ದೇಶ

ಕೇರಳ ಭವನ ಬೀಫ್ ದಾಳಿ: ಬಸ್ಸಿ ವಜಾಕ್ಕೆ ಎಎಪಿ ಆಗ್ರಹ

Lingaraj Badiger

ನವದೆಹಲಿ: ಗೋಮಾಂಸ ನೀಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೇರಳ ಭವನದ ಮೇಲೆ ಪೊಲೀಸರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರನ್ನು ವಜಾಗೊಳಿಸಬೇಕು ಎಂದು ಎಎಪಿ ಒತ್ತಾಯಿಸಿದೆ.

'ಕೇರಳ ಭವನದ ಮೇಲಿನ ದಾಳಿ ಕಾನೂನು ಬಾಹಿರ ಮತ್ತು ಇದರಿಂದ ಜನತೆಗೆ ತಪ್ಪು ಸಂದೇಶ ರವಾನೆಯಾಗಿದೆ' ಎಂದು ಎಎಪಿ ನಾಯಕ ಆಶುತೋಷ್ ಅವರು ಆರೋಪಿಸಿದ್ದಾರೆ.

'ದೇಶದ ಜನತೆಗೆ ಮತ್ತು ಮಾಧ್ಯಮಕ್ಕೆ ತಪ್ಪು ಸಂದೇಶ ನೀಡಿದ ದೆಹಲಿ ಪೊಲೀಸ್ ಆಯುಕ್ತರಿಗೆ ಹುದ್ದೆಯಲ್ಲಿ ಮುಂದುವರೆಯುವ ಅರ್ಹತೆ ಇಲ್ಲ' ಎಂದಿದ್ದಾರೆ.

ಕೇರಳ ಭವನ ಕ್ಯಾಂಟೀನ್ ನಲ್ಲಿ ಬೀಫ್ ತಿನ್ನಲು ಅನುವುಮಾಡಿಕೊಡಲಾಗಿದೆ ಎಂದು ಹಿಂದೂ ಸೇನಾ ಸಂಸ್ಥೆಯ ವಿಷ್ಣು ಗುಪ್ತ ಎಂಬ ವ್ಯಕ್ತಿ ನೀಡಿದ್ದ ದೂರಿನ ಮೇರೆಗೆ ಪೊಲೀಸರ ತಂಡ ಸೋಮವಾರ ಸಂಜೆ ಕೇರಳ ಹೌಸ್ ಕ್ಯಾಂಟೀನಿನ ಮೇಲೆ ದಾಳಿ ನಡೆಸಿತ್ತು.

SCROLL FOR NEXT