ದೇಶ

ಮಹೇಶ್ ಶರ್ಮಾ 'ಸಂಸ್ಕಾರವಿಲ್ಲದ' ಸಚಿವ: ಒವೈಸಿ

Lingaraj Badiger

ಹೈದರಾಬಾದ್: ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಶರ್ಮಾ ಸಂಸ್ಕಾರವಿಲ್ಲದ ಸಚಿವ ಎಂದಿದ್ದಾರೆ.

ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ಮುಸ್ಲಿಂ ಆಗಿದ್ದರೂ ಶ್ರೇಷ್ಠ ದೇಶಭಕ್ತರಾಗಿದ್ದರು ಎಂಬ ಶರ್ಮಾ ಅವರ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಒವೈಸಿ, 17 ಕೋಟಿ ಭಾರತೀಯ ಮುಸ್ಲಿಮರ ದೇಶಭಕ್ತಿ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಶರ್ಮಾ ಈ ಕೂಡಲೇ ಸಚಿವ ಸ್ಥಾನಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸಭೆಯೊಂದರಲ್ಲಿ ಮಾತನಾಡಿದ ಒವೈಸಿ, ಸ್ವಾತಂತ್ರ್ಯ ಬಂದು 69 ವರ್ಷಗಳ ನಂತರವೂ ಮುಸ್ಲಿಮರ ದೇಶಭಕ್ತಿಯನ್ನು ಕೇಂದ್ರ ಸಚಿವರೊಬ್ಬರು ಸಂಶಯದಿಂದ ನೋಡುತ್ತಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ಕೇಂದ್ರ ಸಂಸ್ಕೃತಿ ಸಚಿವರಿಗೆ ಸಂಸ್ಕೃತಿಯೇ ಇಲ್ಲ. ಅವರನ್ನು ಈ ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಒವೈಸಿ ಆಗ್ರಹಿಸಿದ್ದಾರೆ.

SCROLL FOR NEXT