ನವದೆಹಲಿ: ಇಸ್ರೇಲ್ ಜತೆಗೆ ಹೆಚ್ಚುತ್ತಿರುವ ಭಾರತದ ಮಿತ್ರತ್ವ ಖಂಡಿಸಿ ಪ್ಯಾಲೆಸ್ತೀನ್ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಿಂದಾಗಿ ಅಲ್ ಕುಡ್ಸ್ ವಿಶ್ವವಿದ್ಯಾಲಯದ ಕಾರ್ಯಕ್ರಮದಿಂದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅರ್ಧದಲ್ಲೇ ಎದ್ದು ಹೊರನಡೆಯಬೇಕಾಯಿತು.
ಮುಖರ್ಜಿ ಅವರು ತಮ್ಮ ಭಾಷಣವನ್ನು ಇನ್ನೇನು ಪೂರ್ಣಗೊಳಿಸಬೇಕು ಎನ್ನುವಾಗಲೇ ವಿದ್ಯಾರ್ಥಿಗಳ ಪ್ರತಿಭಟನೆ ಹೆಚ್ಚಾಯಿತು. ಇದರಿಂದ ಮುಖರ್ಜಿ ಹಾಗೂ ಅವರ ಜತೆಗಿದ್ದ ಉಳಿದ ಅತಿಥಿಗಳು ಕಾರ್ಯಕ್ರಮ ದಿಂದ ಹೊರ ನಡೆಯಬೇಕಾಯಿತು. ಎರಡೂ ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಒಪ್ಪಂದಕ್ಕೂ ಸಹಿ ಹಾಕುವುದಕ್ಕೂ ಕಾಯದೆ ಮುಖರ್ಜಿ ಕಾರ್ಯಕ್ರಮದಿಂದ ಹೊರ ನಡೆದರು.