ಕಿಕ್ಕಿರಿದ ಬಸ್ ಗೆ ವಿಮೆ ನಿರಾಕರಣೆ 
ದೇಶ

ಕಿಕ್ಕಿರಿದ ಬಸ್ ಗೆ ವಿಮೆ ನಿರಾಕರಣೆ

ಬಸ್ ಗಳಲ್ಲಿ ಹೆಚ್ಚು ಜನರನ್ನು ತುಂಬಿಸುವವರಿಗೆ ಎಚ್ಚರಿಕೆ ಗಂಟೆ ಎಂಬಂತೆ ರಾಷ್ಟ್ರೀಯ ಗ್ರಾಹಕ ಆಯೋಗ ಬಸ್ ವೊಂದರ 13 ಲಕ್ಷ ರೂ ಮೌಲ್ಯದ ವಿಮೆ ಹಕ್ಕನ್ನು ತಿರಸ್ಕರಿಸಿದೆ.

ನವದೆಹಲಿ: ಬಸ್ ಗಳಲ್ಲಿ ಹೆಚ್ಚು ಜನರನ್ನು ತುಂಬಿಸುವವರಿಗೆ ಎಚ್ಚರಿಕೆ ಗಂಟೆ ಎಂಬಂತೆ ರಾಷ್ಟ್ರೀಯ ಗ್ರಾಹಕ ಆಯೋಗ ಬಸ್ ವೊಂದರ 13 ಲಕ್ಷ ರೂ ಮೌಲ್ಯದ ವಿಮೆ ಹಕ್ಕನ್ನು ತಿರಸ್ಕರಿಸಿದೆ.
2008 ರಲ್ಲಿ ನಡೆದ ಬಸ್ ಅಪಘಾತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಜಿತ್ ಭಾರಿಹೋಕೆ, ರೇಖಾ ಗುಪ್ತಾ, ಬಸ್ ಗಳಲ್ಲಿ ಹೆಚ್ಚು ಜನರನ್ನು ತುಂಬುವುದರಿಂದ ಅಪಘಾತದ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದುಬೆ ಟ್ರಾವಲ್ಸ್ ನ ಬಸ್ ವೊಂದು 2008 ರಲ್ಲಿ ಅಪಘಾತಕ್ಕೀಡಾಗಿತ್ತು, ಈ ಅಪಘಾತದಲ್ಲಿ 8 ಪ್ರಯಾಣಿಕರು ಮೃತಪಟ್ಟಿದ್ದರು. ಆರ್ ಟಿ ಒ ನಿಯಮಗಳನ್ನು ಉಲ್ಲಂಘಿಸಿ 35 ಜನರ ಬದಲಿಗೆ 77 ಜನರನ್ನು ತುಂಬಿಸಿದ್ದ ಕಾರಣ ಬಸ್ ಗೆ ವಿಮೆ ಹಕ್ಕನ್ನು ನಿರಾಕರಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಜಿತ್ ಭಾರಿಹೋಕೆ, ರೇಖಾ ಗುಪ್ತಾ, ಬಸ್ ಗೆ ವಿಮೆಯ ಹಣವನ್ನು ನೀಡಲು ನಿರಕಾರಿಸಿದ್ದಾರೆ. ವಿಮೆ ಹಣವನ್ನು ನಿರಾಕರಿಸಿರುವುದಷ್ಟೇ ಅಲ್ಲದೇ ನಿಯಮ ಉಲ್ಲಂಘಿಸಿ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ದ ಕಾರಣ 50,000 ರೂ ದಂಡ ವಿಧಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT