ಎಲ್.ಕೆ. ಆಡ್ವಾಣಿ 
ದೇಶ

'ರಾಮಲಲ್ಲಾ’ ಧ್ವಂಸ: ಆಡ್ವಾಣಿ ವಿರುದ್ಧ ಕೇಸ್ ದಾಖಲಿಸಲು ಹಿಂದೂ ಮಹಾಸಭಾ ನಿರ್ಧಾರ

23 ವರ್ಷಗಳ ಹಿಂದೆ 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಜೊತೆಗೆ ಅದರ ಅ‌ಡಿಯಲ್ಲಿದ್ದ `ರಾಮಲಲ್ಲಾ’ ದೇವಾಲಯವೂ ಧ್ವಂಸವಾಗಿದ್ದು, ಇದನ್ನು ಧ್ವಂಸಗೊಳಿಸಿದ...

ನವದೆಹಲಿ: 23 ವರ್ಷಗಳ ಹಿಂದೆ 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಜೊತೆಗೆ ಅದರ ಅ‌ಡಿಯಲ್ಲಿದ್ದ `ರಾಮಲಲ್ಲಾ’ ದೇವಾಲಯವೂ ಧ್ವಂಸವಾಗಿದ್ದು, ಇದನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಹಿಂದೂ ಮಹಾಸಭಾ ನಿರ್ಧರಿಸಿದೆ.
ಬಾಬ್ರಿ ಮಸೀದಿ ಧ್ವಂಸ ಮಾಡಿದ ಸಂದರ್ಭದಲ್ಲಿ ಅದರ ಅ‌ಡಿಯಲ್ಲಿದ್ದ ರಾಮಲಲ್ಲಾ ದೇವಾಲಯವೂ ಧ್ವಂಸವಾಗಿದೆ. ಇದಕ್ಕೆ ಕಾರಣರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ ಮತ್ತು ಉಮಾಭಾರತಿಯ ವಿರುದ್ಧ ಪ್ರಕರಣ ದಾಖಲಿಸಲು ಹಿಂದೂ ಮಹಾಸಭೆ ನಿರ್ಧರಿಸಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬಾಬರಿ ಮಸೀದಿ ಧ್ವಂಸವಾದ 23 ವರ್ಷಗಳ ನಂತರದಲ್ಲಿ ಮೊದಲ ಬಾರಿಗೆ ಹಿಂದೂ ಮಹಾಸಭಾ ರಾಮಲಲ್ಲಾ ದೇವಾಲಯದ ಧ್ವಂಸವೂ ಆಗಿದೆ ಎನ್ನುವ ಮೂಲಕ ಮತ್ತೆ ಪ್ರಕರಣವನ್ನು ಕೆದಕಿದೆ.
ಇದೇ ವೇಳೆ ಮುಸ್ಲಿಂ ಬಾಂಧವರ ಸಹಕಾರವಿಲ್ಲದೆ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾ‌ಡಲು ಸಾಧ್ಯವಿಲ್ಲ ಎಂದೂ ಚಕ್ರಪಾಣಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT