ಔರಂಗಾಬಾದ್: ಯುವ ಬಿಜೆಪಿ ಶಾಸಕ ಪ್ರಶಾಂತ್ ಬ್ಯಾಂಬ್ ಅವರಿಂದ ಸ್ಫೂರ್ತಿ ಪಡೆದ ಉದ್ಯಮಿಯೊಬ್ಬರು ಮಗಳ ಅದ್ಧೂರಿ ಮದುವೆ ಬದಲಿಗೆ ಅದೇ ದುಡ್ಡಲ್ಲಿ ಬಡವರಿಗೆ ಮನೆಗಳನ್ನು ಕಟ್ಟಿಕೊಟ್ಟಿರುವ ಅಪರೂಪದ ಘಟನೆ ನಡೆದಿದೆ.
ಮಹಾರಾಷ್ಟ್ರದ ಔರಂಗಾಬಾದ್ ನಿವಾಸಿ ಉದ್ಯಮಿ ಮನೋಜ್ ಮುನ್ನೊಟ್ ಎಂಬುವರು ಅದ್ಧೂರಿಯಾಗಿ ಮಗಳ ಮದುವೆ ಮಾಡಲು ತೀರ್ಮಾನಿಸಿದ್ದರು. ಸುಮಾರು 70 ರಿಂದ 80 ಲಕ್ಷ ರುಪಾಯಿ ವೆಚ್ಚ ಮಾಡಲು ಮುಂದಾಗಿದ್ದ ಮನೋಜ್ ಅವರು ಮಗಳ ಮದುವೆಗೆ ದುಂದುವೆಚ್ಚ ಮಾಡುವ ಬದಲು ಬಡವರಿಗೆ ಮನೆ ಕಟ್ಟಿಕೊಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಅದರಂತೆ ಸುಮಾರು 90 ಮನೆಗಳನ್ನು ನಿರ್ಮಿಸಿ ಬಡವರಿಗೆ ದಾನ ಮಾಡಿ ಮಗಳಿಗೆ ಖುಷಿಯ ಕಾಣಿಕೆ ನೀಡಿದ್ದಾರೆ. ತಂದೆಯನ್ನು ನಿರ್ಧಾರವನ್ನು ಪುತ್ರಿ ಶ್ರೇಯಾ ಸಹ ಮನಸ್ಪೂರ್ತಿಯಾಗಿ ಒಪ್ಪಿದ್ದಾರೆ. ಇತ್ತೀಚೆಗೆ ಶ್ರೀಮಂತರು ತಮ್ಮ ಮಗಳ ಮದುವೆಗಾಗಿ ಕೋಟಿ ಕೋಟಿ ವೆಚ್ಚ ಮಾಡುತ್ತಿದ್ದರೆ ಇಲ್ಲಿ ಉದ್ಯಮಿಯೊಬ್ಬರು ಮನೆಗಳನ್ನು ಕಟ್ಟಿಸಿಕೊಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos