ಪ್ರಧಾನಿ ಮೋದಿ 
ದೇಶ

ಬೃಹತ್ ಪ್ರಮಾಣದ ನಗದು ಭ್ರಷ್ಟಾಚಾರಕ್ಕೆ ಮೂಲ: ಪ್ರಧಾನಿ ಮೋದಿ

ಬೃಹತ್ ಪ್ರಮಾಣದ ನಗದು ಭ್ರಷ್ಟಾಚಾರಕ್ಕೆ ಮೂಲ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಗದು ರಹಿತ ವಹಿವಾಟುಗಳನ್ನು ಹೆಚ್ಚಿಸುವಂತೆ ಜನತೆಗೆ ಕರೆ ನೀಡಿದ್ದಾರೆ.

ನವದೆಹಲಿ: ಬೃಹತ್ ಪ್ರಮಾಣದ ನಗದು ಭ್ರಷ್ಟಾಚಾರಕ್ಕೆ ಮೂಲ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಗದು ರಹಿತ ವಹಿವಾಟುಗಳನ್ನು ಹೆಚ್ಚಿಸುವಂತೆ ಜನತೆಗೆ ಕರೆ ನೀಡಿದ್ದಾರೆ. 
ನಗದು ರಹಿತ ವಹಿವಾಟುಗಳತ್ತ ಜನತೆ ಬದಲಾವಣೆಯನ್ನು ಮುನ್ನಡೆಸಬೇಕು, 21 ನೇ ಶತಮಾನದಲ್ಲಿ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಜಾಗ ಇಲ್ಲದಂತಾಗಬೇಕು, ಭ್ರಷ್ಟಾಚಾರ ಬೆಳವಣಿಗೆಗೆ ಮಾರಕವಾಗಿದ್ದು, ಬಡವರ, ಮಧ್ಯಮವರ್ಗದವರ ಕನಸುಗಳ ವಿರುದ್ಧವಾಗಿದೆ ಎಂದು ಲಿಂಕ್ಡ್ ಡಾಟ್ ಕಾಮ್ ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ನ.8 ರಂದು ಪ್ರಕಟಿಸಿದ ನೋಟು ನಿಷೇಧ ನಿರ್ಧಾರವನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ ನಗದು ರೂಪದಲ್ಲಿರುವ ಹಣ ಕಪ್ಪುಹಣ ಹಾಗೂ ಭ್ರಷ್ಟಾಚಾರಕ್ಕೆ ಮೂಲವಾಗಿದೆ, ಆದ್ದರಿಂದ ಜನರು ನಗದು ರಹಿತ ವಹಿವಾಟುಗಳತ್ತ ಜನತೆ ಬದಲಾವಣೆಯನ್ನು ಮುನ್ನಡೆಸಬೇಕು, ನಗದು ರಹಿತ ವಹಿವಾಟುಗಳು ಯಶಸ್ವಿಯಾದಲ್ಲಿ ಅದು ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಅಡಿಪಾಯವಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. 
ನಾವು ಮೊಬೈಲ್ ಬ್ಯಾಂಕಿಂಗ್ ಹಾಗೂ ಮೊಬೈಲ್ ವಾಲೆಟ್ ಗಳ ಯುಗದಲ್ಲಿ ಬದುಕುತ್ತಿದ್ದೇವೆ, ಆಹಾರದ ಆರ್ಡರಿಂದ ಹಿಡಿದು ಫರ್ನೀಚರ್, ಟ್ಯಾಕ್ಸಿ ವರೆಗೂ ಎಲ್ಲವೂ ಮೊಬೈಲ್ ನಿಂದಲೇ ಸಾಧ್ಯವಾಗುತ್ತಿದೆ. ದೇಶದ ಜನತೆ ಡೆಬಿಟ್ ಕಾರ್ಡ್ ಹಾಗೂ ಇ-ವಾಲೆಟ್ ಗಳನ್ನು ನಿರಂತರವಾಗಿ ಬಳಸುತ್ತಿದ್ದೀರಿ ಎಂದು ತಿಳಿದಿದೆ. ಆದರೆ ಅದನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ನಗದು ರಹಿತ ವಹಿವಾಟುಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT