ಭಾರತೀಯ ಸೇನೆಯಿಂದ ಗೂಢಚಾರಿ ನೇಮಕಕ್ಕೆ ಸೂಚಿಸಿದ್ದ ಲಷ್ಕರ್: ಹೆಡ್ಲಿ ಸ್ಫೋಟಕ ಮಾಹಿತಿ (ಸಾಂದರ್ಭಿಕ ಚಿತ್ರ) 
ದೇಶ

ಭಾರತೀಯ ಸೇನೆಯಿಂದ ಗೂಢಚಾರಿ ನೇಮಕಕ್ಕೆ ಸೂಚಿಸಿದ್ದ ಲಷ್ಕರ್: ಹೆಡ್ಲಿ ಸ್ಫೋಟಕ ಮಾಹಿತಿ

ಭಾರತೀಯ ಸೇನೆಯಿಂದ ಗೂಢಾಚಾರಿಯಾಗಿ ಓರ್ವನನ್ನು ನೇಮಕ ಮಾಡಿಕೊಳ್ಳುವಂತೆ ಲಷ್ಕರ್ ಇ ತೊಬ್ಯಾ ಸಂಘಟನೆ ಸೂಚನೆ ನೀಡಿತ್ತು ಎಂದು ಪಾಕಿಸ್ತಾನ-ಅಮೆರಿಕ ಉಗ್ರ ಹಾಗೂ 26/11ರ ಮುಂಬೈ ದಾಳಿಯ ಪ್ರಮುಖ...

ನವದೆಹಲಿ: ಭಾರತೀಯ ಸೇನೆಯಿಂದ ಗೂಢಾಚಾರಿಯಾಗಿ ಓರ್ವನನ್ನು ನೇಮಕ ಮಾಡಿಕೊಳ್ಳುವಂತೆ ಲಷ್ಕರ್ ಇ ತೊಬ್ಯಾ ಸಂಘಟನೆ ಸೂಚನೆ ನೀಡಿತ್ತು ಎಂದು ಪಾಕಿಸ್ತಾನ-ಅಮೆರಿಕ ಉಗ್ರ ಹಾಗೂ 26/11ರ ಮುಂಬೈ ದಾಳಿಯ ಪ್ರಮುಖ ರುವಾರಿ ಡೇವಿಡ್ ಕೋಲ್‌ಮನ್ ಹೆಡ್ಲಿ ಸ್ಫೋಟಕ ಮಾಹಿತಿಯೊಂದನ್ನು ಸೋಮವಾರ ನಡೆದ ವಿಚಾರಣೆ ವೇಳೆ ಹೊರಹಾಕಿದ್ದಾನೆ.

ಪ್ರಸ್ತುತ ಅಮೆರಿಕದ ಸೆರೆವಾಸದಲ್ಲಿರುವ ಹೆಡ್ಲಿಯನ್ನು ನಿನ್ನೆಯಷ್ಟೇ ಮುಂಬಯಿನ ಟಾಡಾ ವಿಶೇಷ ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೊಳಪಡಿಸಿತ್ತು. ಈ ಸಂದರ್ಭದಲ್ಲಿ ನ್ಯಾಯಾಧೀಶ ಜಿ.ಕೆ.ಸನಪ್ ಅವರ ಮುಂದೆ ಉಗ್ರ ಹೆಡ್ಲಿ ಮುಂಬೈ ದಾಳಿವೇಳೆ ನಡೆದ ಪ್ರತಿಯೊಂದು ವಿಷಯಗಳನ್ನು ವಿವರಿಸಿದ್ದಾನೆ.

ಮುಂಬೈ ದಾಳಿ ಕುರಿತಂತೆ ಪ್ರಮುಖ ವಿಚಾರಗಳನ್ನು ಬಾಯ್ಬಿಟ್ಟಿರುವ ಹೆಡ್ಲಿ ದಾಳಿ ನಡೆಸುವುದಕ್ಕೂ ಮುನ್ನ ಲಷ್ಕರ್-ಇ-ತೊಯ್ಬೊ ಸಂಘಟನೆಯ ನಾಯಕರು ಉಗ್ರರನ್ನು ಒಂದೆಡೆ ಸೇರಿಸಿ ನಂತರ ಭಾರತೀಯ ಸೇನೆಯಲ್ಲೊಬ್ಬರನ್ನು ಗೂಢಾಚಾರಿಯಾಗಿ ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು ಎಂದು ಹೇಳಿದ್ದಾನೆ. ಅಲ್ಲದೆ, ಎಲ್ಇಟಿ ಸಂಘಟನೆಯನ್ನು ನಿರ್ಣಾಮ ಮಾಡುವ ಹಾಗೂ ನಿಷೇಧಿಸುವ ಅಮೆರಿಕ ಸರ್ಕಾರಕ್ಕೆ ಸವಾಲು ಹಾಕುವಂತೆ ಹಫೀಜ್ ಸಯ್ಯೀದ್ ಹಾಗೂ ಝಕಿವುರ್ ರೆಹಮಾನ್ ಲಖ್ವಿಗೆ ನಾನು ಸಲಹೆಯನ್ನು ನೀಡಿದ್ದೆ ಎಂದು ಹೇಳಿದ್ದಾನೆ.

ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವುದಾಗಿ ನನ್ನ ಬಗ್ಗೆ ಮಾಹಿತಿ ತಿಳಿದ ಪತ್ನಿ 2008ರ ಜನವರಿಯಲ್ಲಿ ಇಸ್ಲಾಮಾಬಾದ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಗೆಗೆ ಮಾಹಿತಿ ನೀಡಿಬಿಟ್ಟಿದ್ದಳು.

ಎಲ್ ಇಟಿ, ಜೈಷ್-ಇ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಹಾಗೂ ಹರ್ಕತ್-ಉಲ್-ಮುಜಾಹಿದ್ದೀನ್ ಸಂಘಟನೆಗಳು ಈಗಾಗಲೇ ಒಂದುಗೂಡಿದ್ದು, ಯುನೈಟೆಡ್ ಜೆಹಾದಿ ಕೌನ್ಸಿಲ್'ವೊಂದನ್ನು ರಚಿಸಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದ್ದಾನೆ. ಅಲ್ಲದೆ, ಮುಂಬೈನ ತಾಜ್ ಹೋಟೆಲ್ ನಲ್ಲಿ ನಡೆಯಲಿರುವ ಭಾರತೀಯ ರಕ್ಷಣಾ ವಿಜ್ಞಾನಿಗಳ ಸಭೆಯ ಮೇಲೂ ದಾಳಿ ನಡೆಸಲು ಎಲ್ಇಟಿ ಸದಸ್ಯರು ಯೋಜನೆಯನ್ನು ರೂಪಿಸಿದ್ದಾರೆಂದು ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT