ವೈದ್ಯರು ಔಷಧ ಕಂಪನಿಗಳಿಂದ ಉಡುಗೊರೆ ಪಡೆಯುವುದಕ್ಕೆ ಬೀಳಲಿದೆ ಕಡಿವಾಣ 
ದೇಶ

ವೈದ್ಯರು ಔಷಧ ಕಂಪನಿಗಳಿಂದ ಉಡುಗೊರೆ ಪಡೆಯುವುದಕ್ಕೆ ಬೀಳಲಿದೆ ಕಡಿವಾಣ

ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಲು ಭಾರತೀಯ ವೈದ್ಯ ಮಂಡಳಿ ಮುಂದಾಗಿದೆ.

ನವದೆಹಲಿ: ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಲು ಭಾರತೀಯ ವೈದ್ಯ ಮಂಡಳಿ ಮುಂದಾಗಿದ್ದು ವೈದ್ಯರು ಔಷಧ ಕಂಪನಿಗಳಿಂದ ಉಡುಗೊರೆ ಸ್ವೀಕರಿಸುವುದನ್ನು ಅಕ್ರಮವೆಂದು ಪರಿಗಣಿಸಲು ಮಾರ್ಚಸೂಚಿಗಳನ್ನು ಹಾರಿಗೆ ತರಲಿದೆ.
ತಮ್ಮ ಸಂಸ್ಥೆಯ ಔಷಧಗಳನ್ನು ಮಾರುಕಟ್ಟೆಯಲ್ಲಿ ಉತ್ತೇಜಿಸುವುದಕ್ಕೆ ಔಷಧ ಕಂಪನಿಗಳು ವೈದ್ಯರಿಗೆ ಉಡುಗೊರೆ ನೀಡುವ ಪ್ರವೃತ್ತಿ ಬೆಳೆಸಿಕೊಂಡಿವೆ. ಇದರಿಂದಾಗಿ ವೈದ್ಯಕೀಯ ಕ್ಷೇತ್ರದಲ್ಲೂ ಔಷಧಗಳಿಗೆ ಸಂಬಂಧಿಸಿದಂತೆ ತಲೆದೋರಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ವೈದ್ಯ ಮಂಡಳಿ ಮುಂದಾಗಿದೆ. ಭಾರತೀಯ ವೈದ್ಯ ಮಂಡಳಿಯ ವೃತ್ತಿಪರ ನೀತಿ, ಶಿಷ್ಟಾಚಾರ ಮತ್ತು ನೈತಿಕ ನಿಯಮಾವಳಿ, 2015 ರ ಅಡಿಯಲ್ಲಿ ಹೊಸ ಮಾರ್ಗಸೂಚಿಗಳಲ್ಲಿ ವೈದ್ಯರು ಔಷಧ ಕಂಪನಿಗಳಿಂದ ಉಡುಗೊರೆ ಸ್ವೀಕರಿಸುವುದನ್ನು ಅಕ್ರಮವೆಂದು ಪರಿಗಣಿಸುವ ಅಂಶವನ್ನು ಜಾರಿಗೆ ತರಲಾಗುತ್ತಿದೆ.
ಉಡುಗೊರೆಗಳನ್ನು ಸ್ವೀಕರಿಸುವುದನ್ನು ತಡೆಗಟ್ಟುವ ಮಾರ್ಗಸೂಚಿಗಳು ಈ ಹಿಂದೆಯೇ ಇತ್ತು, ಆದರೆ ಅದನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿರಲಿಲ್ಲವಾದ ಕಾರಣ ಈಗ ಜಾರಿಗೆ ತರಲಾಗುತ್ತಿದೆಯಷ್ಟೆ ಎಂದು ಎಂಸಿಐ ನ ಸದಸ್ಯರೊಬ್ಬರು ಹೇಳಿದ್ದಾರೆ.
5 ಸಾವಿರ- 10 ಸಾವಿರ ರೂ ಮೌಲ್ಯದ ಉಡುಗೊರೆ ಪಡೆದ ವೈದ್ಯರಿಗೆ 3 ತಿಂಗಳ ಕಾಲ
ಪರವಾನಗಿ ರದ್ದುಗೊಳಿಸಲಾಗುತ್ತದೆ. 10 ಸಾವಿರದಿಂದ 50 ಸಾವಿರ ರೂ ಮೌಲ್ಯದ ಉಡುಗೊರೆ ಸ್ವೀಕರಿಸಿದ ವೈದ್ಯರಿಗೆ 6 ತಿಂಗಳು. 50 ಸಾವಿರ ರೂ -1 ಲಕ್ಷ ರೂ ಮೌಲ್ಯದ ಉಡುಗೊರೆ ಪಡೆದ ವೈದ್ಯರಿಗೆ 1 ವರ್ಷ ಹಾಗೂ 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಉಡುಗೊರೆ ಪಡೆದ ವೈದ್ಯರು 1 ವರ್ಷಕ್ಕಿಂತಲೂ ಹೆಚ್ಚು ಅವಧಿಗೆ ಪರವಾನಗಿ ಕಳೆದುಕೊಳ್ಳಲಿದ್ದಾರೆ.     

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT