ಮಾಜಿ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ 
ದೇಶ

ಪಠಾಣ್ ಕೋಟ್ ದಾಳಿ: ಪಾಕಿಸ್ತಾನ ಭೇಟಿ ಕಣ್ಣೊರೆಸುವ ತಂತ್ರವಷ್ಟೇ-ಆರ್.ಕೆ. ಸಿಂಗ್

ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣ ತನಿಖೆ ನಡೆಸಲು ಪಾಕಿಸ್ತಾನ ಜಂಟಿ ತನಿಖಾ ಸಮಿತಿ ಭಾರತಕ್ಕೆ ಆಗಮಿಸಿದ್ದು ಕಣ್ಣೊರೆಸುವ ತಂತ್ರವಷ್ಟೇ...

ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣ ತನಿಖೆ ನಡೆಸಲು ಪಾಕಿಸ್ತಾನ ಜಂಟಿ ತನಿಖಾ ಸಮಿತಿ ಭಾರತಕ್ಕೆ ಆಗಮಿಸಿದ್ದು ಕಣ್ಣೊರೆಸುವ ತಂತ್ರವಷ್ಟೇ ಎಂದು ಮಾಜಿ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಅವರು ಭಾನುವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಪಾಕಿಸ್ತಾನದ ಕೆಲವು ಮಾಧ್ಯಮಗಳು ಪಠಾಣ್ ಕೋಟ್ ದಾಳಿ ಸಂಬಂಧ ವರದಿ ಮಾಡಿತ್ತು. ದಾಳಿ ಸಂಬಂಧ ತನಿಖಾ ತಂಡ ಭಾರತಕ್ಕೆ ಭೇಟಿ ನೀಡಿರುವುದು ಕಣ್ಣೊರೆಸುವ ತಂತ್ರ. ಇಸ್ಲಾಮಾಬಾದ್ ಈ ವಿಚಾರದಲ್ಲಿ ಏನನ್ನೂ ಮಾಡುವುದಿಲ್ಲ ಎಂದು ಹೇಳಿತ್ತು. ಒಂದು ವೇಳೆ ಮಾಧ್ಯಮಗಳ ವರದಿಗಳು ಸತ್ಯವಾದರೆ. ಇದು ನಿಜಕ್ಕೂ ಗಂಭೀರ ವಿಚಾರವಾಗುತ್ತದೆ ಎಂದು ಹೇಳಿದ್ದಾರೆ.

ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹಾಗೂ ಅಲ್ಲಿನ ಆಂತರಿಕ ಗುಪ್ತಚರ ಇಲಾಖೆಗಳು ಪಾಕಿಸ್ತಾನ ಸೇನೆಗ ಬದಲಿ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿದೆ. ಭಾರತದಲ್ಲಿ ಏನಾದರೂ ನಿರ್ಧಾರ ತೆಗೆದುಕೊಂಡರೆ, ಈ ವಿಚಾರ ಜೆಇಎಂ, ಪಾಕಿಸ್ತಾನ ಸೇನೆ ಹಾಗೂ ಅಲ್ಲಿನ ಆಂತರಿಕ ಸೇವಾ ಇಲಾಖೆಗಳಿಗೆ ತಿಳಿಯುತ್ತದೆ. ಹೀಗಾಗಿ ಅವರು ತಮ್ಮ ಪ್ರತಿನಿಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ವರದಿ ಮಾಡಿತ್ತು.

ಇನ್ನು ಈ ವರದಿಗಳು ನಮ್ಮಲ್ಲಿರುವ ಪಾಕಿಸ್ತಾನದ ಮೇಲಿನ ಶಂಕೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಕೂಡ ಅವರು ತಮ್ಮ ಸೇನೆ ಹಾಗೂ ಆಂತರಿಕ ಸೇವಾ ಇಲಾಖೆಗಳನ್ನು ವಿರೋಧಿಸುವ ಪರಿಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಪಾಕಿಸ್ತಾನ ಮಾಧ್ಯಮಗಳು, ಪಠಾಣ್ ಕೋಟ್ ದಾಳಿ ಸಂಬಂಧ ಭಾರತಕ್ಕೆ ಭೇಟಿ ನೀಡುತ್ತಿರುವ ಅಧಿಕಾರಿಗಳನ್ನು ಬದಲಿ ಮಾರ್ಗದೊಂದಿಗೆ ಭಾರತದ ವಾಯುನೆಲೆಗೆ ಹೋಗಲು ಅನುಮತಿ ನೀಡಲಾಗಿತ್ತು. ಇದರಂತೆ ಕೇವಲ 55 ನಿಮಿಷದಲ್ಲಿ ತನಿಖಾ ತಂಡ ಮುಖ್ಯದ್ವಾರದ ಮೂಖಾಂತರವಲ್ಲದೇ ಸೇನಾ ಸೌಲಭ್ಯ ಮೂಲಕ ಬದಲಿ ಮಾರ್ಗದೊಂದಿಗೆ ಭೇಟಿ ನೀಡಿದೆ ಎಂದು ಹೇಳಿತ್ತು.

ಪಠಾಣ್ ಕೋಟ್ ದಾಳಿ ಸಂಬಂಧ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನ ಜಂಟಿ ತನಿಖಾ ತಂಡ ಧೀರ್ಘಾಕಾಲಿಕ ತನಿಖೆ ನಡೆಸಿ ಶುಕ್ರವಾರವಷ್ಟೇ ಪಾಕಿಸ್ತಾನಕ್ಕೆ ಹಿಂತಿರುಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

SCROLL FOR NEXT