ಮಾವೋವಾದಿ ಎನ್ ಕೌಂಟರ್ 
ದೇಶ

ಪೊಲೀಸ್ ಎನ್ಕೌಂಟರ್: ಮಾವೋವಾದಿ ತೆಲಂಗಾಣ ಕಾರ್ಯದರ್ಶಿ ಹರಿಭೂಷಣ್ ಹತ್ಯೆ?

ಛತ್ತೀಸ್ ಗಢ-ತೆಲಂಗಾಣ ಗಡಿಯಲ್ಲಿ ಇಂದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 8 ಮಾವೋವಾದಿಗಳು ಮೃತಪಟ್ಟಿದ್ದು, ಆ ಪೈಕಿ ತೆಲಂಗಾಣ ರಾಜ್ಯ...

ಖಮ್ಮಂ: ಛತ್ತೀಸ್ ಗಢ-ತೆಲಂಗಾಣ ಗಡಿಯಲ್ಲಿ ಇಂದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 8 ಮಾವೋವಾದಿಗಳು ಮೃತಪಟ್ಟಿದ್ದು, ಆ ಪೈಕಿ ತೆಲಂಗಾಣ ರಾಜ್ಯ ಮಾವೋವಾದಿ ಕಾರ್ಯದರ್ಶಿ ಯಪ್ಪ ನಾರಾಯಣ ಅಲಿಯಾಸ್ ಹರಿ ಭೂಷಣ್ ಮೃತಪಟ್ಟಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮೃತ ಮಾವೋವಾದಿಗಳ ಗುರುತು ಪತ್ತೆ ಹಚ್ಚಿದ ನಂತರ ಅಧಿಕೃತ ಮಾಹಿತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹರಿ ಭೂಷಣ್ ವಾರಂಗಲ್ ಜಿಲ್ಲೆಯ ಕೊತ್ತಗುಡ ಮಂಡಲದ ಮಾಡಿಗುಡೆಮ್ ಹಳ್ಳಿಯವರಾಗಿದ್ದು, ಕರೀಂನಗರದಲ್ಲಿ ಮಾವೋವಾದಿ ಚುಟುವಟಿಕೆಯಲ್ಲಿ ತೊಡಗಿದ್ದ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ತೆಲಂಗಾಣ-ಛತ್ತೀಸ್ ಗಢ ಗಡಿಯಲ್ಲಿರುವ ಬಿಜಾಪೂರ್ ಜಿಲ್ಲೆಯ ಬಟೇಟಂಗ್ ಗ್ರಾಮದ ಬಳಿಯಲ್ಲಿ ಈ ಎನ್ ಕೌಂಟರ್ ನಡೆದಿದ್ದು, 8 ಮಂದಿ ಮಾವೋವಾದಿಗಳು  ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗ್ರಾಮದ ಸಮೀಪವಿರುಣ ಅರಣ್ಯದಲ್ಲಿ ನಕ್ಸಲರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ತೆಲಂಗಾಣ ಪೊಲೀಸರು ಛತ್ತೀಸ್ ಗಢ  ಪೊಲೀಸರ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದರು.

ಈ ವೇಳೆ ಪೊಲೀಸರ ಬರುವಿಕೆಯನ್ನು ಮನಗಂಡ ಮಾವೋವಾದಿಗಳು ಏಕಾಏಕಿ ಪೊಲೀಸರತ್ತ ಮನಸೋ ಇಚ್ಛೆ ಗುಂಡಿನ ಸುರಿಮಳೆಗರೆದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು  ಹಾರಿಸಿದಾಗ 8 ಮಂದಿ ಮಾವೋವಾದಿಗಳು ಹತರಾದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಪ್ರದೇಶದಲ್ಲಿ 9 ಶಸ್ತ್ರಾಸ್ತಗಳು ಮತ್ತು ಬುಲೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಈ ಪೈಕಿ ಎನ್ ಎಲ್ ಆರ್ ರೈಫಲ್, ಎಕೆ47 ಬಂದೂಕು ಮತ್ತು ಕೆಲ ಸ್ವದೇಶಿ ಬಾಂಬ್ ಗಳು ಸೇರಿವೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT