ದೇಶ

ಪ್ರತಿಭಾವಂತರು ರಾಜಕೀಯ ಪ್ರವೇಶಿಸಬೇಕು: ಪ್ರಧಾನಿ ನರೇಂದ್ರ ಮೋದಿ

Srinivas Rao BV

ನವದೆಹಲಿ: ರಾಜಕೀಯ ಕ್ಷೇತ್ರ ಕೆಟ್ಟ ಹೆಸರು ಪಡೆಯುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಸಕಾರಾತ್ಮಕ ಚಿಂತನೆಯುಳ್ಳ ಪ್ರತಿಭಾವಂತರು ರಾಜಕೀಯವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಕರೆ ನೀಡಿದ್ದಾರೆ.

ಶಿಕ್ಷಕರ ದಿನಾಚರಣೆ ಮುನ್ನಾದಿನ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಜಕೀಯ ಕ್ಷೇತ್ರ  ಕೆಟ್ಟ ಹೆಸರುಪಡೆದುಕೊಳ್ಳುತ್ತಿದೆ. ರಾಜಕೀಯವೆಂದರೆ ಜನರು ಭಯಪಡುವ ವಾತಾವರಣ ನಿರ್ಮಾಣವಾಗಿದೆ, ಒಳ್ಳೆಯ ಜನರು ರಾಜಕೀಯಕ್ಕೆ ಬರಬಾರದೆಂಬ ಮನಸ್ಥಿತಿ ಇದ್ದು ಇದರಿಂದ ನಷ್ಟವುಂಟಾಗಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಭಾಗವಾಗಿದ್ದು ಉತ್ತಮ ಪ್ರತಿಭೆಗಳು ರಾಜಕೀಯಕ್ಕೆ ಬರುವುದು ಅವಶ್ಯವಾಗಿದೆ. ಉತ್ತಮ ಜನರು ರಾಜಕೀಯ ಪ್ರವೆಶಿಸಿದಷ್ಟೂ ದೇಶಕ್ಕೆ ಒಳಿತಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಪ್ರತಿಭಾವಂತರು ಒಂದು ವಾರದಲ್ಲಿ ಒಂದು ಗಂಟೆ ಪಾಠ ಮಾಡುವುದರಿಂದ ಶಿಕ್ಷಣ ಕ್ಷೇತ್ರ ಮತ್ತಷ್ಟು ಬಲಶಾಲಿಯಾಗಲಿದೆ. ಆದರೆ ರಾಜಕಾರಣಿಗಳು ಕೇವಲ ಉಪದೇಶ ನೀಡುವುದರಿಂದ ಅವರು ಈ ಕೆಲಸ ಮಾಡಬೇಕಿಲ್ಲ ಎಂದು ಮೋದಿ ಲಘುಧಾಟಿಯಲ್ಲಿ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. 

SCROLL FOR NEXT