ಶವ ಸಾಗಿಸುತ್ತಿರುವ ಸಿಬ್ಬಂದಿ 
ದೇಶ

ಒಡಿಶಾದಲ್ಲಿ ಶವ ಸಾಗಾಟಕ್ಕಾಗಿ ಹೆಣದ ಸೊಂಟ ಮುರಿದ ಆಸ್ಪತ್ರೆ ಸಿಬ್ಬಂದಿ!

ಬುಡಕಟ್ಟು ವ್ಯಕ್ತಿಯೊಬ್ಬ ಹಣವಿಲ್ಲದೆ ಪತ್ನಿಯ ಶವ ಹೊತ್ತು 10 ಕಿ.ಮೀ ಸಾಗಿದ ಘಟನೆಯ ಬೆನ್ನಲ್ಲೇ ಒಡಿಶಾದಲ್ಲಿ ಅಂತಹುದೇ ಆಘಾತಕಾರಿ,...

ಭುವನೇಶ್ವರ: ಬುಡಕಟ್ಟು ವ್ಯಕ್ತಿಯೊಬ್ಬ ಹಣವಿಲ್ಲದೆ ಪತ್ನಿಯ ಶವ ಹೊತ್ತು 10 ಕಿ.ಮೀ ಸಾಗಿದ ಘಟನೆಯ ಬೆನ್ನಲ್ಲೇ ಒಡಿಶಾದಲ್ಲಿ ಅಂತಹುದೇ ಆಘಾತಕಾರಿ, ಹೃದಯ ಕಲಕುವ ಮತ್ತೊಂದು ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಒಡಿಶಾದ ಬಾಲಸೋರ್ ಜಿಲ್ಲೆಯ ಸೊರೊ ರೈಲ್ವೆ ನಿಲ್ದಾಣಕ್ಕೆ ಸಮೀಪ ವಾಸವಿದ್ದ 80 ವರ್ಷದ ಸಲಾಮಣಿ ಬೆಹೆರಾ ಎಂಬ ಮಹಿಳೆ ಬುಧವಾರ ಬೆಳಗ್ಗೆ ಗೂಡ್ಸ್ ರೈಲು ಹರಿದು ಸಾವನ್ನಪ್ಪಿದ್ದರು. ಬಳಿಕ ಅವರನ್ನು ಸೊರೊ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್​ಸಿ)ಕ್ಕೆ ಸಾಗಿಸಲಾಗಿತ್ತು. ಅವರ ಸಂಬಂಧಿಗಳಿಗೆ ರೈಲ್ವೆ ಪೊಲೀಸರು ಮಾಹಿತಿ ನೀಡಿ, ಅವರು ಆಸ್ಪತ್ರೆಗೆ ಆಗಮಿಸುವ ವೇಳೆ 12 ಗಂಟೆಗಳು ಕಳೆದಿದ್ದವು. ಅವರು ಬಾಲಸೋರ್ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲು ಆಂಬುಲೆನ್ಸ್ ಇಲ್ಲದೇ ಪರದಾಡಬೇಕಾಗಿ ಬಂದಿದೆ. ಕಡೆಗೂ ಯಾರಿಂದಲೂ ಸಹಕಾರ ಸಿಗದೇ, ಆಂಬುಲೆನ್ಸ್ ಇಲ್ಲದೇ ವೃದ್ಧೆಯ ದೇಹವನ್ನು ಬಿದಿರ ಸಲಾಕೆಯೊಂದಕ್ಕೆ ಕಟ್ಟಿಕೊಂಡು ಹೊತ್ತೊಯ್ದಿದ್ದಾರೆ.
ಬಡವರಿಗಾಗಿ ಅಂಬುಲೆನ್ಸ್‌ ಸೌಕರ್ಯವೇ ಇಲ್ಲದ ಈ ಆಸ್ಪತ್ರೆಯಲ್ಲಿ ಬಡವರು ಹಾಗೂ ನಿರ್ಗತಿಕ ಹೆಣಗಳ ಸೊಂಟ ಮುರಿದು ಅದನ್ನು ಒಂಟಿ ಬಿದಿರಿನ ಕೋಲಿಗೆ ಕಟ್ಟಿ ಒಯ್ಯಲು ಅನುಕೂಲವಾಗುವಂತೆ ಅದರ ಗಾತ್ರವನ್ನು ಕುಗ್ಗಿಸುವ ಸುಲಭೋಪಾಯವೊಂದನ್ನು ಇಲ್ಲಿನ ಶವಾಗಾರದ ಸಿಬಂದಿ ಅನುಸರಿಸುತ್ತಿದ್ದಾರೆ. 
ಮೃತ ಮಹಿಳೆಯ ಶವವನ್ನು ಪ್ಲಾಸ್ಟಿಕ್​ನಲ್ಲಿ ಸುತ್ತಿ, ಅದಕ್ಕೊಂದು ಬಿದಿರ ಸಲಾಕೆ ಕಟ್ಟಿ ಇಬ್ಬರು ಸೇರಿ ಹೊತ್ತೊಯ್ದ ಘಟನೆ ನಡೆದಿದೆ. ಈ ಘಟನೆ ನಡೆದಿರುವುದೂ ಆಂಬುಲೆನ್ಸ್ ಸೇವೆ ಇಲ್ಲ ಎನ್ನುವ ಕಾರಣಕ್ಕಾಗಿ ಎನ್ನುವುದು ಅತಿ ಬೇಸರದ ಸಂಗತಿಯಾಗಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೇ ಉದ್ಘಾಟಿಸಿದ ರಾಜ್ಯ ಸರ್ಕಾರದ ‘ಮಹಾಪ್ರಯಾಣ’ ಹೆಸರಿನ ಉಚಿತ ಆಂಬುಲೆನ್ಸ್ ಯೋಜನೆ ಸೌಲಭ್ಯ 30 ಜಿಲ್ಲೆಗಳಲ್ಲಿ ಇದ್ದರೂ ಮತ್ತೆ ಮತ್ತೆ ಇಂಥ ಘಟನೆ ನಡೆಯುತ್ತಿರುವುದು ಪ್ರಶ್ನಾರ್ಹವಾಗಿದೆ ಎಂದು ಪ್ರಜ್ಞಾವಂತರು ಆಡಿಕೊಳ್ಳುವಂತಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಪೊಲೀಸ್ ಅಧಿಕಾರಿ, ಸಹಾಯಕ ಸಬ್ ಇನ್ಸ್​ಪೆಕ್ಟರ್ ಪ್ರತಾಪ್ ರುದ್ರ ಮಿಶ್ರಾ, ಆಟೋವೊಂದನ್ನು ಕಳುಹಿಸಿಕೊಡಲು ನಿರ್ಧರಿಸಿ, ಆಟೋದವರನ್ನು ಕೇಳಿದರೆ ಅದಕ್ಕೆ 3,500 ರೂ. ನೀಡುವಂತೆ ಕೇಳಿದರು. ಆದರೆ ನನಗೆ 1,000 ರೂ. ನೀಡಲಷ್ಟೇ ಅವಕಾಶವಿತ್ತು. ಹೀಗಾಗಿ ಅದು ಸಾಧ್ಯವಾಗಲಿಲ್ಲ. ಬಳಿಕ ಅನಿವಾರ್ಯವಾಗಿ ಗ್ರೇಡ್ 4 ಕೆಲಸಗಾರರಲ್ಲಿ ಮನವಿ ಮಾಡಿಕೊಂಡು ಮೃತ ದೇಹವನ್ನು 2 ಕಿಲೋ ಮೀಟರ್ ದೂರದ ರೈಲ್ವೆ ನಿಲ್ದಾಣಕ್ಕೆ ಸಾಗಿಸುವ ಕೆಲಸ ಮಾಡಬೇಕಾಯಿತು ಎಂದಿದ್ದಾರೆ. ರೈಲ್ವೆ ನಿಲ್ದಾಣದಿಂದ ಬಾಲಸೋರ್​ಗೆ ಶವ ಸಾಗಿಸಿ ಅಲ್ಲಿ ಅವರ ಸಂಬಂಧಿಕರೆಲ್ಲರೂ ಸೇರಿ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಇದೀಗ ಮಾನವ ಹಕ್ಕು ಆಯೋಗ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT