ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಮತ್ತು ಲಲಿತ್ ಮೋದಿ (ಸಂಗ್ರಹ ಚಿತ್ರ) 
ದೇಶ

ಲಲಿತ್ ಮೋದಿ ಗಡಿಪಾರಿಗೆ ಪತ್ರ ಬರೆದಿದ್ದ ಚಿದಂಬರಂ

ಐಪಿಎಲ್ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಲಲಿತ್ ಮೋದಿಯನ್ನು ಬ್ರಿಟನ್‍ನಿಂದ ಗಡಿಪಾರು ಮಾಡಲು ಹಿಂದಿನ ಯುಪಿಎ ಸರ್ಕಾರ ಪ್ರಯತ್ನಿಸಿತ್ತು...

ನವದೆಹಲಿ: ಐಪಿಎಲ್ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಲಲಿತ್ ಮೋದಿಯನ್ನು ಬ್ರಿಟನ್‍ನಿಂದ ಗಡಿಪಾರು ಮಾಡಲು ಹಿಂದಿನ ಯುಪಿಎ ಸರ್ಕಾರ ಪ್ರಯತ್ನಿಸಿತ್ತು. ಈ  ಬಗ್ಗೆ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ 2013ರ ಆಗಸ್ಟ್ ನಲ್ಲಿ ಪತ್ರ ಬರೆದಿದ್ದ ಬಗ್ಗೆ `ಎನ್‍ಡಿಟಿವಿ' ವರದಿ ಮಾಡಿದೆ.

ಚಿದಂಬರಂ ಅವರು ಈ ಹಿಂದೆಯೇ ತಾವು ಬ್ರಿಟನ್ ಸರ್ಕಾರಕ್ಕೆ ಬರೆದಿರುವ ಪತ್ರವನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರು. ಈಗ ಆ ಪತ್ರವನ್ನು ಸುದ್ದಿವಾಹಿನಿಯೇ ಬಹಿರಂಗ ಮಾಡಿದೆ. ``ಕೇಂದ್ರ ಸರ್ಕಾರ ಲಲಿತ್ ಮೋದಿಯನ್ನು ಹಸ್ತಾಂತರ ಮಾಡಿ ಎಂದು ಕೇಳುತ್ತಿಲ್ಲ. ಅದರ ಬದಲಿಗೆ ಅವರನ್ನು ಗಡಿಪಾರು ಮಾಡಬೇಕು.  ಏಕೆಂದರೆ ಈಗಾಗಲೇ ಭಾರತ ಸರ್ಕಾರ ಲಲಿತ್ ಪಾಸ್‍ಪೋರ್ಟ್ ಅನ್ನು ರದ್ದು ಮಾಡಿದೆ. ಇದರ ಜತೆಗೆ ಲಲಿತ್ ಮೋದಿ ಬಳಿ ಯಾವುದೇ ಅಧಿಕೃತ ದಾಖಲೆಗಳು ಇಲ್ಲ ಎಂದು ಕೇಂದ್ರ ಸರ್ಕಾರ ಭಾವಿಸುತ್ತಿದೆ'' ಎಂದು ಚಿದಂಬರಂ ಪತ್ರದಲ್ಲಿ ಬರೆದಿದ್ದರು.

ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತದೆ. ಹೀಗಾಗಿ ಅವರನ್ನು ಗಡಿಪಾರು ಮಾಡಿ ಎಂದು ಮನವಿ ಮಾಡಿದ್ದರು. ಅದಕ್ಕೆ 2013ರ ಸೆ.23ರಂದು ಮಾರೋಲೆ ಬರೆದಿದ್ದ ಬ್ರಿಟನ್‍ನ ವಿದೇಶಾಂಗ  ಇಲಾಖೆ ``ಭಾರತ ಸರ್ಕಾರ ಲಲಿತ್ ಮೋದಿ ಪ್ರಕರಣದಲ್ಲಿ ತೋರಿಸುತ್ತಿ ರುವ ಆಸಕ್ತಿಯನ್ನು ಕೊಂಡಾಡುತ್ತದೆ. ಆದರೆ ಹಸ್ತಾಂತರದ ಬಗ್ಗೆ ಸೂಕ್ತ ಮಾರ್ಗದ ಮೂಲಕ ಮನವಿ ಸಲ್ಲಿಸಿದಲ್ಲಿ ಅದನ್ನು  ಪರಿಗಣಿಸಲಾಗುತ್ತದೆ''ಎಂದು ಬರೆದಿತ್ತು.

ಇದೇ ಸಾಕ್ಷಿ: ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ``ಯುಪಿಎ ಸರ್ಕಾರ ಲಲಿತ್ ಮೋದಿಯನ್ನು ಗಡಿಪಾರು ಮಾಡಲು ಪ್ರಯತ್ನಿಸಿತ್ತು ಎನ್ನುವುದಕ್ಕೆ ಇದುವೇ ಸಾಕ್ಷಿ'' ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ