ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ 
ದೇಶ

ಕಲಾಂ, ಅಬ್ದುಲ್ ಹಮೀದ್ 'ಭಾರತ್ ಮಾತಾ ಕಿ ಜೈ ಎಂದಿದ್ದರು': ರವಿ ಶಂಕರ್ ಪ್ರಸಾದ್

ಅಬ್ದುಲ್ ಕಲಾಂ ಆಜಾದ್ ಹಾಗೂ ಅಬ್ದುಲ್ ಹಮೀದ್ ಅವರು ಭಾರತ್ ಮಾತಾ ಕಿ ಜೈ ಎಂದಿದ್ದರು. ಭಾರತದ ಪರ ಘೋಷಣೆ ಹೃದಯ ಪೂರ್ವಕವಾಗಿ...

ಮಥುರಾ: ಅಬ್ದುಲ್ ಕಲಾಂ ಆಜಾದ್ ಹಾಗೂ ಅಬ್ದುಲ್ ಹಮೀದ್ ಅವರು ಭಾರತ್ ಮಾತಾ ಕಿ ಜೈ ಎಂದಿದ್ದರು. ಭಾರತದ ಪರ ಘೋಷಣೆ ಹೃದಯ ಪೂರ್ವಕವಾಗಿ ಬರಬೇಕೆಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಶನಿವಾರ ಹೇಳಿದ್ದಾರೆ.

ಭಾರತ್ ಮಾತಾ ಕಿ ಜೈ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಸ್ವಾತಂತ್ರ್ಯಪೂರ್ವದಲ್ಲಿ ಹೋರಾಟಗಾರರು ಹಾಗೂ ಭಾರತದ ಅನೇಕ ನಾಯಕರು ತಮ್ಮ ಕೊನೆಯ ಕ್ಷಣದಲ್ಲೂ ಭಾರತ್ ಮಾತಾ ಕಿ ಜೈ ಎಂದು ಹೇಳುವ ಮೂಲಕ ಉಸಿರು ಬಿಡುತ್ತಿದ್ದರು.

ಇನ್ನು ಅಬ್ದುಲ್ ಕಲಾಂ ಆಜಾದ್ ಹಾಗೂ ಅಬ್ದುಲ್ ಹಮೀದ್ ಅವರು ಕೂಡ ಭಾರತ್ ಮಾತಾ ಕಿ ಜೈ ಎಂದಿದ್ದರು. ಭಾರತ ಮಾತಾ ಕಿ ಜೈ ಘೋಷಣೆ ಯಾವುದೇ ವಿರೋಧವಿಲ್ಲದೆಯೇ ಹೃದಯಪೂರ್ವಕವಾಗಿ ಬರಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಕೋಲ್ಕತಾದಲ್ಲಿ ಸಂಭವಿಸಿದ ಫ್ಲೈ ಓವರ್ ದುರಂತ ಪ್ರಕರಣ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಅವರು, ಫ್ಲೈ ಓವರ್ ಘಟನೆಯೊಂದು ದುರಾದೃಷ್ಟಕರ. ಪ್ರಕರಣ ಸಂಬಂಧ ನ್ಯಾಯೋಚಿತ ತನಿಖೆಯಾಗಬೇಕು. ತಪ್ಪಿತಸ್ಥರು ನಾಯಕರೇ ಆಗಲಿ, ಅಧಿಕಾರಿಯಾಗಲು ಅವರನ್ನು ಬಿಡದೆ ಕಠಿಣ ಶಿಕ್ಷೆ ನೀಡಬೇಕೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT