ಕರೋಲ್ ಬಾಗ್ ನಲ್ಲಿ ಪತ್ತೆಯಾದ ಹಣ 
ದೇಶ

ಮುಂದುವರೆದ ದಾಳಿ: ದೆಹಲಿ ಸಿಸಿಬಿಯಿಂದ 3.25 ಕೋಟಿ ಹಳೆಯ ನೋಟು ವಶ, ಐವರ ಬಂಧನ

ಕಪ್ಪುಹಣ ಕುರಿತಂತೆ ದೇಶಾದ್ಯಂತ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ದೆಹಲಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು 3.25 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಅಂತೆಯೇ ಪ್ರಕರಣ ಸಂಬಂಧ ಐವರನ್ನು ಬಂಧಿಸಿದ್ದಾರೆ.

ನವದೆಹಲಿ: ಕಪ್ಪುಹಣ ಕುರಿತಂತೆ ದೇಶಾದ್ಯಂತ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ದೆಹಲಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು 3.25 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.  ಅಂತೆಯೇ ಪ್ರಕರಣ ಸಂಬಂಧ ಐವರನ್ನು ಬಂಧಿಸಿದ್ದಾರೆ.

ಅಪಾರ ಪ್ರಮಾಣದ ಹಣ ಇರುವ ಕುರಿತು ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದೆಹಲಿಯ ಕರೋಲ್ ಬಾಗ್ ನಲ್ಲಿರುವ ಹೊಟೆಲ್ ತಕ್ಷ್ ಇಂಟರ್ ನ್ಯಾಷನಲ್ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಐವರನ್ನು ಬಂಧಿಸಿದ್ದಾರೆ.  ಅಂತೆಯೇ ಬಂಧಿಕರಿಂದ ಸುಮಾರು .325 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಮುಂಬೈ ಮೂಲದ ಅನ್ಸಾರಿ ಅಬುಝರ್, ಫಾಜಲ್ ಖಾನ್, ಅನ್ಸಾರಿ ಅಫನ್, ರಾಜಸ್ತಾನ ಮೂಲದ  ಲಡ್ಡುರಾಮ್ ಮತ್ತು ಜೋಧ್ಪುರದ ಮಹಾವೀರ್ ಸಿಂಗ್ ಎಂದು ಗುರುತಿಸಲಾಗಿದೆ.

ಬಂಧಿರತನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಭಾರಿ ಪ್ರಮಾಣದ ಹಣ ಮುಂಬೈ ಮೂಲದ ಹವಾಲಾ ಏಜೆಂಟ್ ನದ್ದು ಎಂದು ತಿಳಿದುಬಂದಿದ್ದು, ಈತ ಪ್ಯಾಕೇಜಿಂಗ್ ಎಕ್ಸಪರ್ಟ್ ಎಂದು ಹೇಳಲಾಗುತ್ತಿದೆ. ಯಾವುದೇ  ವಸ್ತುವನ್ನು ವಿಮಾನ ನಿಲ್ದಾಣದ ಭದ್ರತಾ ಯಂತ್ರಗಳಲ್ಲಿ ಪತ್ತೆಯಾಗದಂತೆ ಪ್ಯಾಕ್ ಮಾಡುವುದೇ ಈತನ ಕೆಲಸವಂತೆ. ಹಣವಾಗಲೀ ಅಥವಾ ಯಾವುದೇ ರೀತಿಯ ವಸ್ತುಗಳಾಗಲಿ ಏರ್ ಪೋರ್ಟ್ ನಲ್ಲಿರುವ ಎಕ್ಸ್ ರೇ ಯಂತ್ರದಲ್ಲಿ  ಪತ್ತೆಯಾಗದಂತೆ ಏಈತ ಪ್ಯಾಕ್ ಮಾಡುತ್ತಾನೆ. ವಿಶಿಷ್ಟ ಟೇಪ್ ಗಳು ಹಾಗೂ ಕೆಲ ವೈರ್ ಗಳನ್ನು ಬಳಕೆ ಮಾಡಿ ಈ ರೀತಿ ವಿಶಿಷ್ಟವಾಗಿ ಪ್ಯಾಕ್ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT