ಸಂಗ್ರಹ ಚಿತ್ರ 
ದೇಶ

ನೋಯ್ಡಾ ಎಕ್ಸಿಸ್ ಬ್ಯಾಂಕ್ ಮೇಲೆ ಐಟಿ ದಾಳಿ; 20 ನಕಲಿ ಖಾತೆಗಳಲ್ಲಿದ್ದ 60 ಕೋಟಿ ರು. ಹಣ ಪತ್ತೆ!

ನೋಟು ನಿಷೇಧ ಬಳಿಕ ಕಾಳಧನಿಕರ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಅಧಿಕಾರಿಗಳು ನಿರಂತರ ದಾಳಿಯಲ್ಲಿ ತಲ್ಲೀನರಾಗಿದ್ದು, ಬುಧವಾರ ತಡರಾತ್ರಿಯಲ್ಲಿ ನೋಯ್ಡಾದ ಎಕ್ಸಿಸ್ ಬ್ಯಾಂಕ್ ಮೇಲೆ ದಾಳಿ ನಡೆಸಿ 20 ನಕಲಿ ಖಾತೆಗಳಲ್ಲಿದ್ದ ಸುಮಾರು ಕೋಟಿ ರು.ಗಳನ್ನು ಪತ್ತೆ ಮಾಡಿದ್ದಾರೆ.

ನೋಯ್ಡಾ: ನೋಟು ನಿಷೇಧ ಬಳಿಕ ಕಾಳಧನಿಕರ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಅಧಿಕಾರಿಗಳು ನಿರಂತರ ದಾಳಿಯಲ್ಲಿ ತಲ್ಲೀನರಾಗಿದ್ದು, ಬುಧವಾರ ತಡರಾತ್ರಿಯಲ್ಲಿ ನೋಯ್ಡಾದ ಎಕ್ಸಿಸ್ ಬ್ಯಾಂಕ್ ಮೇಲೆ ದಾಳಿ ನಡೆಸಿ 20  ನಕಲಿ ಖಾತೆಗಳಲ್ಲಿದ್ದ ಸುಮಾರು ಕೋಟಿ ರು.ಗಳನ್ನು ಪತ್ತೆ ಮಾಡಿದ್ದಾರೆ.

ಮೂಲಗಳ ಪ್ರಕಾರ ಈ ಎಲ್ಲ 20 ನಕಲಿ ಖಾತೆಗಳನ್ನು ಬಡ ಕೂಲಿ ಕಾರ್ಮಿಕರ ಹೆಸರಲ್ಲಿ ಸೃಷ್ಟಿ ಮಾಡಲಾಗಿದ್ದು, ಕಾಳಧನಿಕರ ಕಪ್ಪುಹಣವನ್ನು ಈ ಖಾತೆಗಳಲ್ಲಿ ನಿಯಮಿತವಾಗಿ ಜಮಾ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.  ಪ್ರಸ್ತುತ ಬ್ಯಾಂಕ್ ಅನ್ನು ಸುತ್ತುವರೆದಿರುವ ಆದಾಯತೆರಿಗೆ ಅಧಿಕಾರಿಗಳು ಬ್ಯಾಂಕ್ ನಲ್ಲಿ ತೀವ್ರ ಶೋಧ ನಡೆಸುತ್ತಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಆಭರಣ ಅಂಗಡಿ ಮಾಲೀಕನೋರ್ವ ತನ್ನ ಬಳಿ ಇದ್ದ ಆಭರಣಗಳನ್ನು 600 ಕೋಟಿ ರು.ಗೆ ಮಾರಿ ಆ ಹಣವನ್ನು ಠೇವಣಿ ಮಾಡಿರುವುದಾಗಿ ಹೇಳಿಕೊಂಡಿದ್ದರು. ಇದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದು ಇದೀಗ  ಅಧಿಕಾರಿಗಳು ನೋಯ್ಡಾ ಎಕ್ಸಿಸ್ ಬ್ಯಾಂಕ್ ಶಾಖೆ ಮೇಲೆ ದಾಳಿ ನಡೆಸಿದ್ದಾರೆ.

ಇತ್ತೀಚೆಗಷ್ಟೇ ದೆಹಲಿಯ ಚಾಂದಿನಿ ಚೌಕ್ ನಲ್ಲಿರುವ ಎಕ್ಸಿಸ್ ಬ್ಯಾಂಕ್ ನಲ್ಲಿ ಒಟ್ಟು 44 ನಕಲಿ ಖಾತೆಗಳಲ್ಲಿ ದಾಖಲೆಗಳಿಲ್ಲದ ಸುಮಾರು 100 ಕೋಟಿ ರು.ಹಣ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಸಿಸ್ ಬ್ಯಾಂಕ್ ತನ್ನ  16 ಸಿಬ್ಬಂದಿಗಳನ್ನು ಅಮಾನತು ಮಾಡಿತ್ತು. ಅಂತೆಯೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳೂ ಕೂಡ ಇಬ್ಬರು ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿದ್ದರು. ಇನ್ನು ಖಾಸಗಿ ಬ್ಯಾಂಕುಗಳಲ್ಲಿನ ಅಕ್ರಮ ಕುರಿತಂತೆ ಕೇಂದ್ರ ಸರ್ಕಾರ  ಈ ಹಿಂದೆಯೂ ಆಕ್ಸಿಸ್ ಬ್ಯಾಂಕ್ ಗೆ ಕೆಲ ಸೂಚನೆಗಳನ್ನು ನೀಡಿತ್ತು. ಆದರೆ ಈ ಸುದ್ದಿಯನ್ನು ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT