ಸಾಂದರ್ಭಿಕ ಚಿತ್ರ 
ದೇಶ

ಮದುವೆ ಮಂಟಪಕ್ಕೆ ತೂರಾಡುತ್ತಾ ಬಂದ ವರ: ಮದುವೆ ಮುರಿದ ವಧು

ಕುಡಿದು ಕುಡಿದು ನಿಶಕ್ತನಾಗಿ ನೆಟ್ಟಗೆ ನಿಲ್ಲಲು ಸಾಧ್ಯವಾಗದೆ, ಶಕ್ತಿಯಿಲ್ಲದೇ ತೂರಾಡುತ್ತಿದ್ದ ವರನನ್ನು ವರಿಸಲು ಯುವತಿ ನಿರಾಕರಿಸಿ ಮದುವೆ ಮುರಿದ ಘಟನೆ ...

ಕಾನ್ಪುರ:  ಕುಡಿದು ಕುಡಿದು ನಿಶಕ್ತನಾಗಿ ನೆಟ್ಟಗೆ ನಿಲ್ಲಲು ಸಾಧ್ಯವಾಗದೆ, ಶಕ್ತಿಯಿಲ್ಲದೇ ತೂರಾಡುತ್ತಿದ್ದ ವರನನ್ನು ವರಿಸಲು ಯುವತಿ ನಿರಾಕರಿಸಿ ಮದುವೆ ಮುರಿದ ಘಟನೆ ಕಾನ್ಪುರದ ಫಿರೋಜಾ ಬಾದ್ ನಲ್ಲಿ ನಡೆದಿದೆ.

ಮದುವೆ ನಡೆಸಲು ಸಮುದಾಯದ ಹಿರಿಯರು ನಡೆಸಿದ ಪಂಚಾಯಿತಿಯೂ ವಿಫಲವಾಗಿದೆ. ಒಂದು ವೇಳೆ ಕುಡುಕನನ್ನೇ ಮದುವೆಯಾಗಲು ಬಲವಂತ ಮಾಡಿದರೆ ಪ್ರಾಣ ಕಳೆದುಕೊಳ್ಳುವುದಾಗಿ ವಧು ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಹುಡುಗನ ಕಡೆಯವರು ಮದುವೆ ಮನೆಯಿಂದ ಹೊರನಡೆದಿದ್ದಾರೆ. ಹುಡುಗನಿಗೆ ನೆಟ್ಟಗೆ ನಿಲ್ಲಲು ಆಗುತ್ತಿರಲಿಲ್ಲ. ಹಾರ ಹಿಡಿದುಕೊಂಡು, ಮಂಟಪಕ್ಕೆ ಬರುವ ಶಕ್ತಿಯೂ ಇಲ್ಲದೇ ತೂರಾಡುತ್ತಿದ್ದ,'ಎಂದು ವಧುವಿನ ಸಂಬಂಧಿ ಹೇಳಿದ್ದಾರೆ.

ತೂರಾಡುತ್ತಿದ್ದ ವರನನ್ನು ಕೆಟ್ಟ ಸ್ಥಿತಿಯಲ್ಲಿ ನೋಡಿದ ಹುಡುಗಿ, ಮನೆಯವರಿಗೆ ತನ್ನ ನಿರ್ಧಾರ ತಿಳಿಸಿದಳು. ಆಕೆಯ ಮನವೊಲಿಸಲು ಮನೆಯವರು ಯತ್ನಿಸಿದಾಗ, ಆತ್ಮಹತ್ಯೆಯ ಬೆದರಿಕೆ ಒಡ್ಡಿದಳು. ಕೊನೆಗೆ ಎರಡೂ ಕಡೆಯ ಹಿರಿಯರು ಮದುವೆ ನಿಲ್ಲಿಸಲು ನಿರ್ಧರಿಸಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT