ದೇಶ

ಸಂದೀಪ್ ಕುಮಾರ್ ಎಎಪಿಗೆ ವಿಶ್ವಾಸದ್ರೋಹವೆಸಗಿದ್ದಾರೆ: ಕೇಜ್ರಿವಾಲ್

Lingaraj Badiger
ನವದೆಹಲಿ: ಸೆಕ್ಸ್ ಸೀಡಿ ಸಂಬಂಧ ಸಚಿವ ಸ್ಥಾನದಿಂದ ವಜಾಗೊಂಡಿರುವ ಸಂದೀಪ್ ಕುಮಾರ್ ಅವರು ಆಮ್ ಆದ್ಮಿ ಪಕ್ಷಕ್ಕೆ ವಿಶ್ವಾಸದ್ರೋಹ ಮಾಡಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಸಮಾಜ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಹೊಂದಿದ್ದ ಸಂದೀಪ್ ಕುಮಾರ್ ಅವರ ಪ್ರಕರಣದಿಂದಾಗಿ ನನಗೆ ತುಂಬಾ ನೋವಾಗಿದೆ. ಸಂದೀಪ್ ಕುಮಾರ್ ಒಟ್ಟಾರೆ ಆಪ್ ಚಳುವಳಿಗೆ ವಿಶ್ವಾಸದ್ರೋಹವೆಸಗಿದ್ದಾರೆ ಎಂದಿದ್ದಾರೆ.
ವಿಡಿಯೋ ಸಂದೇಶದ ಮೂಲಕ ಸಂದೀಪ್ ಕುಮಾರ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದನ್ನು ಸಮರ್ಥಿಸಿಕೊಂಡಿರುವ ಕೇಜ್ರಿವಾಲ್, ತನ್ನ ಮಗ ಮುಂದೆ ಏನಾಗುತ್ತಾನೆ ಎಂಬುದು ಸ್ವತಃ ತಂದೆಗೂ ಗೊತ್ತಿರಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕ ವಿರುದ್ಧವೂ ವಾಗ್ದಾಳಿ ನಡೆಸಿರುವ ದೆಹಲಿ ಸಿಎಂ, 'ಬೇರೆ ಪಕ್ಷಗಳ ರೀತಿ ನಾವು ಯಾವತ್ತೂ ಆರೋಪಿಗಳನ್ನು ರಕ್ಷಿಸಿಲ್ಲ. ನಮ್ಮ ಪಕ್ಷದ ಸಚಿವ ಅಥವಾ ಪಕ್ಷದ ಕಾರ್ಯಕರ್ತರ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಾಧಾರಗಳ ಸಿಕ್ಕ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.
SCROLL FOR NEXT