ಸಾಂದರ್ಭಿಕ ಚಿತ್ರ 
ದೇಶ

ದಾದಿಯರ ಮುಷ್ಕರ; ಆಸ್ಪತ್ರೆ ಕೆಲಸದಲ್ಲಿ ಏರುಪೇರು

ತಮ್ಮ ಸಂಬಳವನ್ನೂ ಏಳನೇ ವೇತನ ಆಯೋಗದಡಿಯಲ್ಲಿ ಸೇರಿಸಬೇಕು ಎಂಬ ಬೇಡಿಕೆಯೊಡ್ಡಿ ಸರ್ಕಾರಿ ಆಸ್ಪತ್ರೆಗಳ ದಾದಿಯರು ಸಾಮೂಹಿಕ ಮುಷ್ಕರ ಹೂಡಿದ...

ನವದೆಹಲಿ: ತಮ್ಮ ಸಂಬಳವನ್ನೂ ಏಳನೇ ವೇತನ ಆಯೋಗದಡಿಯಲ್ಲಿ ಸೇರಿಸಬೇಕು ಎಂಬ ಬೇಡಿಕೆಯೊಡ್ಡಿ ಸರ್ಕಾರಿ ಆಸ್ಪತ್ರೆಗಳ ದಾದಿಯರು ಸಾಮೂಹಿಕ ಮುಷ್ಕರ ಹೂಡಿದ ಕಾರಣ ಶುಕ್ರವಾರ ಆಸ್ಪತ್ರೆಯ ಕೆಲಸಗಳು ಏರು ಪೇರಾಗಿವೆ. ದಾದಿಯರು ಮುಷ್ಕರದಿಂದಾಗಿ ಈ ಮೊದಲೇ ನಿಗದಿಯಾಗಿದ್ದ 250ಕ್ಕೂ ಹೆಚ್ಚು ಸರ್ಜರಿಗಳನ್ನು ಇನ್ನೊಂದು ದಿನಕ್ಕೆ ನಿಗದಿ ಮಾಡಲಾಗಿದೆ. 
ಆರೋಗ್ಯ ಸಚಿವಾಲಯ ನಮ್ಮನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ದಾದಿಯರಂ ಸಂಘಟನೆ ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿದ್ದು, ಶುಕ್ರವಾರ ಸಾಮೂಹಿಕವಾಗಿ ರಜೆ ಹಾಕಿ ದಾದಿಯರು ಹೊರ ನಡೆದಿದ್ದರು.
ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಿಂದ ಸಿಕ್ಕ ಮಾಹಿತಿ ಪ್ರಕಾರ 80 ಸರ್ಜರಿಗಳನ್ನು ಮರು ನಿಗದಿ ಪಡಿಸಲಾಗಿದ್ದು, ಸಫ್‌ದಾರ್ಗಂಜ್ ಆಸ್ಪತ್ರೆಯಲ್ಲಿ 50 ಸರ್ಜರಿಗಳನ್ನು ಮುಂದೂಡಲಾಗಿದೆ.
ದಾದಿಯರ ಮುಷ್ಕರದಿಂದಾಗಿ ಆಸ್ಪತ್ರೆಯ ಕೆಲಸಗಳಲ್ಲಿ ಏರುಪೇರಾಗಿದೆ ಎಂದು ಆರ್‌ಎಂಎಲ್ ಆಸ್ಪತ್ರೆಯ ಹಿರಿಯ ಸರ್ಜನ್ ಸಮೀರ್ ಪುರ್‌ಕ್ಯಸ್ಥ ಹೇಳಿದ್ದಾರೆ.
ಏಳನೇ ವೇತನ ಆಯೋಗದ ಶಿಫಾರಸಿನಂತೆ ತಮಗೆ ನರ್ಸಿಂಗ್ ಭತ್ಯೆ, ರಿಸ್ಕ್ ಭತ್ಯೆ ಮತ್ತು ರಾತ್ರಿ ಪಾಳಿ ಭತ್ಯೆಯನ್ನು ನೀಡಬೇಕೆಂದು ದಾದಿಯರು ಮುಷ್ಕರ ನಡೆಸುತ್ತಿದ್ದಾರೆ. ಆದರೆ ಇವರ ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿಕೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT