ಮೃತ ಶಬ್ಬೀರ್ 
ದೇಶ

ಪೂಜಾ ಕೈಂಕರ್ಯಗಳನ್ನು ನಿಲ್ಲಿಸಿ ಮುಸ್ಲಿಂ ಯುವಕನಿಗೆ ಶ್ರದ್ದಾಂಜಲಿ ಸಲ್ಲಿಸಿದ ಶಿವ ದೇವಾಸ್ಥಾನ

ಗುಂಪು ಘರ್ಷಣೆಯೊಂದರಲ್ಲಿ ಸಾವನ್ನಪ್ಪಿದ ಮುಸ್ಲಿಂ ಯುವಕನೊಬ್ಬಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹಿಂದೂ ದೇವಾಲಯವೊಂದು ಮೂರು ದಿನಗಳ ಕಾಲ ...

ತಿರುವನಂತಪುರ: ಗುಂಪು ಘರ್ಷಣೆಯೊಂದರಲ್ಲಿ ಸಾವನ್ನಪ್ಪಿದ ಮುಸ್ಲಿಂ ಯುವಕನೊಬ್ಬಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹಿಂದೂ ದೇವಾಲಯವೊಂದು ಮೂರು ದಿನಗಳ ಕಾಲ ತನ್ನ ಪೂಜಾ ಕೈಂಕರ್ಯವನ್ನು ನಿಲ್ಲಿಸಿದ ಘಟನೆ ಸಂಭವಿಸಿದೆ.

ಭಾನುವಾರ ಎಂ.ವಿ. ಶಬೀರ್ ಎಂಬ ಯುವಕನನ್ನು ಗುಂಪು ಘರ್ಷಣೆ ವೇಳೆಯಲ್ಲಿ ಗುಂಪೊಂದು ದೊಣ್ಣೆಗಳಿಂದ ಥಳಿಸಿ ಗಾಯಗೊಳಿಸಿತ್ತು. ದಾರಿಯಲ್ಲಿ ಬಿದ್ದಿದ್ದ ಆತನನ್ನು ದಾರಿಹೋಕರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದ. ಈ ಹಲ್ಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಏಟು ತಿನ್ನುತ್ತಿದ್ದ ವ್ಯಕ್ತಿಗೆ ನೆರವಾಗಲಿ ಎಂದು ಘಟನೆಯನ್ನು ಗಮನಿಸಿದ್ದ ವ್ಯಕ್ತಿಯೊಬ್ಬ ಮಾಡಿದ್ದ ವಿಡಿಯೋ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲೂ ಪ್ರಸಾರಗೊಂಡಿತ್ತು.

ಹಲ್ಲೆಯಲ್ಲಿ ಮೃತನಾದ ಶಬೀರ್ ತನ್ನ ಹುಟ್ಟೂರಿನ ಶಿವ ದೇವಾಲಯ ವಾರ್ಷಿಕ ಜಾತ್ರೆ ಸಂಘಟಿಸಲು ಪ್ರತಿವರ್ಷವೂ ಕಾಣಿಕೆ ಸಲ್ಲಿಸುವ ಮೂಲಕ ನೆರವಾಗುತ್ತಿದ್ದ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಶಿವ ದೇವಾಲಯದ ಪದಾಧಿಕಾರಿಗಳು ಶಬೀರ್ ಗೌರವಾರ್ಥ ದೇವಸ್ಥಾನದಲ್ಲಿ ಸೋಮವಾರ ಮತ್ತು ಮಂಗಳವಾರ ಶಂಖ ಮೊಳಗಿಸದೇ ಇರಲು ಮತ್ತು ಗಂಟೆ ಬಾರಿಸದೇ ಇರಲು ತೀರ್ಮಾನಿಸಿದರು. ವಾರದ ಉಳಿದ ಮೂರು ದಿನಗಳಲ್ಲಿ ಬೆಳಗಿನ ದರ್ಶನದ ಬಳಿಕದ ಪೂಜಾ ಕೈಂಕರ್ಯವನ್ನೂ ಸ್ಥಗಿತಗೊಳಿಸಿದರು ಎಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT