ಅನೂಪ್ ಮತ್ತು ಆತನ ತಂದೆ 
ದೇಶ

ಓಡಿ ಹೋಗಿದ್ದ 5 ವರ್ಷದ ಬಾಲಕನನ್ನು 7 ವರ್ಷಗಳ ನಂತರ ಪೋಷಕರ ಮಡಿಲು ಸೇರಿಸಿದ ಪೊಲೀಸರು

5 ವರ್ಷದವನಾಗಿದ್ದಾಗ ಮಾಡಿದ್ದ ಸಣ್ಣ ಕಳ್ಳತನಕ್ಕೆ ಹೆದರಿ ಮನೆ ಬಿಟ್ಟು ಹೋಗಿದ್ದ ಬಾಲಕ ಮತ್ತೆ 7 ವರ್ಷಗಳ ನಂತರ ಹೆತ್ತವರ ಮಡಿಲು ಸೇರಿದ ಘಟನೆ ಬಿಹಾರದ ...

ಕೊರಾಪುಟ್: 5 ವರ್ಷದವನಾಗಿದ್ದಾಗ ಮಾಡಿದ್ದ ಸಣ್ಣ ಕಳ್ಳತನಕ್ಕೆ ಹೆದರಿ ಮನೆ ಬಿಟ್ಟು ಹೋಗಿದ್ದ ಬಾಲಕ ಮತ್ತೆ 7 ವರ್ಷಗಳ ನಂತರ ಹೆತ್ತವರ ಮಡಿಲು ಸೇರಿದ ಘಟನೆ ಬಿಹಾರದ ಅಂಬುಗಡ ಗ್ರಾಮದಲ್ಲಿ ನಡೆದಿದೆ.

ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಗವರ್ದನ ಜಿಲ್ಲೆಯ ಲುಕಿ ಠಾಕೂರ್ ಎಂಬುವ ಪುತ್ರ ಅನೂಪ್ ಠಾಕೂರ್ 5 ವರ್ಷದವನಿದ್ದಾಗ ಮನೆಯಲ್ಲಿ ಸಣ್ಣ ಕಳ್ಳತನ ಮಾಡಿ ಮನೆ ಬಿಟ್ಟು ಓಡಿ ಹೋಗಿದ್ದ.

ಮನೆಯಿಂದ ಹೊರಟ ಅನೂಪ್ ರೈಲು ಹತ್ತಿ ವಿಶಾಖಪಟ್ಟಣ ತಲುಪಿದ್ದ ನಂತರ ವಿಶಾಖ ಪಟ್ಟಣ ರೈಲ್ವೆ ನಿಲ್ದಾಣದಲ್ಲಿ ಅಲೆಯುತ್ತಿದ್ದ ಅನೂಪ್ ನನ್ನು ಬುಡಕಟ್ಟು ಜನಾಂಗದ ಕಾರ್ಮಿಕಕ ಕುಟುಂಬವೊಂದು ತಮ್ಮ ಮನೆಗೆ ಕರೆದು ಕೊಂಡು ಹೋಗಿತ್ತು.

ನಂತರ ಅಜಿತ್ ಶಾ ಎಂಬುವರು ಅನೂಪ್ ನನ್ನು ದತ್ತು ತೆಗೆದುಕೊಂಡಿದ್ದರು. ಇತ್ತೀಚೆಗೆ ಅಜಿತ್ ಶಾ ಮನೆಯ ಅಕ್ಕಪಕ್ಕದ ನಿವಾಸಿಗಳು ಅನೂಪ್ ಮನೆ ವಿಳಾಸ ಕೇಳಿದ್ದಾರೆ. ತನ್ನ ಊರು, ತಂದೆಯ ಹೆಸರನ್ನು ಅನೂಪ್ ಹೇಳಿದ್ದಾನೆ. ನಂತರ ನಿವಾಸಿಗಳು ಅಂಬುಗಡ ಪೊಲೀಸರಿಗೆ ವಿಯ ತಿಳಿಸಿದ್ದಾರೆ.

ಇದಾದ ನಂತರ ಪೊಲೀಸರು ಅನೂಪ್ ತಂದೆಗೆ ವಿಷಯ ತಿಳಿಸಿದ್ದಾರೆ. ನಂತರ ಅನೂಪ್ ತಂದೆ ಎಲ್ಲಾ ಕಾನೂನು ನಿಯಮಗಳನ್ನು ಪೂರೈಸಿ ಮಗನನ್ನು ವಾಪಸ್ ತಮ್ಮ ಮನೆಗೆ ಕರೆದೊಯ್ದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT