ಸಾಂದರ್ಭಿಕ ಚಿತ್ರ 
ದೇಶ

ಡ್ರೈವಿಂಗ್ ವೇಳೆ ಕೈಗೆ ಬಂದ ಬಸ್ ಸ್ಟೀರಿಂಗ್: ತಪ್ಪಿದ ಭಾರಿ ಅನಾಹುತ

ನೆರೆಯ ಆಂಧ್ರ ಪ್ರದೇಶದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದನ್ನು ಬಸ್ ಚಾಲಕನೋರ್ವ ತನ್ನ ಚಾಕಚಕ್ಯತೆಯಿಂದಾಗಿ ತಪ್ಪಿಸಿದ್ದಾನೆ...

ಅಮರಾವತಿ: ನೆರೆಯ ಆಂಧ್ರ ಪ್ರದೇಶದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದನ್ನು ಚಾಲಕನೋರ್ವ ತನ್ನ ಚಾಕಚಕ್ಯತೆಯಿಂದಾಗಿ ತಪ್ಪಿಸಿದ್ದಾನೆ.

ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಸರ್ಕಾರಿ ಬಸ್ ನ ಸ್ಟೀರಿಂಗ್ ಚಾಲನೆ ವೇಳೆಯಲ್ಲಿಯೇ ಚಾಲಕನ ಕೈಗೆ ಬಂದಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಸಂದಿಗ್ಧ  ಪರಿಸ್ಥಿತಿಯಲ್ಲಿಯೂ ತನ್ನ ಚಾಕಚಕ್ಯತೆ ತೋರಿದ ಚಾಲಕ ಬಸ್ ಅನ್ನು ಸಮೀಪದ ಹೊಲದೊಳಗೆ ತೆಗೆದುಕೊಂಡು ಹೋಗಿ ನಿಲ್ಲಿಸುವ ಮೂಲಕ ಪ್ರಯಾಣಿಕರ ಪ್ರಾಣರಕ್ಷಿಸಿದ್ದಾನೆ. ತಾಂತ್ರಿಕ  ದೋಷದಿಂದ ಕೂಡಿದ್ದ ಈ ಬಸ್ ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆ ವಿವಿರ:
ಆಂಧ್ರಪ್ರದೇಶದದ ಅನಂತಪುರ ಜಿಲ್ಲೆಯ ವಜ್ರಕರೂರ್ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದ್ದು, ಚಾಲಕ ಮತ್ತು ನಿರ್ವಾಹಕ ಸೇರಿ 40 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಎಪಿಎಸ್ ಆರ್ ಟಿಸಿ ಬಸ್  ಶುಕ್ರವಾರ ಬೆಳಗ್ಗೆ ಗುಂತಕಲ್ಲಿನಿಂದ ಉರವಕೊಂಡ ತಾಲ್ಲೂಕಿನತ್ತ ಪ್ರಯಾಣ ಬೆಳೆಸಿತ್ತು. ಸುಮಾರು 10 ನಿಮಿಷದ ಪ್ರಯಾಣದ ಬಳಿಕ ಬಸ್ ಗುಲ್ಯಾಪಾಲೆಂ ಗ್ರಾಮದ ಬಳಿ ಬರುತ್ತಿದ್ದಂತೆಯೇ ಚಾಲಕನ ಕೈಯಲ್ಲಿದ್ದ ಸ್ಟೀರಿಂಗ್ ಕಿತ್ತುಕೊಂಡು ಬಂದಿದೆ.

ತಾಂತ್ರಿಕ ತೊಂದರೆಗೀಡಾಗಿದ್ದ ಬಸ್ ನ ಸ್ಟೀರಿಂಗ್ ಆಕ್ಸೆಲ್ ಕಟ್ ಆಗಿ ಬಸ್ ಚಾಲಕನ ನಿಯಂತ್ರ ತಪ್ಪಿತ್ತು. ಇದನ್ನು ಕಂಡ  ಪ್ರಯಾಣಿಕರು ಆಘಾತಗೊಂಡಿದ್ದು, ಬಸ್ ನಲ್ಲೇ ಕೂಗಾಟ ಆರಂಭಿಸಿದ್ದಾರೆ. ಆದರೆ ಇದ್ಯಾವುದರಿಂದಲೂ ವಿಚಲಿತನಾಗದ ಚಾಲಕ ನಿಧಾನವಾಗಿ ಬಸ್ ಅನ್ನು ಸ್ಟೀರಿಂಗ್ ನ ಸಹಾಯವಿಲ್ಲದೆಯೇ  ಸಮೀಪದ ಹೊಲದಲ್ಲಿ ಇಳಿಸಿ ಬಸ್ ಅನ್ನು ನಿಲ್ಲಿಸಿದ್ದಾನೆ.

ಬಳಿಕ ಎಲ್ಲ ಪ್ರಯಾಣಿಕರು ಬಸ್ ನಿಂದ ಇಳಿದು ಬೇರೆ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಆ ಮೂಲಕ ಸುಮಾರು 40 ಮಂದಿಯ ಪ್ರಾಣವನ್ನು ಕಾಪಾಡಿದ್ದಾನೆ. ತನ್ನ ಚಾಕಚಕ್ಯತೆಯಿಂದಾಗಿ ಪ್ರಯಾಣಿಕರನ್ನು ರಕ್ಷಿಸಿದ ಚಾಲಕನನ್ನು ಬಸ್ ಪ್ರಯಾಣಿಕರೆಲ್ಲರೂ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಪುಣೆಯಲ್ಲಿ ಘೋರ ಕೃತ್ಯ: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ; ಯುವಕನ ಬಂಧನ!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

ಕ್ಷಿಪಣಿ ದಾಳಿ ಆರೋಪ: Iranಗೆ UAE ಶಾಕ್, ಎಲ್ಲಾ ವ್ಯಾಪಾರ-ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ..!