ಡೇವಿಡ್ ಹೆಡ್ಲಿ 
ದೇಶ

ಉಗ್ರರಿಗಾಗಿ ಸಿದ್ದಿ ವಿನಾಯಕ ದೇವಾಲಯದಲ್ಲಿ ಪವಿತ್ರ ದಾರಗಳನ್ನು ಖರೀದಿಸಿದ್ದೆ: ಡೇವಿಡ್ ಹೆಡ್ಲಿ

ಎಲ್ ಇಟಿ ಉಗ್ರರಿಗಾಗಿ ದೇವಾಸ್ಥಾನದಲ್ಲಿ ಮಾರುವ ಕೆಂಪು ಮತ್ತು ಹಳದಿ ಬಣ್ಣ ಮಿಶ್ರಿತ 1- ಪವಿತ್ರ ದಾರಗಳನ್ನು ಖರೀದಿಸಿದ್ದಾಗಿ ಹೆಡ್ಲಿ ಬಾಯಿ ಬಿಟ್ಟಿದ್ದಾನೆ....

ಮುಂಬಯಿ:  ಪಾಕ್ ಮೂಲದ ಉಗ್ರ ಡೇವಿಡ್ ಹೆಡ್ಲಿ ಕೋಲ್ಮನ್ ವಿಚಾರಣೆ ಮುಂದುವರಿದಿದ್ದು  ಮುಂಬೈ ಕೋರ್ಟ್ ವಿಚಾರಣೆಯಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಯನ್ನು ನೀಡಿದ್ದಾನೆ.

ಮುಂಬಯಿನ ಸಿದ್ದಿ ವಿನಾಯಕ ದೇವಾಲಯದಲ್ಲಿ ಎಲ್ ಇಟಿ ಉಗ್ರರಿಗಾಗಿ ದೇವಾಸ್ಥಾನದಲ್ಲಿ ಮಾರುವ ಕೆಂಪು ಮತ್ತು ಹಳದಿ ಬಣ್ಣ ಮಿಶ್ರಿತ 10 ಪವಿತ್ರ ದಾರಗಳನ್ನು ಖರೀದಿಸಿದ್ದಾಗಿ ಹೆಡ್ಲಿ ಬಾಯಿ ಬಿಟ್ಟಿದ್ದಾನೆ.

ಆ ದಾರಗಳನ್ನು ಎಲ್ ಇಟಿ ಉಗ್ರರು ತಮ್ಮ ಕೈಗೆ ಕಟ್ಟಿ ಕೊಳ್ಳುವುದರಿಂದ ಅವರನ್ನು ಯಾರು ಅನುಮಾನಿಸಲಾರರು. ತಮ್ಮ ಗುರುತನ್ನು ಮರೆಮಾಚಿ ಅವರು, ಹಿಂದೂಗಳು ಎಂದು ನಂಬಲು ಈ ದಾರಗಳನ್ನು ಕಟ್ಟಿದ್ದಾಗಿ ತಿಳಿಸಿದ್ದಾನೆ.

ಎಲ್ ಇಟಿ ಮುಖ್ಯಸ್ಥ ಝಾಕಿ ಉರ್ ರೆಹಮಾನ್ 26/11 ದಾಳಿಯ ಬಗ್ಗೆ ಬಹಳ ಜಾಗರೂಕತೆ ವಹಿಸಿದ್ದ. ಪಾಕಿಸ್ತಾನದಲ್ಲಿ ಭಾರತ ನಡೆಸಿದ್ದ ಎಲ್ಲಾ ಬಾಂಬ್ ದಾಳಿಗಳ ಪ್ರತೀಕಾರ ತೀರಿಸಿಕೊಳ್ಳಲು ಇದು ಒಳ್ಳೆಯ ಸಮಯ ಎಂದು ಹೇಳಿದ್ದ. ಆದರೆ 26/11 ದಾಳಿಯ ವೇಳೆ ಮುಂಬಯಿ ವಿಮಾನ ನಿಲ್ದಾಣವನ್ನು ಟಾರ್ಗೆಟ್ ಮಾಡದಿದ್ದರಿಂದ ಲಷ್ಕರ್ -ಇ -ತಯ್ಬಾ ಮುಖ್ಯಸ್ಥರು ಅಸಮಾಧಾನ ವ್ಯಕ್ತ ಪಡಿಸಿದ್ದರು ಎಂದು ಮುಂಬಯಿ ವಿಶೇಷ ಕೋರ್ಟ್ ನಲ್ಲಿ ಹೆಡ್ಲಿ ತಿಳಿಸಿದ್ದಾನೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT