FOR NEXT