ಸಂಗ್ರಹ ಚಿತ್ರ 
ದೇಶ

98 ಕೋಟಿ ಕಪ್ಪುಹಣ ಖಾತೆಗೆ ಜಮೆ ಮಾಡಿದ ಹೈದರಾಬಾದ್ ಉದ್ಯಮಿ ಬಂಧನ

ನೋಟು ನಿಷೇಧ ಬಳಿಕ ಬ್ಯಾಂಕ್ ಖಾತೆಗೆ 98 ಕೋಟಿ ಅಕ್ರಮ ಕಪ್ಪುಹಣವನ್ನು ಜಮೆ ಮಾಡಿದ್ದ ಹೈದರಾಬಾದ್ ಮೂಲದ ಉದ್ಯಮಿಯೋರ್ವನನ್ನು ಬುಧವಾರ ಬಂಧಿಸಲಾಗಿದೆ.

ಹೈದರಾಬಾದ್: ನೋಟು ನಿಷೇಧ ಬಳಿಕ ಬ್ಯಾಂಕ್ ಖಾತೆಗೆ 98 ಕೋಟಿ ಅಕ್ರಮ ಕಪ್ಪುಹಣವನ್ನು ಜಮೆ ಮಾಡಿದ್ದ ಹೈದರಾಬಾದ್ ಮೂಲದ ಉದ್ಯಮಿಯೋರ್ವನನ್ನು ಬುಧವಾರ ಬಂಧಿಸಲಾಗಿದೆ.

ಹೈದರಾಬಾದ್ ನ ಉದ್ಯಮಿ ಕೈಲಾಶ್ ಚಾಂದ್ ಗುಪ್ತಾ (65 ವರ್ಷ) ಎಂಬಾತನನ್ನು ಕೇಂದ್ರೀಯ ಅಪರಾಧ ದಳದ ಪೊಲೀಸರು ಬಂಧಿಸಿದ್ದು, ಕಪ್ಪುಹಣವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆಗೆ ಜಮೆ ಮಾಡಿದ ಆರೋಪದ  ಮೇರೆಗೆ ಈತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಕಪ್ಪುಹಣ ನಿಯಂತ್ರಣ ಕಾಯ್ದೆ, ಹವಾಲಾ, ಮತ್ತು ಕ್ರಿಮಿನಲ್ ಅಪರಾಧಗಳ ಕಾಯ್ದೆಯಡಿಯಲ್ಲಿ ಕೈಲಾಶ್ ಚಾಂದ್ ಗುಪ್ತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಅತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್ 8ರಂದು ನೋಟು ನಿಷೇಧ ನಿರ್ಧಾರ ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ಉದ್ಯಮಿ ಕೈಲಾಶ್ ಚಾಂದ್ ಗುಪ್ತಾ ತಮ್ಮ ಬಳಿ ಇದ್ದ ಸುಮಾರು 98 ಕೋಟಿ ರು. ಕಪ್ಪುಹಣವನ್ನು  ವಿವಿಧ ನಮೂನೆಗಳ ಮೂಲಕ ಬ್ಯಾಂಕಿಗೆ ಜಮೆ ಮಾಡಿದ್ದಾರೆ. ಅನುಮಾನ ಬಾರದಿರಲಿ ಎಂದು ಈ 98 ಕೋಟಿ ರು.ಗಳನ್ನು ನಕಲಿ ದಾಖಲೆ ಸೃಷ್ಟಿಸಿ ನವೆಂಬರ್ 8ಕ್ಕಿಂತ ಮೊದಲೇ ಬ್ಯಾಂಕಿಗೆ ಜಮೆ ಮಾಡಿರುವಂತೆ ಸೃಷ್ಟಿಸಿದ್ದಾರೆ.  ಅಧಿಕಾರಿಗಳ ತನಿಖೆ ವೇಳೆ ಈ ವಿಚಾರ ಬಹಿರಂಗವಾಗಿದ್ದು, ಇದೀಗ ಉದ್ಯಮಿ ಕೈಲಾಶ್ ಚಾಂದ್ ಗುಪ್ತಾ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಂತೆಯೇ ಗುಪ್ತಾ ಅವರ ಸಂಬಂಧಿ ಉದ್ಯಮಿ ನರೇಡಿ ನರೇಂದ್ರ ಕುಮಾರ್ ಅವರನ್ನು ಕೂಡ ಪೊಲೀಸರು ಬಂಧಿಸಿದ್ದು, ನರೇಂದ್ರ ಕುಮಾರ್ ಅವರು ತಮ್ಮ ಭಾವ ಕೈಲಾಶ್ ಚಾಂದ್ ಗುಪ್ತಾ ಅವರನ್ನು ಪೊಲೀಸ್ ಬಂಧನದಿಂದ  ತಪ್ಪಿಸಲು ಅವರನ್ನು ಅಡಗಿಸಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT