ಶಾಮ್ಲಿ ಘಟನೆ: ಅಖಿಲೇಶ್ ಸರ್ಕಾರದ ವಿರುದ್ಧ ಕಿಡಿಕಾರಿದ ಬಿಜೆಪಿ 
ದೇಶ

ಶಾಮ್ಲಿ ಘಟನೆ: ಅಖಿಲೇಶ್ ಸರ್ಕಾರದ ವಿರುದ್ಧ ಕಿಡಿಕಾರಿದ ಬಿಜೆಪಿ

ಚುನಾವಣಾ ಗೆಲುವಿನ ಸಂಭ್ರಮಾಚರಣೆ ವೇಳೆ ಹಾರಿಸಿದ ಗುಂಡಿನಿಂದ ಬಾಲಕ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಅಖಿಲೇಖ್ ಯಾದವ್ ಅವರ ಸರ್ಕಾರದ ವಿರುದ್ಧ ಬಿಜೆಪಿ ಸೋಮವಾರ ಕಿಡಿಕಾರಿದ್ದು, ಸಮಾಜವಾದಿ ಪಕ್ಷವನ್ನು ಗೂಂಡಾ ಪಕ್ಷವೆಂದು ಕರೆದಿದೆ...

ನವದೆಹಲಿ: ಚುನಾವಣಾ ಗೆಲುವಿನ ಸಂಭ್ರಮಾಚರಣೆ ವೇಳೆ ಹಾರಿಸಿದ ಗುಂಡಿನಿಂದ ಬಾಲಕ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಅಖಿಲೇಖ್ ಯಾದವ್ ಅವರ ಸರ್ಕಾರದ ವಿರುದ್ಧ ಬಿಜೆಪಿ ಸೋಮವಾರ ಕಿಡಿಕಾರಿದ್ದು, ಸಮಾಜವಾದಿ ಪಕ್ಷವನ್ನು ಗೂಂಡಾ ಪಕ್ಷವೆಂದು ಕರೆದಿದೆ.

ರಾಜ್ಯದಲ್ಲಿ ಗೂಂಡಾಗಳು ಅಧಿಕಾರ ನಡೆಸಿದರೆ ಈ ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಸಮಾಜವಾದಿ ಪಕ್ಷವೊಂದು ಗೂಂಡಾ ಪಕ್ಷ. ಹಾಗಾಗಿಯೇ ಅವರು ಗೆದ್ದಾದ ಗುಂಡುಗಳನ್ನು ಹಾರಿಸಿದ್ದಾರೆ. ಆದರೆ ಸಂಭ್ರಮದ ವೇಳೆ ಹಾರಿದ ಗುಂಡು ಬಾಲಕನ್ನು ಬಲಿತೆಗೆದುಕೊಂಡಿರುವುದು ನಿಜಕ್ಕೂ ದುರ್ಘಟನೆಯಾಗಿದೆ ಎಂದು ಹೇಳಿಕೊಂಡಿದೆ.

ಈ ಕುರಿತಂತೆ ಮಾತಾಡಿರುವ ಬಿಜೆಪಿ ನಾಯಕ ಸಿದ್ದಾರ್ಥ್ ನಾಥ್ ಸಿಂಗ್ ಅವರು, ಗುಂಡಾಗಳನ್ನು ನೋಡಿದಾಗ ಜಂಗಲ್ ರಾಜ್ ರಂತಹ ಫಲಿತಾಂಶ ಹೊರಬರುತ್ತದೆ. ಗೂಂಡಾಗಳ ಅಧಿಕಾರದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ ಇದು ನಿಜಕ್ಕೂ ದುರ್ಘಟನೆಯಾಗಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ನಡೆದ ಪಂಚಾಯತ್ ಚುನಾವಣೆಯೊಂದರಲ್ಲಿ ನಫೀಸಾ ಎಂಬುವವರು ಗೆಲವು ಸಾಧಿಸಿದ್ದರು. ಹೀಗಾಗಿ ಅಲ್ಲಿನ ಆಡಳಿತಾರೂಢ ಸಮಾಜವಾದಿ ಪಕ್ಷದ ಕಾರ್ಯಕರ್ತರು ಗೆಲುವಿನ ಸಂಭ್ರಮಾಚರಣೆಯನ್ನು ಆಚರಿಸುತ್ತಿದ್ದರು. ಈ ವೇಳೆ ಕೈಯಲ್ಲಿದ್ದ ತಮ್ಮ ಬಂದೂಕುಗಳಿಂದ ಆಕಾಶದತ್ತ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದರು. ಆದರೆ ಸಂಭ್ರಮಾಚರಣೆ ವೇಳೆ ಹಾರಿದ ಗುಂಡೊಂದು 9ರ ಹರೆಯದ ಬಾಲಕನೊಬ್ಬನ ಎದೆಗೆ ಹಾರಿ ಆತನ ಪ್ರಾಣವನ್ನು ತೆಗೆದಿತ್ತು, 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT