ಪುಲ್ಲೇಲ ಗೋಪಿಚಂದ್ - ಪಿ.ವಿ.ಸಿಂಧು 
ದೇಶ

ಗೋಪಿಚಂದ್ ಉತ್ತಮ, ಆದರು ಸಿಂಧುಗೆ ಇನ್ನೂ ಉತ್ತಮ ಕೋಚ್ ನೇಮಕ: ತೆಲಂಗಾಣ ಡಿಸಿಎಂ

ಇದೊಂದು ಆಘಾತಕಾರಿ ಹೇಳಿಕೆ ಅಂತಾನೇ ಹೇಳಬಹುದು. ರಿಯೋ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಬೆಳ್ಳೆ ಪದಕ...

ಹೈದರಾಬಾದ್: ಇದೊಂದು ಆಘಾತಕಾರಿ ಹೇಳಿಕೆ ಅಂತಾನೇ ಹೇಳಬಹುದು. ರಿಯೋ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಬೆಳ್ಳೆ ಪದಕ ಗೆಲ್ಲಲ್ಲು ಕಾರಣವಾದ ಕೋಚ್ ಪುಲ್ಲೇಲ ಗೋಪಿಚಂದ್ ಅವರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದ್ದರೆ, ತೆಲಂಗಾಣ ಸರ್ಕಾರ ಮಾತ್ರ ಅವರ ಸ್ಥಾನಕ್ಕೆ ಕೈಹಾಕಿದೆ.
ಪುಲ್ಲೇಲ ಗೋಪಿಚಂದ್ ಅವರು ಉತ್ತಮ ಕೋಚ್. ಆದರೂ ಪಿ,ವಿ.ಸಿಂಧುಗೆ ತೆಲಂಗಾಣ ಸರ್ಕಾರ ಇನ್ನೂ ಉತ್ತಮ ಕೋಚ್ ಅನ್ನು ಹುಡುಕಲಾಗುವುದು ಎಂದು ತೆಲಂಗಾಣ ಉಪ ಮುಖ್ಯಮಂತ್ರಿ ಮೊಹಮ್ಮದ್ ಮಹಮೂದ್ ಅಲಿ ಅವರು ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ಅಲಿ, ಗೋಪಿಚಂದ್ ಅವರು ಉತ್ತಮ ಕೋಚ್ ಎಂದು ಹೊಗಳಿದ್ದಾರೆ. ಆದರೆ 2016ರ ರಿಯೋ ಒಲಿಪಿಂಕ್ಸ್ ನಲ್ಲಿ ಬೆಳ್ಳಿಪದ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರವಾಗಿರುವ ಪಿ.ವಿ.ಸಿಂಧು ತರಬೇತಿ ನೀಡಲು ಇನ್ನು ಉತ್ತಮ ಕೋಚ್ ಹುಡುಕಲಾಗುವುದು ಎಂದಿದ್ದಾರೆ.
ಬ್ರೆಜಿಲ್ ನಿಂದ ಇಂದು ಹೈದರಾಬಾದ್ ಗೆ ಆಗಮಿಸಿದ ಪಿ.ವಿ.ಸಿಂಧು ಹಾಗೂ ಪುಲ್ಲೇಲ ಗೋಪಿಚಂದ್ ಇಬ್ಬರಿಗೂ ತೆಲಂಗಾಣ ಸರ್ಕಾರ ಅದ್ಧೂರಿ ಸ್ವಾಗತ ನೀಡಿತು. ಅಲ್ಲದೆ ಗಚ್ಚಿಬೌಳಿ ಕ್ರೀಡಾಂಗಣದಲ್ಲಿ ಇಬ್ಬರಿಗೂ ಸನ್ಮಾನ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT